Karunadu Studio

ಕರ್ನಾಟಕ

ʼಸಿಕಂದರ್‌ʼ ಚಿತ್ರದ ಹೊಸ ಹಾಡು ರಿಲೀಸ್‌…..!


ಮುಂಬೈ:

   ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪೈಕಿ ಒಂದು ಎನಿಸಿಕೊಂಡಿರುವ ಸಲ್ಮಾನ್‌ ಖಾನ್‌ -ರಶ್ಮಿಕಾ ಮಂದಣ್ಣ  ಜೋಡಿಯ ‘ಸಿಕಂದರ್‌’  ಫ್ಯಾನ್ಸ್‌ಗೆ ಮತ್ತೊಂದು ಗಿಫ್ಟ್‌ ನೀಡಿದೆ. ಈಗಾಗಲೇ ಟೀಸರ್‌, ಹಾಡಿನ ಮೂಲಕ ಗಮನ ಸೆಳೆದಿರುವ ಚಿತ್ರತಂಡ ಇದೀಗ ಡ್ಯಾನ್ಸಿಂಗ್‌ ನಂಬರ್‌ ರಿಲೀಸ್‌ ಮಾಡಿದೆ. ʼಸಿಕಂದರ್‌ ನಾಚೆʼ  ಹೆಸರಿನ ಈ ಹಾಡಿನಲ್ಲಿ ಸಲ್ಮಾನ್‌ ಖಾನ್‌ ಮತ್ತು ರಶ್ಮಿಕಾ ಮಂದಣ್ಣ ಭರ್ಜರಿಯಾಗಿ ಸ್ಟೆಪ್‌ ಹಾಕಿದ್ದು, ಈ ವರ್ಷದ ಹಿಟ್‌ ಲಿಸ್ಟ್‌ಗೆ ಸೇರುವ ಎಲ್ಲ ಸಾಧ್ಯತೆ ಇದೆ.

   ಸಲ್ಮಾನ್‌ ಖಾನ್‌ ಬೀಟ್‌ಗೆ ತಕ್ಕಂತೆ ಹೆಜ್ಜೆ ಹಾಕಿದ್ದರೆ, ಈಗಾಗಲೇ ಡ್ಯಾನ್ಸ್‌ ಮೂಲಕ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿರುವ ರಶ್ಮಿಕಾ ಮಂದಣ್ಣ ಭರ್ಜರಿಯಾಗಿ ಸಾಥ್‌ ನೀಡಿದ್ದಾರೆ. ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಈ ಜೋಡಿ ಈಗಾಗಲೇ ಬಾಲಿವುಡ್‌ನ ಗಮನ ಸೆಳೆದಿದೆ. ಸಮೀರ್‌ ಅಂಜಾನ್‌ ಬರೆದ ಹಾಡಿಗೆ ಅಮಿತ್‌ ಮಿಶ್ರಾ, ಆಕಾಶ್‌ ಮತ್ತು ಸಿದ್ಧಾರ್ಥ್‌ ಮಿಶ್ರಾ ಧ್ವನಿ ನೀಡಿದ್ದಾರೆ. 

   ಟರ್ಕಿಯಲ್ಲಿ ಈ ಹಾಡಿನ ಶೂಟಿಂಗ್‌ ನಡೆದಿದೆ. 2014ರಲ್ಲಿ ತೆರೆಕಂಡ ʼಕಿಕ್‌ʼ ಚಿತ್ರದ ಬ್ಲಾಕ್‌ ಬ್ಲಸ್ಟರ್‌ ʼಜುಮ್ಮೆ ಕಿ ರಾತ್‌ʼ ಬಳಿಕ ಸಲ್ಮಾನ್‌ ಖಾನ್‌-ಸಾಜಿದ್‌ ನಾಡಿಯಾವಾಲ ಮತ್ತು ಅಹಮ್ಮದ್‌ ಖಾನ್‌ (ಕೊರಿಯಾಗ್ರಾಫರ್‌) ಮತ್ತೆ ಈ ಹಾಡಿನಲ್ಲಿ ಒಂದಾಗಿರುವುದು ವಿಶೇಷ. ʼಸಿಕಂದರ್‌ʼ ಈದ್‌ ವೇಳೆಗೆ ಅಂದರೆ ಈ ಮಾಸಾತ್ಯಂದಲ್ಲಿ ವಿಶ್ವಾದ್ಯಂತ ತೆರೆಗೆ ಬರಲಿದೆ. 

   ಸೂಪರ್‌ ಹಿಟ್‌ ಚಿತ್ರಗಳ ನಿರ್ದೇಶಕ, ಕಾಲಿವುಡ್‌ನ ಎ.ಆರ್‌.ಮುರುಗದಾಸ್‌ ಮೊದಲ ಬಾರಿಗೆ ಸಲ್ಮಾನ್‌ ಖಾನ್‌ಗೆ ಆ್ಯಕ್ಷನ್‌‌ ಕಟ್‌ ಹೇಳುತ್ತಿರುವ ಈ ಚಿತ್ರ ಹಲವು ಕಾರಣಗಳಿಗೆ ನಿರೀಕ್ಷೆ ಹೆಚ್ಚಿಸಿದೆ. ಸದ್ಯ ಬಾಲಿವುಡ್‌ನಲ್ಲಿ ಗಮನ ಸೆಳೆಯುತ್ತಿರುವ ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್‌ ಖಾನ್‌ ಪ್ರಥಮ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವುದು ಈ ಸಿನಿಮಾದ ಪ್ರಮುಖ ಆಕರ್ಷಣೆ. ಇವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ, ಬಹುಭಾಷಾ ಕಲಾವಿದೆ ಕಾಜಲ್ ಅಗರ್​ವಾಲ್, ಕನ್ನಡದ ಕಿಶೋರ್‌, ಸುನೀಲ್‌ ಶೆಟ್ಟಿ, ಪ್ರತೀಕ್‌ ಬಬ್ಬರ್‌, ಚೈತನ್ಯ ಚೌಧರಿ, ನವಾಬ್‌ ಶಾ ಮತ್ತಿತರರು ನಟಿಸಿದ್ದಾರೆ. 

   ಬಹು ನಿರೀಕ್ಷೆಯೊಂದಿಗೆ ತೆರೆಕಂಡ ಸಲ್ಮಾನ್‌ ಖಾನ್‌ ಅವರ ಇತ್ತೀಚಿನ ಚಿತ್ರಗಳು ಯಾವುದೂ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಿಲ್ಲ. ಹೀಗಾಗಿ ಬಹುದೊಡ್ಡ ಗೆಲುವುಗಾಗಿ ಅವರು ಕಾದಿದ್ದಾರೆ. ಲಕ್ಕಿ ಚಾರ್ಮ್‌ ಎನಿಸಿಕೊಂಡಿರುವ ರಶ್ಮಿಕಾ ಈ ಸಿನಿಮಾದಲ್ಲಿ ನಾಯಕಿಯಾಗಿರುವುದರಿಂದಲೂ ನಿರೀಕ್ಷೆ ದುಪ್ಪಟ್ಟಾಗಿದೆ. ʼಅನಿಮಲ್‌ʼ, ʼಪುಷ್ಪ 2ʼ ಮತ್ತು ಇತ್ತೀಚೆಗೆ ರಿಲೀಸ್‌ ಆದ ʼಛಾವಾʼ ಚಿತ್ರದ ಮೂಲಕ ರಶ್ಮಿಕಾ ಹ್ಯಾಟ್ರಿಕ್‌ ಗೆಲುವು ಕಂಡಿದ್ದಾರೆ. ಅವರ ಈ 3 ಚಿತ್ರಗಳೂ ಬಾಕ್ಸ್‌ ಆಫೀಸ್‌ನಲ್ಲಿ 500 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿವೆ. ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿರುವ ʼಸಿಕಂದರ್‌ʼ ಭರ್ಜರಿ ಕಲೆಕ್ಷನ್‌ ಮಾಡುವ ಸಾಧ್ಯತೆ ಇದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »