Karunadu Studio

ಕರ್ನಾಟಕ

ವಿಶ್ವ ಶಾಂತಿಗಾಗಿ ನವಕಾರ ಮಹಾಮಂತ್ರ ಜಪ – ವಿಡಿಯೋ ಸಂವಾದದ ಮೂಲಕ ಮಂತ್ರ ಪಠಿಸಿದ ಪ್ರಧಾನಿ ನರೇಂದ್ರ ಮೋದಿ


ಬೆಂಗಳೂರು:

   ಜಾಗತಿಕ ಜೈನ ಸಮುದಾಯವು ನವಕರ್ ಮಹಾ ದಿವಸ್ ದ ಅಭೂತಪೂರ್ವ ಆಚರಣೆ ನಡೆಯಿತು. ಇಂದು ಬೆಳಗ್ಗೆ 8 ರಿಂದ 9.36ರವರೆಗೆ ನಗರದ ಫ್ರೀಡಂಪಾರ್ಕ್‌ನಲ್ಲಿ ವಿಶ್ವ ಶಾಂತಿಗಾಗಿ ನವಕಾರ ಮಹಾಮಂತ್ರವನ್ನು ಜಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಸಮುದಾಯದ ಅಧ್ಯಕ್ಷ ರಂಜಿತ್ ಸೋಲಂಕಿ ತಿಳಿಸಿದರು.

   ಭಾರತ ಸಹಿತ ಜಗತ್ತಿನ 108 ದೇಶಗಳಲ್ಲಿ ಈ ಕಾರ್ಯಕ್ರಮ ನಡೆಯಿತು. ಲಕ್ಷಾಂತರ ಜನರು ಭಾಗಿಯಾಗಿದ್ದರು. ನವಕರ್ ಮಹಾ ದಿವಸದ ಕೇಂದ್ರ ಆಚರಣೆಯು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಿತು. ಪ್ರಧಾನಿ ಮೋದಿ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ, ಮಂತ್ರಪಠಿಸಿದರು.

   ಶಾಂತಿ, ಅಹಿಂಸೆ ಮತ್ತು ಆಧ್ಯಾತ್ಮಿಕ ಜ್ಞಾನೋದಯವನ್ನು ಸಂಕೇತಿಸುವ ಪೂಜ್ಯ ಜೈನ ಮಂತ್ರವಾದ ನವಕರ್ ಮಹಾ ಮಂತ್ರದ ಸಾಮೂಹಿಕ ಪಠಣ ಈ ಕಾರ್ಯಕ್ರಮದ ಮೂಲವಾಗಿದೆ. ವಿವಿ ಪುರಂನ ಮಹಾವೀರ ಧರ್ಮಶಾಲಾ, ಭಗವಾನ್ ಮಹಾವೀರ ರಸ್ತೆಯ ಗಣೇಶ್ ಭಾಗ್ ಮತ್ತು ಯಶವಂತಪುರದ ಮೇವಾ‌ರ್ ಭವನದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »