Karunadu Studio

Sports ಕ್ರೀಡೆ ರಾಷ್ಟ್ರೀಯ ಸುದ್ದಿ

ಮನು ಭಾಕರ, ಗುಕೇಶ, ಹರ್ಮನಪ್ರೀತ, ಪ್ರವೀಣಗೆ ಖೇಲ್‌ ರತ್ನ ಪ್ರಶಸ್ತಿ

ನವದೆಹಲಿ

ಭಾರತದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನಚಂದ ಖೇಲ್‌ ರತ್ನ ಪ್ರಶಸ್ತಿಗೆ ಶೂಟರ್‌ ಮನು ಭಾಕರ, ಚೇಸ್‌ ಚಾಂಪಿಯನ್ ಗುಕೇಶ, ಹಾಕಿ ಆಟಗಾರ ಹರ್ಮನಪ್ರೀತ ಸಿಂಗ, ಪ್ಯಾರಾ ಒಲಂಪಿಯನ್ ಪ್ರವೀಣ‌ ಕುಮಾರ ಭಾಜನರಾಗಿದ್ದಾರೆ. ‌

ಕೇಂದ್ರ ಸರ್ಕಾರದಿಂದ ನಾಲ್ಕು ಜನ ಕ್ರೀಡಾ ಸಾಧಕರಿಗೆ ಮೇಜರ್‌ ಧ್ಯಾನಚಂದ ಖೇಲ್‌ ರತ್ನ ಪ್ರಶಸ್ತಿ ಘೋಷಿಸಲಾಗಿದೆ.

2024ನೇ ಸಾಲಿನಲ್ಲಿ ಅಸಾಮಾನ್ಯ ಸಾಧನೆಗೆ ಈ ಪ್ರಶಸ್ತಿ ನೀಡಲಾಗಿದೆ. ಭಾರತದಲ್ಲಿ ಕ್ರೀಡಾ ಕ್ಷೇತ್ರಕ್ಕೆ ನೀಡುವ ಅತಿ ದೊಡ್ಡ ಪ್ರಶಸ್ತಿ ಇದಾಗಿದೆ. ಪ್ರಶಸ್ತಿಯೊಂದಿಗೆ ಪದಕ ಮತ್ತು 25ಲಕ್ಷ ನಗದು ಬಹುಮಾನ ನೀಡಲಾಗುತ್ತದೆ.

ಜನವರಿ 17ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಿಷೇಶವಾಗಿ ಆಯೋಜಿಸಲಾದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೇಜರ್‌ ಧ್ಯಾನಚಂದ ಖೇಲ್‌ ರತ್ನ ಪ್ರಶಸ್ತಿಗಯನ್ನು ಈ ಸಾಧಕರು ಸ್ವೀಕರಿಸಲಿದ್ದಾರೆ.

karunadustudioeditor

About Author

Leave a comment

Your email address will not be published. Required fields are marked *

You may also like

ಕರ್ನಾಟಕ ರಾಜಕೀಯ ರಾಷ್ಟ್ರೀಯ

“ನವದೆಹಲಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಶೆಟ್ಟರ್, ಮುನೇನಕೊಪ್ಪ, ನಿರಾಣಿ ಭಾಗಿ”

ವಾಲ್ಮೀಕಿಯವರ ಬದುಕು ಪ್ರತಿಯೊಬ್ವರಿಗೂ ಆದರ್ಶ ಆಗಬೇಕೆಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಅಭಿಪ್ರಾಯಪಟ್ಟರು. ನವದೆಹಲಿಯ ಕರ್ನಾಟಕ ಭವನದಲ್ಲಿ ವಾಲ್ಮೀಕಿ ಜಯಂತಿ ಆಚರಣೆಯ ಸಮಯದಲ್ಲಿ
ಕರ್ನಾಟಕ ಸುದ್ದಿ

ಮಾಜಿ ಶಾಸಕ ಜಯಣ್ಣ ಅವರ ನಿಧನ; ಡಿಸಿಎಂ ಡಿ.ಕೆ. ಶಿವಕುಮಾರ ಸಂತಾಪ

ಬೆಂಗಳೂರು ಕಾಂಗ್ರೆಸ್ ಮಾಜಿ ಶಾಸಕ ಜಯಣ್ಣ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾದ ಜಯಣ್ಣ ಅವರ ನಿಧನದ ಸುದ್ದಿ
Translate »