Karunadu Studio

ಕ್ರೀಡೆ ರಾಷ್ಟ್ರೀಯ ಸುದ್ದಿ

ಕೊಹ್ಲಿಯಿಂದ ಮತ್ತೆ ಅದೇ ತಪ್ಪು! ಆಡಿದ 9 ಇನ್ನಿಂಗ್ಸ್​ನಲ್ಲಿ 8 ಬಾರಿ ಒಂದೇ ರೀತಿ ವಿಕೆಟ್ ಒಪ್ಪಿಸಿದ ನಿರಾಶೆ ಮೂಡಿಸಿದ ವಿರಾಟ್

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನದೊಂದಿಗೆ ಆಸ್ಟ್ರೇಲಿಯಾ ಪ್ರವಾಸವನ್ನು ಅಂತ್ಯಗೊಳಿಸಿದ್ದಾರೆ. ಐದು ಟೆಸ್ಟ್‌ಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯ ಭಾಗವಾಗಿ ಸಿಡ್ನಿಯಲ್ಲಿ ನಡೆದ ಅಂತಿಮ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಮತ್ತೊಮ್ಮೆ ವಿಫಲರಾದರು. ಅವರು 12 ಎಸೆತಗಳಲ್ಲಿ 1 ಬೌಂಡರಿ ನೆರವಿನಿಂದ ಕೇವಲ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ದುರಂತವೆಂದರೆ ಇಂದಿನ ಪಂದ್ಯದಲ್ಲಿ ಮತ್ತೊಮ್ಮೆ ಅವರು ಔಟ್​ಸೈಟ್​ ಆಫ್ ಸ್ಟಂಪ್ ಎಸೆತಕ್ಕೆ ಕ್ಯಾಚ್ ನೀಡಿ ಔಟ್ ಆದರು. ಈ ಸರಣಿಯಲ್ಲಿ ಕೊಹ್ಲಿ ಒಟ್ಟು 9 ಇನ್ನಿಂಗ್ಸ್ ಆಡಿದ್ದು, 8 ಬಾರಿ ಇದೇ ರೀತಿ ಔಟಾಗಿದ್ದಾರೆ. ಒಂದು ಇನ್ನಿಂಗ್ಸ್​ನಲ್ಲಿ ಅಜೇಯ ಶತಕ ಸಿಡಿಸಿದರೆ, ಮತ್ತೊಂದರಲ್ಲಿ ಬ್ಯಾಟಿಂಗ್ ಸಿಕ್ಕಿರಲಿಲ್ಲ.

14ನೇ ಓವರ್ ನಲ್ಲಿ ಸ್ಕಾಟ್ ಬೊಲ್ಯಾಂಡ್​ ಓವರ್​ನಲ್ಲಿ ಸ್ಟೀವ್​ ಸ್ಮಿತ್​ಗೆ ಕ್ಯಾಚ್ ನೀಡಿ ಪೆವಿಲಿಯನ್ ತಲುಪಿದರು. ಈ ಪಂದ್ಯದ ಮೊದಲ ಇನಿಂಗ್ಸ್ ನಲ್ಲೂ ಸ್ಕಾಟ್ ಬೊಲ್ಯಾಂಡ್ ಬೌಲಿಂಗ್ ನಲ್ಲಿ ಸ್ಲಿಪ್​ನಲ್ಲಿದ್ದ ಫೀಲ್ಡರ್​ಗೆ ಕ್ಯಾಚ್ ನೀಡಿ ಕೊಹ್ಲಿ ಔಟಾಗಿದ್ದರು. ಈ ರೀತಿ ಕೆಟ್ಟ ರೀತಿಯಲ್ಲಿ ವಿಕೆಟ್ ಒಪ್ಪಿಸಿದ್ದಕ್ಕೆ ಕೊಹ್ಲಿ ಸ್ವತಃ ಹತಾಶೆ ವ್ಯಕ್ತಪಡಿಸಿ ಕ್ರೀಸ್ ತೊರೆದರು.

ಪರ್ತ್‌ನಲ್ಲಿ ನಡೆದ ಈ ಸರಣಿಯ ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಕೊಹ್ಲಿ ಆಡಿದ ಎಲ್ಲಾ ಇನ್ನಿಂಗ್ಸ್​ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಔಟ್‌ಸೈಡ್ ಆಫ್ ಸ್ಟಂಪ್ ಎಸೆತಗಳು ಅವರನ್ನು ಕೆಟ್ಟದಾಗಿ ಕಾಡುತ್ತಿವೆ. ಕೊಹ್ಲಿ ಈ ಸರಣಿಯಲ್ಲಿ 5, ಅಜೇಯ 100,7, 11, 3, 36, 5, 17, 6 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದಾರೆ. 9 ಇನ್ನಿಂಗ್ಸ್​ಗಳಲ್ಲಿ 23ರ ಸರಾಸರಿಯಲ್ಲಿ 190 ರನ್​ಗಳಿಸಿದ್ದಾರೆ.

karundaustudioeditor karundaustudioeditor

About Author

Leave a comment

Your email address will not be published. Required fields are marked *

You may also like

ಕರ್ನಾಟಕ ರಾಜಕೀಯ ರಾಷ್ಟ್ರೀಯ

“ನವದೆಹಲಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಶೆಟ್ಟರ್, ಮುನೇನಕೊಪ್ಪ, ನಿರಾಣಿ ಭಾಗಿ”

ವಾಲ್ಮೀಕಿಯವರ ಬದುಕು ಪ್ರತಿಯೊಬ್ವರಿಗೂ ಆದರ್ಶ ಆಗಬೇಕೆಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಅಭಿಪ್ರಾಯಪಟ್ಟರು. ನವದೆಹಲಿಯ ಕರ್ನಾಟಕ ಭವನದಲ್ಲಿ ವಾಲ್ಮೀಕಿ ಜಯಂತಿ ಆಚರಣೆಯ ಸಮಯದಲ್ಲಿ
ಕರ್ನಾಟಕ ಸುದ್ದಿ

ಮಾಜಿ ಶಾಸಕ ಜಯಣ್ಣ ಅವರ ನಿಧನ; ಡಿಸಿಎಂ ಡಿ.ಕೆ. ಶಿವಕುಮಾರ ಸಂತಾಪ

ಬೆಂಗಳೂರು ಕಾಂಗ್ರೆಸ್ ಮಾಜಿ ಶಾಸಕ ಜಯಣ್ಣ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾದ ಜಯಣ್ಣ ಅವರ ನಿಧನದ ಸುದ್ದಿ
Translate »