Karunadu Studio

ಕರ್ನಾಟಕ

ಸಾರ್ಥಕದ ಪಿಹೆಚ್. ಡಿ ಪದವಿ ಪಡೆದ ಗ್ರಾಮೀಣ ಪ್ರತಿಭೆ; ಎಲ್ಲಪ್ಪ. ಜಿ 


ನಾಯಕನಹಟ್ಟಿ

     ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಿಹೆಚ್. ಡಿ ಪದವಿ ಪ್ರಮಾಣ ಪತ್ರವನ್ನು ಎಲ್ಲಪ್ಪ ಜಿ ಅವರು ‘ಹೈದರಾಬಾದ್ ಕರ್ನಾಟಕದ ಸಣ್ಣ ಕಥೆಗಳಲ್ಲಿ ದಲಿತಲೋಕದ ಸ್ವರೂಪ’ ಎಂಬ ವಿಷಯಕ್ಕೆ ಡಾ. ನಟರಾಜ್ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿ, 33ನೆಯ ನುಡಿ ಹಬ್ಬದ ಘಟಿಕೋತ್ಸವದಲ್ಲಿ ಮಾನ್ಯ ರಾಜ್ಯಪಾಲರು ಮತ್ತು ಉನ್ನತ ಶಿಕ್ಷಣ ಸಚಿವರ ಸಮ್ಮುಖದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

   ಶಿಕ್ಷಣ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿ ಕೊಟ್ಟಿದೆ. ಆದರೂ ಅದನ್ನು ದಕ್ಕಿಸಿಕೊಳ್ಳುವ ಇಚ್ಛಾಶಕ್ತಿ ಮತ್ತು ಪ್ರತಿಭೆ ಕೆಲವರಲ್ಲಿ ಮಾತ್ರ ಅಡಗಿರುತ್ತದೆ. ಹತ್ತಾರು ಪದವಿಗಳುಂಟು, ಪಡೆಯುವವರುಂಟು. ಆದರೆ ಸಾರ್ಥಕತೆಯ ಪದವಿಯನ್ನು ಪಡೆಯುವ ಯೋಗ ಹಾಗೂ ಒಂದು ಸಮಾಜಕ್ಕೆ ಮಾದರಿಯ ಹೆದ್ದಾರಿ ಆಗಬಹುದು ಎಂಬ ಮಾತಿಗೆ ಎಲ್ಲಪ್ಪ. ಜಿ ಎಂಬ ಗ್ರಾಮೀಣ ಪ್ರತಿಭೆಗೆ ಕೊರೆದು ಲಿಪಿಸಿದ ಸಾಲಿನಂತಿವೆ.

    ವಿದ್ಯೆ ಮತ್ತು ಯಶಸ್ಸು ಎರಡನ್ನು ತಮ್ಮ ಒಕ್ಕಲಾಗಿಸಿಕೊಂಡಿದ್ದಾರೆ. ವಿಶ್ವಾಸ, ನಂಬಿಕೆ ಮತ್ತು ಆಸಕ್ತಿಗಳ ಮೊತ್ತವೇ ವಿದ್ಯೆ. ಛಲ, ನಿರಂತರ ಅಧ್ಯಯನ ಮತ್ತು ಪರಿಶ್ರಮಗಳ ಸಂಕಲ್ಪವೇ ಯಶಸ್ಸು. ವಿದ್ಯೆಯೇ ಪದವಿ; ಯಶಸ್ಸೇ ಪ್ರಮಾಣ ಪತ್ರ. ಇವೆ ಅವರ ಅಸ್ತ್ರಗಳು. ಬಿಟ್ಟ ಹೂವುಗಳೆಲ್ಲಾ ಕಾಯಾಗವು! ಅಸ್ತಿತ್ವಕ್ಕಾಗಿ ನಡೆಸಿದ ಅಸ್ಮಿತೆಗಳು ಮಾತ್ರ ಗಟ್ಟಿಯಾಗಿ ಹಣ್ಣಾಗದಿರವು! ಎನ್ನುವಂತಿದೆ ಅವರ ಹಾದಿ.

     ಕಲಿಕಾ ಅನುಭವ ವರ್ಗದಿಂದ ವರ್ಗಕ್ಕೆ ಭಿನ್ನವಾದ ದ್ರವ್ಯಗಳುಂಟು. ಸಮಾನ ಅವಕಾಶಗಳಿವೆ ಅಂತೆಯೇ ಸಮಾನ ಅನುಭವಗಳಿರಲಾರವು! ಬದುಕಿನ ಏರಿಳಿತದಲ್ಲಿ ಹೊಟ್ಟೆ ಹಿಟ್ಟಿನ ಸಂಘರ್ಷ, ಜಾತಿ ಅವಮಾನ, ಹೀಯಾಳಿಕೆ ಇವುಗಳ ಮಧ್ಯೆ ಏಕ ಮಾತ್ರ ಬೆಳಕಿನ ದಾರಿ ಹಿಡಿದು ನಡೆಸಿದ್ದು ಶಿಕ್ಷಣ. ‘ನಡೆದರೆ ನಿರ್ಗಮನ; ನುಡಿದರೆ ನಿಶಬ್ದ’ದ ವಚನ ಸಾಲಿನಂತೆ ಸಾಗಿದ ಅವರ ಬದುಕಿನ ಹಾದಿ, ಸರಳವಲ್ಲದ ಸಾಗರ ತೊರೆ.

     ತೃಷೆಯಾದೊಡೆ ಕೆರೆಬಾವಿಗಳುಂಟು: ಕಲಿಕೆಯ ದಾಹದ ಬಾಯಾರಿಕೆಯಿಂದಾಗಿ ಅರಿವಿನ ಕೆರೆಬಾವಿಗಳನ್ನ ಹುಡುಕುತ್ತಲೇ ನಡೆದಿದ್ದಾರೆ. ಬಡತನದ ಹುಣ್ಣು ಲೆಕ್ಕಿಸದೆ, ಅಕ್ಷರ ಜ್ಞಾನಕ್ಕಾಗಿ ಹುಡುಕಾಟವನ್ನೂ ನಿಲ್ಲಿಸದೆ, ಬದುಕಿನ ಪಲ್ಲಟಗಳಿಗೆ ಎದೆಗುಂದದೆ, ಕುಗ್ರಾಮ ವೆಂಕಟಾಪುರದ (ಮೊಳಕಾಲ್ಮೂರು ತಾಲೂಕು) ಪ್ರಾಥಮಿಕ ಶಾಲಾ ಹಂತದಿಂದ ಶುರುವಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಿಹೆಚ್. ಡಿ ಪದವಿಯವರೆಗೆ ಸಾಗಿದ ರೀತಿ. ಇದು ಅವರು ಓದನ್ನು ಪ್ರೀತಿಸಿದ ಬಗೆ.

    ಮೂಕ ವೇದನೆಯ ಜನರಿಗೆ ವಿದ್ಯೆ ಕಲಿತು ಪದವಿ ಪಡೆದರಷ್ಟೇ ಸಾಲದು. ಒಂದೆಡೆ ಗಟ್ಟಿಯಾದ ನೆಲೆ ಕಂಡುಕೊಳ್ಳಬೇಕು. ಈ ಓದಿನ ಮಧ್ಯದಲ್ಲಿಯೇ ಹೈಸ್ಕೂಲ್ ಮಾಸ್ಟರ್ ಆಗಿ ಕೆಲಸ ಗಿಟ್ಟಿಸಿಕೊಂಡರು. ತೃಪ್ತರಾಗದೆ, ಪದವಿಗೆ ತಕ್ಕ ಕನಸು ಎತ್ತರಿಸಿಕೊಂಡು ಪದವಿ ಕಾಲೇಜಿಗೆ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅವರ ಗುರಿ ಮತ್ತು ಕನಸುಗಳು ಬೇರೆಡೆಗೆ ವಿಚಲಿತರಾಗದಂತೆ ನಿಯಂತ್ರಿಸಲು ಕಾರಣವಾದದ್ದು ತಂದೆಯ ಜೀತ ಮತ್ತು ಜಾತಿಯಿಂದಾದ ಕಹಿ ಅನುಭವ. 

    ‘ಸಾವಿರ ಮುಳ್ಳಿದ್ದರೂ ಮಿಂಚುವುದು ಗುಲಾಬಿ ಹೂ ಎಂಬಂತೆ’ ಸಾರ್ಥಕದ ಪದವಿ ಪಡೆದಿದ್ದಾರೆ. ಗುರು ಹಿರಿಯರು, ಮಾರ್ಗದರ್ಶಕರು, ಸ್ನೇಹಿತರು, ಹಿತೈಷಿಗಳು, ಕುಟುಂಬ ವರ್ಗದವರು ಶುಭ ಕೋರಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »