ಕೋಲಾರ:
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಎ.ಸಿ ಕಚೇರಿಯಲ್ಲೇ 20 ಸಾವಿರ ಲಂಚ ಪಡೆಯುವ ವೇಳೆ ಕೇಸ್ ವರ್ಕರ್ ಕೋಮಲ ಲೋಕಾ ಬಲೆಗೆ ಬಿದ್ದಿದ್ದಾರೆ.ಉತ್ತನೂರು ಗ್ರಾಮದ ರೈತ ಸುರೇಶ್ ಎಂಬುವರ ಪೌತಿ ಖಾತೆಗೆ 50 ಸಾವಿರ ಲಂಚಕ್ಕೆ ಭೇಡಿಕೆ ಇರಿಸಿ, ಮುಂಗಡವಾಗಿ 20 ಸಾವಿರ ಲಂಚ ಪಡೆಯುವ ವೇಳೆ ಹಣದ ಸಮೇತ ಸಿಕ್ಕಿಬಿದ್ದ ಕೋಮಲರನ್ನು ಕೋಲಾರ ಲೋಕಾಯುಕ್ತ ಇನ್ಸ್ಪೆಕ್ಟರ್ ರೇಣುಕ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.