Karunadu Studio

ಕರ್ನಾಟಕ

Viral Video: ಬೆಂಕಿ ಉಪಯೋಗಿಸಿ ಮಸಾಜ್ ! ಈ ಕಣ್ಣಲ್ಲಿ ಏನೆಲ್ಲ ನೋಡ್ಬೇಕೊ ಎಂದ ನೆಟ್ಟಿಗರು – Kannada News | Viral video: Massage parlour sets client on fire; hilarious comments flood social media


ಬೀಜಿಂಗ್‌: ಬ್ಯುಸಿ ಕೆಲಸದ ನಡುವೆ ಒಂದಿಷ್ಟು ರಿಲ್ಯಾಕ್ಸ್ ಮಾಡಲು ಮಸಾಜ್ ಪಾರ್ಲರ್ ಭೇಟಿ ನೀಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಗ್ರಾಹಕರನ್ನು ಸೆಳೆಯುವ ಸಲುವಾಗಿ ಅನೇಕ ಮಸಾಜ್ ಪಾರ್ಲರ್‌ಗಳು ಆಗಾಗ ಹೊಸ ಟೆಕ್ನಿಕ್ ಉಪಯೋಗಿಸುತ್ತಲೇ ಇರುತ್ತವೆ. ಇದೀಗ ಇಂತಹದ್ದೇ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ (Viral Video).

ದಕ್ಷಿಣ ಏಷ್ಯಾದ ಮಸಾಜ್ ಪಾರ್ಲರ್ ಒಂದರಲ್ಲಿ ಗ್ರಾಹಕನ‌ ಮೇಲೆ ಬೆಂಕಿ ಪ್ರಯೋಗ ಮಾಡುವ ಮಸಾಜ್‌ ಮಾಡುವ ಈ ವಿಡಿಯೊವೊಂದು ಬಹಳಷ್ಟು ಸದ್ದು ಮಾಡುತ್ತಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಮೊದಲಿಗೆ ಮಸಾಜ್ ಪಾರ್ಲರ್‌ನಲ್ಲಿ ಗ್ರಾಹಕನ ಮೇಲೆ ದಪ್ಪ ಟವಲ್ ಹೊದಿಸಿ ಬೆಂಕಿ ಹೊತ್ತಿಸಲಾಗುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಮತ್ತೊಬ್ಬ ಮಹಿಳೆ ಒದ್ದೆಯಾದ ಟವೆಲ್‌ನಿಂದ ಬೆಂಕಿಯನ್ನು ನಂದಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಮಸಾಜ್ ಪಾರ್ಲರ್‌ನ ಈ ವಿಡಿಯೊ ಈ ವಿಡಿಯೊ ನೋಡಿ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ. ಜನಪ್ರಿಯರಾಗಲು ಮಸಾಜ್ ಪಾರ್ಲರ್‌ನವರು ಏನು ಬೇಕಾದರೂ ಮಾಡುತ್ತಾರೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ಮಸಾಜ್ ಮಾಡಿಕೊಂಡು ಬೆಂಕಿ ಹತ್ತಿಸಿಕೊಂಡರೆ ವಿಮೆ ಕ್ಲೈಮ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: Viral Video: ಅಕ್ವೇರಿಯಂನಲ್ಲಿ ಮಹಿಳೆ ಮೇಲೆ ದಾಳಿ ಮಾಡಿದ ದೈತ್ಯ ಮೀನು; ಅಷ್ಟಕ್ಕೂ ನಡೆದಿದ್ದೇನು?

ಫೈರ್ ಡ್ರ್ಯಾಗನ್ ಥೆರಪಿ!

ಈ ಥೆರಪಿಯನ್ನು ಚೀನಿಯರು ಹಾಗೂ ಟಿಬೆಟಿಯನ್ನರು ಹೆಚ್ಚಾಗಿ ಮಾಡಿಸಿಕೊಳ್ಳುತ್ತಾರೆ‌‌. ದೇಹದ ಉಷ್ಣತೆಯ ಸಮತೋಲನವನ್ನು ನಿಯಂತ್ರಿಸಲು ದಪ್ಪವಾದ ಟವಲ್ ಹೊದಿಸಿ‌ ಬೆಂಕಿ ಹಚ್ಚಲಾಗುತ್ತದೆ. ಈ ಮೂಲಕ ದೇಹದ ಉಷ್ಣತೆ ಸಮತೋಲನಗೊಳಿಸಲಾಗುತ್ತದೆ. ಅಲ್ಲದೆ ನಿದ್ರಾಹೀನತೆ ಸಮಸ್ಯೆ, ಬೊಜ್ಜಿನ ಸಮಸ್ಯೆ, ಇತರ ಸಣ್ಣ ಪುಟ್ಟ ರೋಗಗಳ ನಿವಾರಣೆ ಜತೆಗೆ ದೇಹದ ನೋವನ್ನು ಕಡಿಮೆ ಮಾಡಲು ಈ ಮಸಾಜ್ ಬಳಕೆ ಮಾಡಲಾಗುತ್ತದೆಯಂತೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »