Karunadu Studio

ಕರ್ನಾಟಕ

Kadambotsava 2025: ಕದಂಬೋತ್ಸವ-2025; ಕದಂಬ ಸಾಂಸ್ಕೃತಿಕ ಕಲಾ ಮೆರವಣಿಗೆಗೆ ಚಾಲನೆ – Kannada News | Kadambotsava 2025 Kadamba Cultural Art procession


ಶಿರಸಿ: ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ ಕದಂಬೋತ್ಸವ- 2025ರ ಅಂಗವಾಗಿ ಕಳೆದ ಎರಡು ದಿನದಿಂದ ಕ್ರೀಡಾಕೂಟ ಮತ್ತು ಸಾಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಶನಿವಾರ ʼಕದಂಬ ಸಾಂಸ್ಕೃತಿಕ ಕಲಾ ಮೆರವಣಿಗೆಯು ಮಧುಕೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ಮಯೂರವರ್ಮ ವೇದಿಕೆಯವರೆಗೆ ಸಾಗಿತು. ವಿವಿಧ ಕಲಾಪ್ರಕಾರಗಳನ್ನೊಳಗೊಂಡ ತಂಡಗಳು ಮೆರವಣಿಗೆಗೆ ಭವ್ಯ ಆಕರ್ಷಣೆ ನೀಡಿದವು.

ಮೆರವಣಿಗೆಯಲ್ಲಿ ವಿದ್ಯಾರ್ಥಿನಿಯರ ಪೂರ್ಣಕುಂಭ ಸ್ವಾಗತ, ಬನವಾಸಿಯ ನಾಗಶ್ರೀ ಪ್ರೌಢಶಾಲೆಯ ಸಮವಸ್ತ್ರ ತಂಡ, ಬೇಡರ ವೇಷ, ನರಗುಂದ ಮಹಿಳಾ ತಂಡದ ಡೊಳ್ಳುಕುಣಿತ, ಶಿರಸಿ ತಾಲೂಕಿನ ದೈವಜ್ಞ ಮಹಿಳಾ ಮಂಡಳದ ಚಂಡೆ ವಾದ್ಯ, ಶಿವಶಂಕರ ತುಮಕೂರು ತಂಡದ ಅರೆವಾದ್ಯ, ಆನಂದ ಜೋಗಿಯವರ ಕೀಲುಕುದುರೆ, ಉದಯಕುಮಾರ ಕಾರಬಾಳಿಯ ವೀರಗಾಸೆ, ಹೊನ್ನಾವರದ ಸುಗ್ಗಿ ತಂಡದ ಸುಗ್ಗಿ ಕುಣಿತ, ಡೊಳ್ಳುಚಂದ್ರ ಬೆಂಗಳೂರ ಅವರ ಕೋಳಿ ನೃತ್ಯ ಜನಮನ ರಂಜಿಸಿದವು.

ನಿಖಿಲ ನಾಯಕ ಸಂಗಡಿಗರ ಮರಕಾಲು ನೃತ್ಯ, ಫಕೀರಪ್ಪ ಭಜಂತ್ರಿ ಬನವಾಸಿಯ ಪಂಚವಾದ್ಯ, ಕಲಘಟಗಿಯ ಮಾರಿಕಾಂಬಾ ಯುವತಿ ಸಂಘದ ಲಮಾಣಿ ನೃತ್ಯ, ಮೊಗವಳ್ಳಿಯ ಬಸವೇಶ್ವರ ಡೊಳ್ಳು ಮೇಳದ ಡೊಳ್ಳು ಕುಣಿತ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಯ ರೂಪಕ ತಂಡ ಹಾಗೂ ಇನ್ನಿತರ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಈ ಸುದ್ದಿಯನ್ನೂ ಓದಿ | IRTC: ಏ. 15 ರಿಂದ ತತ್ಕಾಲ್‌ ಬುಕಿಂಗ್‌ಗೆ ಹೊಸ ನಿಮಯ ಜಾರಿ

ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಕದಂಬ ಜ್ಯೋತಿಗೆ ಚಾಲನೆ ನೀಡಿದರು. ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕುಮಾರ ಕಾಂದೂ, ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ, ತಹಸೀಲ್ದಾರ್ ಶೈಲೇಶ ಪರಮಾನಂದ, ಡಿಡಿಪಿಐ ಬಸವರಾಜ್ ಪಿ, ತಾಲೂಕು ಪಂಚಾಯಿತಿ ಇಒ ಸತೀಶ ಹೆಗಡೆ ಹಾಗೂ ಇತರರು ಇದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »