ಬೆಳಗಾವಿ
ಜಮ್ಮು-ಕಾಶ್ಮೀರ್ ಪುಂಚನಲ್ಲಿ ಆರ್ಮಿ ವಾಹನ ಅಪಘಾತವಾಗಿ ಐವರು ಯೋಧರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಮ್ಮು-ಕಾಶ್ಮೀರ್ ದ ಪುಂಚ್ ಪ್ರದೇಶದಲ್ಲಿ ಮಂಜುಗಡ್ಡೆಯಲ್ಲಿ ಜಾರಿ 300 ಅಡಿ ಕಂದಕಕ್ಕೆ ಆರ್ಮಿ ವಾಹನ ಬಿದ್ದಿದೆ. ವಾಹನದಲ್ಲಿದ್ದ ಮರಾಠಾ ರೆಜಮೇಂಟನ ಐವರು ಯೋಧರು ಸಾವನ್ನಪ್ಪಿದ್ದಾರೆ.
ವಾಹನ ಅಪಘಾತದಲ್ಲಿ ಸಾವನ್ನಪ್ಪಿದ ಐವರಲ್ಲಿ ಮೂವರು ಕರ್ನಾಟದ ಯೋಧರು ಇದ್ದರು. ಬೆಳಗಾವಿಯ ಪಂತ ಬಾಳೆಕುಂದ್ರಿಯ ಧಯಾನಂದ ತಿರಕನ್ನವರ (45), ಉಡುಪಿಯ ಅನೂಪ (33) ಮತ್ತು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಮಹೇಶ ಮರಿಗುಂಡ (25) ಸಾವನ್ನಪ್ಪಿದ ಯೋಧರು.
ಇನ್ನುಳಿದ ಇಬ್ಬರು ಮಹಾರಾಷ್ಟ್ರದ ನಾಗಪುರ ಮತ್ತು ಸಾತಾರ ಜಿಲ್ಲೆಯ ಯೋಧರು.
