Karunadu Studio

ಉತ್ತರ ಕರ್ನಾಟಕ ಬೆಳಗಾವಿ

ಮುಂದಿನ ಚುನಾವಣೆಯಲ್ಲಿ ಸುಮ್ಮನೆ ಕುರುವುದಿಲ್ಲ; ರಮೇಶ ಜಾರಕಿಹೊಳಿ‌

ಬೆಳಗಾವಿ

ಮುಂದೆ ಬರುವ ಚುನಾವಣೆಗೆ ನಾನು ಸುಮ್ಮನೆ ಕುಡಲ್ಲ ಅಂತಾ ಸ್ವಾಮೀಜಿಯವರಿಗೆ ಹೇಳಿದ್ದೇನೆ ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ‌ ಹೇಳಿದರು.

ಗೋಕಾಕನಲ್ಲಿ ಭಗೀರಥ ಮೂರ್ತಿ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ 74 ಪರ್ಸಂಟ್ ಜನರಿಗೆ ನ್ಯಾಯ ಸಿಗಬೇಕು. ಇಲ್ಲವಾದ್ರೇ ನಾನು ಬಂಡಾಯ ಏಳುತ್ತೇನೆ ಎಂದು ರಮೇಶ ಜಾರಕಿಹೊಳಿ‌ ಎಚ್ಚರಿಕೆ ನೀಡಿದರು.

ನಮ್ಮ ಸರ್ಕಾರ ಇರಲಿ ಬೇರೆ ಯಾವ ಸರ್ಕಾರ ಇದ್ರೂ ಕೆಡುವುದೇ. 2028ಕ್ಕೆ ನಾನು ಸುಮ್ಮನೆ ಕುಡುವುದಿಲ್ಲ ಎಂದು ರಮೇಶ ಜಾರಕಿಹೊಳಿ‌ ಹೇಳಿದರು.

ಈ ವರೆಗೂ ನಮಗೆ ಎಲ್ಲರೂ ಮೋಸ ಮಾಡಿದ್ದಾರೆ. ಕುರುಬರು, ಉಪ್ಪಾರ, ಸುಣಗಾರ ಸಮಾಜದವರು ಅಧಿಕಾರಕ್ಕೆ ಬರಲಿ. ಒಬಿಸಿಗಿಂತ ಎಸ್‌ಟಿಗೆ ಹೆಚ್ಚಿನ ಪ್ರಮಾಣ ಬರಬೇಕು ಅನ್ನೋದು ನಮ್ಮ ಕಂಡಿಷನ್ ಎಂದು ಹೇಳಿದರು.

ನನಗೆ ಒಬ್ಬನಿಗೆ ಶಕ್ತಿ ಸಾಲುತ್ತಿಲ್ಲ ನೀವು ಕೈ ಜೋಡಿಸಿ ಅಂತಾ ಸ್ವಾಮೀಜಿ ಅವರಿಗೆ ಕೇಳಿದ್ದೇನೆ. ಈಗ ಭಾರತೀಯ ಜನತಾ ಪಾರ್ಟಿಯಲ್ಲಿ ನಾನಿದ್ದೇನೆ ಅನಿವಾರ್ಯವಾಗಿ ಬಿಜೆಪಿಗೆ ಹೋಗಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಐದು ಬಾರಿ ಶಾಸಕ ಬಿಜೆಪಿಯಲ್ಲಿ ಎರಡು ಬಾರಿ ಶಾಸಕ ಆಗಿದ್ದೇನೆ ಎಂದು ಹೇಳಿದರು.

ನನಗೇನೂ ಕಾಂಗ್ರೆಸ್ ಕೆಟ್ಟದ್ದು ಮಾಡಿರಲಿಲ್ಲ. ಬಿಡಲು ಕಾರಣ ಒಬ್ಬ ಮನುಷ್ಯನಿಂದ. ಎಲ್ಲರೂ ಸೇರಿ ಷಡ್ಯಂತ್ರ ಮಾಡಿದ್ದರಿಂದ ಹೊರಗೆ ಬಂದೆ. ಬಿಜೆಪಿಯಲ್ಲಿ ಬೆಳೆಯುತ್ತಿದ್ದಂತೆ ಅಲ್ಲಿ ಒಂದು ಷಡ್ಯಂತ್ರ ನನ್ನ ವಿರುದ್ಧ ಮಾಡಿದ್ರೂ. ಅದಕ್ಕೂ ನಾನು ಹೆದರಲಿಲ್ಲ. ಸ್ವಾಮೀಜಿಯವರು ರಮೇಶ ನೀನು ಅಂತಾ ತಡೆದಿದ್ದೀಯಾ ಅಂದ್ರು ಎಂದು ಶಾಸಕ ರಮೇಶ ಜಾರಕಿಹೊಳಿ‌ ಹೇಳಿದರು.

karunadustudioeditor

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಉತ್ತರ ಕರ್ನಾಟಕ

ಫೈ ಓವರ್ ಕಾಮಗಾರಿಯ ರಾಡ್ ಬಿದ್ದು ಗಾಯಗೊಂಡಿದ್ದ ನಾಭಿರಾಜ್ ಸಾವು: ಸಾವಿನಲ್ಲೂ ಸಾರ್ಥಕತೆ ಮೆರೆದ ಎಎಸ್ಐ…

  • September 16, 2024
ಹುಬ್ಬಳ್ಳಿ ಫೈ ಓವರ್‌ ಕಾಮಗಾರಿ ವೇಳೆ ಕಬ್ಬಿಣದ ರಾಡ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎ ಎಸ್ ಐ ನಾಭಿರಾಜ್ ದಯಣ್ಣವರ ( 59) ಚಿಕಿತ್ಸೆ ಫಲಕಾರಿಯಾಗದೆ ಕಿಮ್ಸ್
Translate »