Karunadu Studio

ಕರ್ನಾಟಕ

Viral News: ಮದ್ವೆ ಸಂಭ್ರಮದಲ್ಲಿದ್ದ ವಧುವಿನ ಮನೆಯವ್ರಿಗೆ ಕಾದಿತ್ತು ಬಿಗ್‌ ಶಾಕ್! ಅಷ್ಟಕ್ಕೂ ನಡೆದಿದ್ದೇನು? – Kannada News | Viral Video: Bride’s family refuses to pay for guests’ meals


ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಅಮೂಲ್ಯವಾದ ದಿನವಾಗಿದೆ. ಹಾಗಾಗಿ ಈ ದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಕೆಲವೊಂದು ಮದುವೆಗಳು ಕ್ಷುಲಕ ಕಾರಣಕ್ಕೆ ರದ್ದಾಗುತ್ತದೆ. ಅಂತಹ ಎಷ್ಟೋ ಮದುವೆಗಳು ರದ್ದಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವರದಿಯಾಗಿತ್ತು. ಇದೀಗ ಮತ್ತೊಂದು ಮದುವೆ ಊಟದ ವಿಚಾರಕ್ಕೆ ರದ್ದಾಗಿದೆಯಂತೆ. ವರನು ಆಹ್ವಾನಿಸಿದ 600 ಅತಿಥಿಗಳ ಊಟಕ್ಕಾಗಿ ವಧುವಿನ ಕುಟುಂಬವು ಹಣ ಪಾವತಿಸಲು ನಿರಾಕರಿಸಿದ ಕಾರಣ ವರ ಮದುವೆಯನ್ನು ರದ್ದುಗೊಳಿಸಿದ್ದಾನೆ. ಈ ವಿಚಾರವನ್ನು ವಧುವಿನ ಸಹೋದರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಇದು ಈಗ ವೈರಲ್(Viral News) ಆಗಿದೆ.

ಆತ ತನ್ನ ಪೋಸ್ಟ್‌ನಲ್ಲಿ ಹಣದ ಬೇಡಿಕೆಯಿಂದಾಗಿ ತನ್ನ ಸಹೋದರಿಯ ಮದುವೆಯನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾನೆ. ತನ್ನ ಸಹೋದರಿ ಸಂಬಂಧಿಕರ ಮೂಲಕ ತಮಗೆ ಪರಿಚಯವಿದ್ದ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಮದುವೆಯ ಶುರುವಿನ ಮಾತುಕತೆಯಲ್ಲಿ ಎರಡೂ ಕುಟುಂಬಗಳು ತಮ್ಮ ತಮ್ಮ ಅತಿಥಿಗಳ ಊಟೋಪಚಾರದ ಖರ್ಚನ್ನು ಪಾವತಿಸಲು ಒಪ್ಪಿಕೊಂಡಿದ್ದವು. ಮದುವೆ ಮೇ ತಿಂಗಳಿನಲ್ಲಿ ನಡೆಯಬೇಕಾಗಿತ್ತು. ಆದರೆ ವರನು ಕಾಲ್ ಮಾಡಿ ಇದ್ದಕ್ಕಿದ್ದಂತೆ ತನ್ನ 600 ಮಂದಿ ಅತಿಥಿಗಳ ಊಟಕ್ಕಾಗಿ ಹಣವನ್ನು ಪಾವತಿಸಬೇಕೆಂದು ಒತ್ತಾಯಿಸಿದ್ದಾನೆ. ಆದರೆ ತಾವು ಶ್ರೀಮಂತರಲ್ಲ, ತಮ್ಮ ಬಳಿ ಅಷ್ಟೊಂದು ಹಣವಿರದ ಕಾರಣ ಅದನ್ನು ನಿರಾಕರಿಸಿದೆವು ಹಾಗಾಗಿ ವರ ಈ ಮದುವೆಯನ್ನು ರದ್ದುಗೊಳಿಸಿದ್ದಾನೆ ಎಂದು ಹೇಳಿದ್ದಾನೆ.

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಲ್ಲಿ ವಧುವಿನ ಕುಟುಂಬವನ್ನು ಬೆಂಬಲಿಸಿ ಅನೇಕ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಅನೇಕರು ವರನು ಮದುವೆಗಿಂತ ಹಣದಲ್ಲಿ ಆಸಕ್ತಿ ಹೊಂದಿದ್ದಾನೆ. ಹಾಗಾಗಿ ಈ ಮದುವೆ ರದ್ದಾಗಿದ್ದೆ ಒಳ್ಳೆಯದು ಎಂದು ಹೇಳಿದ್ದಾರೆ. “ಮದುವೆಯಾಗಿ ವಿಚ್ಛೇದನ ಪಡೆಯವುದಕ್ಕಿಂತ ನಿಶ್ಚಿತಾರ್ಥ ಮುರಿದು ಬಿದ್ದಿದ್ದು ಒಳ್ಳೆಯದಾಯಿತು”ಎಂದು ನೆಟ್ಟಿಗರೊಬ್ಬರು ಸಲಹೆ ನೀಡಿದ್ದಾರೆ.“ಇದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ. ಮದುವೆಯನ್ನು ರದ್ದುಗೊಳಿಸುವುದು ಯಾವುದೇ ಅಪರಾಧವಲ್ಲ. ಮದುವೆ ಸಮಾರಂಭದ ವಿಧ ಮತ್ತು ವೆಚ್ಚಗಳ ಬಗ್ಗೆ ನಿಮಗೆ ಭಿನ್ನಾಭಿಪ್ರಾಯವಿತ್ತು. ಇದು ವರದಕ್ಷಿಣೆ ತಡೆ ಕಾಯ್ದೆ, 1861 ರ ಪ್ರಕಾರ ವರದಕ್ಷಿಣೆಯ ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ” ಎಂದು ಇನ್ನೊಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ನಡುರಸ್ತೆಯಲ್ಲಿ ನಡೀತು ಮಾರಾಮಾರಿ; ಶಾಕಿಂಗ್‌ ವಿಡಿಯೊ ನೋಡಿ!

ಈ ಹಿಂದೆ ಸೂರತ್‍ನ ಪ್ರಸಿದ್ಧ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಮದುವೆಯೊಂದರಲ್ಲಿ ಅತಿಥಿಗಳಿಗೆ ಸರಿಯಾಗಿ ಊಟ ಸಿಗದೆ ಊಟದಲ್ಲಿ ಕೊರತೆಯಾದ ಕಾರಣ ಕೋಪಗೊಂಡ ವರನ ಕಡೆಯವರು ವಧುವಿನ ಕುಟುಂಬದ ಜೊತೆ ಜಗಳವಾಡಿ ಮದುವೆ ರದ್ದು ಮಾಡಲು ಮುಂದಾಗಿದ್ದಾರೆ. ಈ ಘಟನೆ ಕೊನೆಗೆ ಪೊಲೀಸ್‍ ಠಾಣೆಯ ಮೆಟ್ಟಿಲೇರಿದ ಕಾರಣ ಪೊಲೀಸರು ಈ ಸಮಸ್ಯೆಯನ್ನು ಪರಿಹರಿಸಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »