ಮಧುಗಿರಿ:
ಪಟ್ಟಣದ ಶಿರಾಗೇಟ್ ಬಳಿಯಿರುವ ಕಾರ್ಮಿಕ ಇಲಾಖೆಯ ಆವರಣದಲ್ಲಿ ಕಸ ಕಡ್ಡಿಗಳ ರಾಶಿ ಯಿಂದ ಕಳೆದ ಒಂದು ತಿಂಗಳಿನಿಂದ ಆವರಿಸಿ ಕೊಂಡಿದ್ದರು ಅಧಿಕಾರಿ ಮಾತ್ರ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ಬೇಸರದ ಸಂಗತಿಯಾಗಿದೆ.ಕಚೇರಿಯ ಆವರಣದಲ್ಲಿ ಕಳೆದ ತಿಂಗಳು ಸಹಕಾರ ಸಚಿವರ ಕಾರ್ಯಕ್ರಮ ಆಯೋಜಿಸಲಾಗಿದ್ದಾಗ ಆವರಣವನ್ನು ಶುಚಿ ಗೊಳಿಸಲಾಗಿತ್ತು.
ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಚೇರಿಯ ಸುತ್ತಮುತ್ತ ಶುಚಿತ್ವವನ್ನು ಕಾಪಾಡುವಂತೆ ಸಹಕಾರ ಅಧಿಕಾರಿಗಳಿಗೆ ಸೂಚಿಸಿದ್ದರು ಈ ಅಧಿಕಾರಿ ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲಾ ನಂತರ ಎಂದಿನಂತೆ ಮತ್ತೆ ಅದೇ ಪರಿಸ್ಥಿತಿಯು ಮುಂದುವರೆದಿದ್ದರೂ ಸಹ ವಾರಕ್ಕೊಮ್ಮೆ ಬರುವ ಕಾರ್ಮಿಕ ಅಧಿಕಾರಿ ಫೈರೋಜ್ ಪಾಷ ಮಾತ್ರ ಏನೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.
ಶುಚಿತ್ವದ ವಿಷಯವಾಗಿ ಅಧಿಕಾರಿಗೆ ಕರೆ ಮಾಡಿದರೆ ಈ ಕಟ್ಟಡ ನಮ್ಮದ್ದಲ್ಲಾ ಲೋಕಪಯೋಗಿ ಇಲಾಖೆ ಯವರಿಗೆ ಸೇರಿದ್ದಾಗಿದ್ದು ಅವರ ಗಮನಕ್ಕೆ ತರಲಾಗಿದೆ ಇನ್ನೆರೆಡು ಮೂರು ದಿನದಲ್ಲಿ ಅವರೇ ಕಸವನ್ನು ತೆರವು ಗೊಳಿಸಿ ಕೊಡುತ್ತಾರೆಂದು ಆರೈಕೆ ಉತ್ತರ ನೀಡುತ್ತಿದ್ದಾರೆ.ಆದರೆ ಕಚೇರಿಗೆ ಬರುವ ನೂರಾರು ಕಾರ್ಮಿಕರು ಕಸ ರಾಶಿಯಲ್ಲಿಯೇ ನಡೆದು ಕೊಂಡು ಹೋಗಬೇಕಾದ ವಾತವರಣ ಸೃಷ್ಟಿಯಾಗಿದೆ.