ಶಿರಸಿ:
ಯುಗಾದಿ ಉತ್ಸವವನ್ನು ಶಾಂತಿಯುತವಾಗಿ, ವಿಜೃಂಭಣೆಯಿಂದ ಆಚರಿಸಬೇಕಿದೆ. ಅದಕ್ಕೆ ಎಲ್ಲರ ಸಹಾಯ ಸಹಕಾರ ಬೇಕಿದೆ. ಯುಗಾದಿ ಸಮಿತಿ ರಮೇಶ ದುಬಾಶಿ ಹೇಳಿದರು. ಗರದಲ್ಲುಂದು ಯುಗಾದಿ ಉತ್ಸವ ಸಮಿತಿಯಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಹಿಂದೂ ದೇವಾನು ದೇವತೆಗಳು ಇರುವ ಬಂಡಿಗಳನ್ನೇ ಮಾಡಬೇಕಿದೆ. ಅನ್ಯಧರ್ಮಿಯರಿಗೆ ಅವಕಾಶ ಇಲ್ಲ. ಪ್ರದರ್ಶನ ನೀಡಿದ ಉತ್ತಮ ಬಂಡಿಗಳಿಗೆ ಬಹುಮಾನ ನೀಡಲಿದ್ದೇವೆ ಎಂದು ಮಾಹಿತಿ ನೀಡಿದರು. ಯುಗಾದಿ ಉತ್ಸವ ಸಮಿತಿಯ ಚಂದ್ರ ಎಸಳೆ, ಶ್ರೀನಿವಾಸ ಹೆಬ್ಬಾರ, ಸುರೇಶ ಶೆಟ್ಟಿ, ಪರಮಾನಂದ ಹೆಗಡೆ ಮುಂತಾದವರಿದ್ದರು.