Karunadu Studio

ತೆಲಗು ಚಿತ್ರರಂಗ ಸುದ್ದಿ ಹಿಂದಿ ಚಿತ್ರರಂಗ

ನಟ ಅಲ್ಲು ಅರ್ಜುನ ಅರೇಸ್ಟ್‌

ಹೈದರಾಬಾದ್‌

ಹೈದರಾಬಾದ್‌ ನ ಚಿಕ್ಕಡಪಲ್ಲಿ ಪೊಲೀಸರು ನಟ ಅಲ್ಲು ಅರ್ಜುನ ಅವರನ್ನ ವಿಚಾರಣೆ ಸಲುವಾಗಿ ಪೊಲೀಸ್‌ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ಡಿಸೆಂಬರ್‌ 4ರಂದು ಪುಷ್ಪಾ 2 ಚಲನಚಿತ್ರದ ಮೊದಲ ದಿನದ ಪ್ರದರ್ಶನದ ಸಮಯದಲ್ಲಿ ಸಂಧ್ಯಾ ಥಿಯೇಟರ್‌ ಬಳಿ ರಾತ್ರಿ 9 ಗಂಟೆ ವೇಳೆ ಉಂಟಾದ ನುಕು ನುಗ್ಗಲಿನ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು.

ಪುಷ್ಪಾ 2 ಚಲನಚಿತ್ರದ ಬಿಡುಗಡೆಯ ಮೊದಲ ದಿನ ಚಿತ್ರವನ್ನ ನೋಡಲು ರೇವತಿ ಕುಟುಂಬ ಸಮೇತ ಸಂಧ್ಯಾ ಥಿಯೇಟರ್‌ ಗೆ ಬಂದಿದ್ದರು. ಮೊದಲ ದಿನದ ಪ್ರದರ್ಶನವಾದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಚಲನಚಿತ್ರದ ಪೆಚಾರಕ್ಕಾಗಿ ನಟ ಅಲ್ಲು ಅರ್ಜುನ ಸಹ ಸಂಧ್ಯಾ ಥಿಯೇಟರ್‌ ಗೆ ರಾತ್ರಿ 9 ಗಂಟೆ ಸುಮಾರಿಗೆ ಬರ್ತಾರೆ. ಅವರನ್ನ ನೋಡಲು ಸಾವಿರಾರು ಅಭಿಮಾನಿಗಳು ಅಲ್ಲಿ ಮುತ್ತಿಕ್ಕಿ ಕೊಳ್ತಾರೆ. ಆಗ ಅಲ್ಲಿ ನುಕು ನುಗ್ಗಲು ಉಂಟಾಗಿದೆ. ಜನ ಒಬ್ಬರನ್ನೊಬ್ಬರು ತಳ್ಳಾಡುತ್ತಾರೆ. ಕಾಲ್ತುಳಿತದ ಘಟನೆಯಲ್ಲಿ ರೇವತಿ (35) ಎನ್ನುವ ಮಹಿಳೆ ಸಾವನ್ನಪ್ಪಿದ್ದರು. ಅವರ ಮಗನಿಗೆ ತೀವ್ರತರನಾದ ಗಾಯಗಳಾಗಿತ್ತು.

ಈ ಕುರಿತಾಗಿ ಮೃತರ ಪತಿ ಪ್ರಕರಣವನ್ನ ದಾಖಲು ಮಾಡಿದ್ದರು. ಪ್ರಕರಣದ ವಿಚಾರಣೆ ಸಲುವಾಗಿ ಚಿಕ್ಕಡಪಲ್ಲಿ ಪೊಲೀಸರು ನಟ ಅಲ್ಲು ಅರ್ಜುನ ಅವರನ್ನ ಪೊಲೀಸ್‌ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ನಟ ಅಲ್ಲು ಅರ್ಜುನ ಅವರ ವಿಚಾರಣೆ ನಡೆಯುತ್ತಿದೆ.

karunadustudioeditor

About Author

Leave a comment

Your email address will not be published. Required fields are marked *

You may also like

ಕರ್ನಾಟಕ ಸುದ್ದಿ

ಮಾಜಿ ಶಾಸಕ ಜಯಣ್ಣ ಅವರ ನಿಧನ; ಡಿಸಿಎಂ ಡಿ.ಕೆ. ಶಿವಕುಮಾರ ಸಂತಾಪ

ಬೆಂಗಳೂರು ಕಾಂಗ್ರೆಸ್ ಮಾಜಿ ಶಾಸಕ ಜಯಣ್ಣ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾದ ಜಯಣ್ಣ ಅವರ ನಿಧನದ ಸುದ್ದಿ
ಕರ್ನಾಟಕ ಸುದ್ದಿ

ಮಾಜಿ ಶಾಸಕ ಆರ್.ನಾರಾಯಣ ಅವರ ನಿಧನ; ಡಿಸಿಎಂ ಡಿ.ಕೆ. ಶಿವಕುಮಾರ ಸಂತಾಪ

ಬೆಂಗಳೂರು ಕಾಂಗ್ರೆಸ್ ಮಾಜಿ ಶಾಸಕರಾದ ಆರ್.ನಾರಾಯಣ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಸಂತಾಪ ಸೂಚಿಸಿದ್ದಾರೆ. ಆರ್.ನಾರಾಯಣ ಅವರ ನಿಧನದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ.
Translate »