Karunadu Studio

ಕರ್ನಾಟಕ

ನಾಳೆ ದಂಡಿನ ಮಾರಮ್ಮ ದೇವಿಯ ಬೆಳ್ಳಿ ಪಲ್ಲಕ್ಕಿ ಉತ್ಸವ…!


ಮಧುಗಿರಿ :

    ಮಾ.11 ರಿಂದ ಪ್ರಾರಂಭವಾಗಿರುವ ಇತಿಹಾಸ ಪ್ರಸಿದ್ಧ ದಂಡಿನ ಮಾರಮ್ಮನ ಜಾತ್ರೆ ಯಲ್ಲಿ ವಿಶೇಷವಾಗಿ ಜನರನ್ನು ಆಕರ್ಷಿಸುವ ಬೆಳ್ಳಿ ಪಲ್ಲಕ್ಕಿಗೆ ಬರೋಬ್ಬರಿ 60 ವರ್ಷಗಳು ಕಳೆಯುತ್ತಿವೆ.ಪ್ರತಿ ವರ್ಷ ಯುಗಾದಿ ಹಬ್ಬಕ್ಕೂ ಮುನ್ನಾ ಹಾಗೂ ಪಾಲ್ಗುಣ ಮಾಸದಲ್ಲಿ ಆರಂಭವಾಗುವ ಜಾತ್ರ ಮಹೋತ್ಸವು 11 ದಿನಗಳ ಕಾಲ ನಡೆಯುವ ಬೃಹತ್ ಜಾತ್ರ ಮಹೋತ್ಸವ ವಾಗಿದೆ.

   ಮಧುಗಿರಿಯ ಪಣ್ಣೆ ರೈತರು ಸುಮಾರು ಎಪ್ಪತ್ತು ಸಹಸ್ರ ರೂಪಾಯಿಗಳ ವೆಚ್ಚದಲ್ಲಿ ಸುಪ್ರಸಿದ್ಧ ಕಲಾವಿದರಾದ ಶ್ರೀ ಡಿ. ಎಂ. ವಿಶ್ವಮೂರ್ತಿಯವರಿಂದ ಒಂದು ದಿವ್ಯವಾದ ಬೆಳ್ಳಿಯ ಪಲ್ಲಕ್ಕಿ ಯನ್ನು ತಯಾರಿಸಿ ಇದನ್ನು ಶ್ರೀ ದಂಡಿನ ಮಾರಮ್ಮನವರಿಗೆ ಕಾಣಿಕೆಯಾಗಿ ಸಮರ್ಪಣೆಯ ಕಾರ್ಯ ಕ್ರಮವನ್ನು ಏರ್ಪಡಿಸಿದ್ದರು.

   ಈ ಭವ್ಯವಾದ ಬೆಳ್ಳಿಯ ಪಲ್ಲಕ್ಕಿಯಲ್ಲಿ ಅಮ್ಮ ವರನ್ನು ಮಂಡಿಸಿ ಬೆಳ್ಳಿಪಲ್ಲಕ್ಕಿಯ ಉದ್ಘಾಟನಾ ಕಾರ್ಯಕ್ರಮವನ್ನು ದಿ. 31-3-1965 ರ ಸಂಜೆ 4:30 ಕ್ಕೆ. ಅಂದಿನ ಜನ ಮೆಚ್ಚಿನ ಮಹಾರಾಜರವರಾದ ಶ್ರೀ ಜಯಚಾಮರಾಜ ಒಡೆಯರ್ ಬಹದ್ದೂರ್ ಜಿ.ಸಿ.ಎಸ್.ಐ., ಜಿ.ಬಿ.ಇ., ರವರು ತಮ್ಮ `ಅಮೃತಹಸ್ತದಿಂದ ಈ ಉದ್ಘಾಟನಾ ಸಮಾರಂಭೋತ್ಸವವನ್ನು ನೆರವೇರಿಸಿದ್ದರು.

    ಅಧ್ಯಕ್ಷರು ಹಾಗೂ ಕಾರ್ಯಕಾರೀ ಸಮಿತಿ ಸದಸ್ಯರ ಅಗಿದ್ದ ಎಂ ಎನ್ ಬಸಪ್ಪ ನವರು ಹಾಗೂ ಇತರರು ಮೈಸೂರಿನ ಮಹರಾಜರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು 2025 ರ ಮಾ.19 ಕ್ಕೆ ಬೆಳ್ಳಿ ಪಲ್ಲಕ್ಕಿಯು ಲೋಕಾರ್ಪಣೆಗೊಂಡು 60 ವರ್ಷಗಳು ಕಳೆಯುತ್ತಿದ್ದು ಅಂದಿನಿಂದ ಇಂದಿನ ವರೆವಿಗೂ ಜಾತ್ರ ಮಹೋತ್ಸವು ಎಲ್ಲಾರ ಸಹಕಾರದಿಂದ ವಿಜೃಂಭಣೆಯಿಂದ ನೇರವೇರಿಸಲಾಗುತ್ತಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »