Karunadu Studio

ಅಪರಾಧ ಬೆಳಗಾವಿ

ಬಾಣಂತಿ ಸಾವು ಪ್ರತಿಭಟನೆ; ಕುಟುಂಬಸ್ಥರ ಮನವೊಲಿಸಿದ ಅಧಿಕಾರಿಗಳು

ಬೆಳಗಾವಿ

ಬೀಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಂತಿ ಶವವಿಟ್ಟು ನಡೆಸುತ್ತಿದ್ದ ಪ್ರತಿಭಟನೆ ಅಂತ್ಯವಾಗಿದೆ.

ಬೆಳಗಾವಿ ಬೀಮ್ಸ್ ಆವರಣದ ಹೆರಿಗೆ ವಿಭಾಗದ ಮುಂದೆ ಕುಟುಂಬಸ್ಥರು ಪ್ರತಿಭಟನೆ ಮಾಡುತ್ತಿದ್ದರು.

ಬೀಮ್ಸ್ ನಿರ್ದೇಶಕ ಡಾ. ಅಶೋಕ ಶೆಟ್ಟಿ, ಎಡಿಸಿ ವಿಜಯಕುಮಾರ ಹೊನಕೇರಿ ಪ್ರತಿಭಟನಾಕಾರರ ಮನವೊಲಿಸಲು ಯಶಸ್ವಿಯಾಗಿದ್ದಾರೆ.

ಬಾಣಂತಿ ಕಲ್ಪನಾ ಲಮಾಣಿ ಸಾವಿನ ತನಿಖೆ ಮಾಡ್ತಿವಿ. ಈಗಾಗಲೇ ಎಂಎಲಸಿ ಮಾಡಿಸಿದ್ದೇವೆ. ಬಾಣಂತಿ ಸಾವಿನ ತನಿಖೆಗೆ ಒಂದು ಕಮಿಟಿ ರಚಿಸಿ ವರದಿ ತರೆಸಿ ಕ್ರಮ ಜರುಗಿಸುತ್ತೇವೆ ಎಂದು ಬೀಮ್ಸ್ ನಿರ್ದೇಶಕ ಡಾ. ಅಶೋಕ ಶೆಟ್ಟಿ ಆಶ್ವಾಸನೆ ನೀಡಿದ್ದಾರೆ.

ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುತ್ತೇವೆ. ಮೃತಳ ಪತಿಗೆ ಬೀಮ್ಸ್ ಆಸ್ಪತ್ರೆಯಲ್ಲೇ ಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಿಸುವುದಾಗಿ ಬೀಮ್ಸ್ ನಿರ್ದೇಶಕ ಭರವಸೆ ಕೊಟ್ಟಿದ್ದಾರೆ.

ಹಿರಿಯ ಅಧಿಕಾರಿಗಳ ಭರವಸೆಗೆ ಕುಟುಂಬಸ್ಥರು ಪ್ರತಿಭಟನೆ ಕೈಬಿಟ್ಟರು.

ADMIN

About Author

Leave a comment

Your email address will not be published. Required fields are marked *

You may also like

ಅಪರಾಧ ಕರ್ನಾಟಕ ಕ್ರಿಮಿನಲ್

“ಗಾಂಜಾ‌ ಬೆಳೆದಿದ್ದ ಆರೋಪಿಗಳ ಬಂಧನ”

ಅಕ್ರಮವಾಗಿ ಹೊಲದಲ್ಲಿ ಗಾಂಜಾ ಬೆಳೆದಿದ್ದ ಆರೋಪಿಗಳನ್ನು ಪ್ರತ್ಯೇಕ ಪ್ರಕರಣದಲ್ಲಿ ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದ ಹೇಮರೆಡ್ಡಿ ಯಲ್ಲಪ್ಪ ರೆಡ್ಡಿ‌ ಎಂಬಾತ
ಅಪರಾಧ ಉತ್ತರ ಕರ್ನಾಟಕ ಕರ್ನಾಟಕ ಕ್ರಿಮಿನಲ್

ಅಕ್ರಮ ಚಿನ್ನ ಸಾಗಾಟ- ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಶ, ವ್ಯಕ್ತಿ ಬಂಧನ.!

ಅಕ್ರಮವಾಗಿ ಯಾವುದೇ ದಾಖಲೆಗಳಿಲ್ಲದೆ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭವರಣ ವಶಪಡಿಸಿಕೊಳ್ಳಲಾಗಿದೆ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ಹೇಳಿದರು. ಹುಬ್ಬಳ್ಳಿಯಲ್ಲಿ
Translate »