ಕೊರಟಗೆರೆ
ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಮಡದಿಯ ಮೇಲೆ ಅನುಮಾನಗೊಂಡು ಪತಿ ಪತ್ನಿಯ ಶೀಲ ಶಂಕಿಸಿ ಪತ್ನಿಯನ್ನ ಮನೆಯಲ್ಲಿ ಅಡಿಗೆ ಮಾಡುತ್ತಿದ್ದ ಸಂದರ್ಭದಲ್ಲಿ ಗಂಡ ಮನಬಂದಂತೆ ಮುಚ್ಚಿ ನಿಂದ ಕೊಚ್ಚಿದ ಪ್ರಕರಣ 4 ವರ್ಷಗಳ 2021ರ ಪ್ರಕರಣ ಅಂದಿನ ಸಿಪಿಐ ಸಿದ್ದರಾಮೇಶ್ವರ ಸಲ್ಲಿಸಿದ ದೋಷಾರೋಪಣ ಪಟ್ಟಿ ಸಾಬೀತಾಗಿ ಮಧುಗಿರಿ ಮಾನ್ಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
ಕೊರಟಗೆರೆ ತಾಲೂಕ್ ಸಿ.ಎನ್ ದುರ್ಗಾ ಹೋಬಳಿ ಥರಟಿ ಗ್ರಾಮದ ಹನುಮಯ್ಯ ಮಗಳು ಯಶೋಧ ಬರ್ಬರವಾಗಿ ಹತ್ಯೆಯಾದ ದುರ್ದೈವಿ ಯಾಗಿದ್ದು, ಗಂಡ ದೇವರಾಜು (49 ವರ್ಷ) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಮೃತೆ ಯಶೋಧ ಜೀವನೋಪಾಯ ಹಾಗೂ ಸಂಸಾರಿಕ ನಿರ್ವಹಣೆಗಾಗಿ ತುಮಕೂರಿನ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದರು ಎನ್ನಲಾಗಿದ್ದು, ಗಂಡ ದೇವರಾಜು ಹೆಂಡತಿಯ ಮೇಲೆ ಅನುಮಾನಗೊಂಡು ಪದೇ ಪದೇ ಜಗಳ ಮಾಡುತ್ತಿದ್ದ ಎಂದು ದೂರಿನಲ್ಲಿ ದಾಖಲಾಗಿದ್ದು, ಮಡದಿ ಯಶೋಧಳನ್ನ ಕೊಲೆ ಮಾಡಿ ಮತ್ತೊಂದು ಮದುವೆ ಮಾಡಿಕೊಳ್ಳುವ ದುರುದ್ದೇಶ ಹಾಗೂ ಉದ್ದೇಶಪೂರ್ವಕವಾಗಿ ಮಡದಿ ಯಶೋಧ ಮನೆಯಲ್ಲಿ ಒಂಟಿಯಾಗಿ ಅಡುಗೆ ಮಾಡುವ ಸಂದರ್ಭದಲ್ಲಿ ಹಿಂಬದಿಯಿಂದ ಬಂದು ತಲೆಗೆ, ಬೆನ್ನಿಗೆ ಹಾಗೂ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಕೊಚ್ಚಲಾಗಿ ಈಕೆ ರಕ್ತಸ್ರಾವದಿಂದ ಕೆಳಗೆ ಬಿದ್ದು ಒದ್ದಾಡುವ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರದಿಂದ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆ ಉಸಿರೇಳಿದ್ದಿದ್ದಾಳೆ ಎಂದು ದೂರದಲ್ಲಿ ದಾಖಲಾಗಿದೆ.
ಮೃತೆ ಯಶೋಧಳ ತಂದೆ ಟಿ. ಬೇಗೂರು ಬಳಿಯ ಕೊನ್ನಯರ ಹಟ್ಟಿ ಗ್ರಾಮದ ಹನುಮಯ್ಯ ಮಗಳ ಸಾವಿನ ಬಗ್ಗೆ ಅಳಿಯ ದೇವರಾಜು ವಿಕೃತ ಮನಸ್ಸಿನ ಬಗ್ಗೆ ಸವಿಸ್ತಾರವಾಗಿ ದೂರು ನೀಡಲಾಗಿ, ದೂರಿನ ಅನ್ವಯ ಅಂದಿನ ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಸಿದ್ದರಾಮೇಶ್ವರ ಅವರ ದೋಷಾರೂಪ ಪಟ್ಟಿ ಸಲ್ಲಿಸಲಾಗಿ ಮಧುಗಿರಿಯ ಮಾನ್ಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ ಕರಕೇರ, ನ್ಯಾಯಾಲಯದಲ್ಲಿ ಅಭಿಯೋಜನರ ಪರವಾಗಿ ಬಿಎಂ ನಿರಂಜನ ಮೂರ್ತಿ ಸರ್ಕಾರಿ ಅಭಿಯೋಜಕರ ವಾದದ ವಾದ ಆಲಿಸಿ ಅಂತಿಮವಾಗಿ ಮಾರ್ಚ್ 9ರಂದು ಆರೋಪಿ ಗೋವಿಂದರಾಜು ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಿ ತೀರ್ಪು ನೀಡಲಾಗಿ, ತಂಡದ ಪುರಾಣವನ್ನ ಯಶೋದ ಅವರ ಮಕ್ಕಳಾದ ಅಕ್ಷಿತಾ ಹಾಗೂ ಲಿಖಿತ್ ಅವರಿಗೆ ಪರಿಹಾರ ಹಣವಾಗಿ ನೀಡಲು ಆದೇಶಿಸಿದೆ.