ನಾಯಕನಹಟ್ಟಿ
೧ ತಿಂಗಳ ಉಪವಾಸ ಪೂರೈಸಿದ ಮುಸ್ಲಿಂರು ದಾನ ಧರ್ಮ ಸಂಕೇತವಾದ ಪವಿತ್ರ ರಂಜನ್ ಹಬ್ಬವನ್ನು ನಾಯಕನಹಟ್ಟಿ ಪಟ್ಟಣದಲ್ಲಿ ಸಡಗರ ಸಂಭ್ರದಿಂದ ಆಚರಿಸಿದರು.
ಮುಸ್ಲಿಂರು ಎಲ್ಲಾರನ್ನು ಪ್ರೀತಿಯಿಂದ ಕಾಣಬೇಕು, ಅಕ್ಕ-ಪಕ್ಕದವರನ್ನು ಪ್ರೀತಿಸಬೇಕು ಎಂದು ಮೌಲನ ಮುಫ್ತಿ ಮೊಹಮ್ಮದ್ ಸುಹೇಬ್ ಸಾಬ್ ಹೇಳಿದರು. ನಂತರ ಮಾತನಾಡಿದ ಅವರು ಈ ಭಾರಿ ಸಭೃದ್ಧಿ ಮಳೆ ಸುರಿಯಲಿ ಎಂದು ದೇವರಲ್ಲಿ ಬೆಡಿಕೊಳ್ಳುವೆ ಎಂದು ತಿಳಿಸಿದರು.
ಈದ್ಗ ಮೈದಾನದ ಮಸೀದಿಗಳ ಹತ್ತಿರ ಬಂದು ಮುಸ್ಲಿಂರು ಮೊದಲು ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯವನ್ನು ಕೊರಿದರು. ಈದ್ಗ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ೧ ತಿಂಗಳು ಕೂಗೊಳ್ಳುವ ಉಪವಾಸದಿಂದ ಪ್ರತಿಯೊಬ್ಬರಿಗೂ ಒಳ್ಳೆದಾಗುತ್ತದೆ. ರಂಜನ್ ಕೊನೆಯ ದಿನ ಅವರು ಕೂಡ ಹಬ್ಬದ ಆಚರಣೆಗೆ ಅಗತ್ಯವಿರುವ ಹೊಸ ಬಟ್ಟೆ ಖರಿದಿಸಿದರು. ಪ್ರತಿಯೊಂದು ಮನೆಗಳಲ್ಲಿ ಸಂಭ್ರಮದ ಮನೆ ಹಬ್ಬದ ವಾತವರಣವಾಗಿತ್ತು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಜಾಮೀಯ ಮಸೀದಿ ಅಧ್ಯಕ್ಷ ಸೈಯದ್ ಅನ್ವರ್, ಕಮಿಟಿಯ ಉಪಾಧ್ಯಕ್ಷರು, ಸದಸ್ಯರುಗಳು, ಪೊಲೀಸ್ ಇಲಾಖೆಯವರು ಇದ್ದರು.