ಬೆಳಗಾವಿ
ಬೆಳಗಾವಿ ಜಿಲ್ಲೆ ಕಿತ್ತೂರು ಕೋಟೆ ಆವರಣದಲ್ಲಿ ನಡೆದ 200 ನೇ ಕಿತ್ತೂರು ವಿಜಯೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಒಂದು ಪರೋಕ್ಷ ಟಾಕವಾರ್ ನಡೆಯಿತು.
ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಭಾಷಣದಲ್ಲಿ ಗುಲಾಮರಿಗಿ ಮಾನಸಿಕತೆಯಿಂದ ಜನರು ಹೊರ ಬರಬೇಕಿದೆ. ದೇಶಕ್ಕೆ ಗುಲಾಮಿತನದ ಮಾನಸಿಕತೆ ಅಂಟಿಕೊಂಡಿದೆ. ಆ ಗುಲಾಮಿತನದ ಆಡಳಿತ ವ್ಯವಸ್ಥೆ, ಮಾನಸಿಕತೆ ಬೆಳೆಸುವ ಸ್ಥಿತಿಯನ್ನ ನಾವು ಕಾಣುತ್ತಿದ್ದೇವೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಆಡಳಿತವನ್ನ ಟೀಕಿಸಿದರು.
ಕಾಗೇರಿಗೆ ತೀರುಗೇಟು ಕೊಟ್ಟ ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ ಮಾತನಾಡಿ, ಬೆಳಗಾವಿ ಜಿಲ್ಲೆಗೆ ಗಂಡುಮೇಟ್ಟಿದ ನಾಡು ಅಂತಾರೆ. ಅದಕ್ಕೆ ಕಾರಣ ಈ ಕಿತ್ತೂರು ನಾಡು. ಯಾವತ್ತು ಗುಲಾಮರಿಗಿ ಬಗ್ಗಿ ನಡೆದಂತಹ ಮಣ್ಣಲ್ಲಾ ಇದು. ಅದನ್ನ ಸ್ವಾತಂತ್ರ್ಯ ಪೂರ್ವದಲ್ಲೇ ಸಾಬೀತು ಪಡೆಸಿದ್ದೇವೆ. ನಮ್ಮ ಬ್ಲಡ್ ನಲ್ಲಿಯೇ ಬಗ್ಗುವಂತಹದಿಲ್ಲಾ. 200 ವರ್ಷಗಳ ಹಿಂದೆ ಇದ್ದದ್ದು ಕಿಚ್ಚು ಈಗಲೂ ನಮ್ಮಲ್ಲಿದೆ. ಒಂದಿಷ್ಟು ಜನರ ಜಿನ್ಸ್ ಚೇಂಜ್ ಆಗಿವೆ ಎಂದು ಹೇಳೋ ಮೂಲಕ ಕಾಗೇರಿಗೆ ಟಾಂಗ್ ಕೊಟ್ಟರು.