Karunadu Studio

ಕರ್ನಾಟಕ

Two-ball rule in ODIs: ಏಕದಿನ ಕ್ರಿಕೆಟ್‌ನಲ್ಲಿ ಎರಡು ಚೆಂಡುಗಳ ನಿಯಮ ರದ್ದು! – Kannada News | ICC mulls key tweak to two-ball rule in ODIs


ದುಬೈ: ಏಕದಿನ ಕ್ರಿಕೆಟ್‌ನ 2 ಚೆಂಡುಗಳ(Two-ball rule in ODIs) ಬಳಕೆ ನಿಯಮವನ್ನು ರದ್ದುಗೊಳಿಸಲು ಐಸಿಸಿ(ICC) ಚಿಂತನೆ ನಡೆಸುತ್ತಿದೆ. ಈ ಮೂಲಕ ಬ್ಯಾಟರ್‌ಗಳಿಗೆ ಅನುಕೂಲಕರವಾಗಿದೆ ಎಂಬ ದೀರ್ಘಕಾಲದ ಕಳವಳಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಈ ಬಗ್ಗೆ ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ(Sourav Ganguly) ಮುಂದಾಳತ್ವದ ಕ್ರಿಕೆಟ್‌ ಸಮಿತಿ ಈಗಾಗಲೇ ಐಸಿಸಿಗೆ ಶಿಫಾರಸು ಮಾಡಿದೆ ಎನ್ನಲಾಗುತ್ತಿದೆ. ಐಸಿಸಿ ಮಂಡಳಿಯು ಹರಾರೆಯಲ್ಲಿ (ಜಿಂಬಾಬ್ವೆ) ಈ ವಿಷಯದ ಮೇಲೆ ಭಾನುವಾರ ಚರ್ಚೆ ನಡೆಸಲಿದೆ. ಏಕದಿನ ಪಂದ್ಯಗಳಲ್ಲಿ ಎರಡು ಹೊಸ ಚೆಂಡುಗಳ ಬಳಕೆ ದಶಕಕ್ಕೂ ಹೆಚ್ಚು ಸಮಯದಿಂದ ಚಾಲ್ತಿಯಲ್ಲಿದೆ.

ಪ್ರಸಕ್ತ ಏಕದಿನ ಕ್ರಿಕೆಟ್‌ನಲ್ಲಿ ಪಂದ್ಯದ ಆರಂಭದಿಂದಲೇ ಪ್ರತಿ ಓವರ್ ನಂತರ ಬ್ಯಾಟರ್‌ಗಳು ಪಿಚ್‌ನ ಬದಿಯನ್ನು ಬದಲಾಯಿಸುವ ವೇಳೆ ಚೆಂಡು ಕೂಡ ಬದಲಾಗುತ್ತಿದೆ. ಚೆಂಡು ತನ್ನ ಹೊಳಪು ಉಳಿಸಿಕೊಂಡು ಬ್ಯಾಟರ್‌ಗಳಿಗೆ ಸರಾಗವಾಗಿ ರನ್‌ ಗಳಿಸಲು ಅನುಕೂಲವಾಗುತ್ತದೆ. ಕ್ಷೇತ್ರರಕ್ಷಣೆ ಮಿತಿಯೂ ಇರುವುದರಿಂದ ಬ್ಯಾಟರ್‌ಗಳಿಗೆ ಚೆಂಡನ್ನು ಹೊಡೆದಟ್ಟಲು ಹೆಚ್ಚು ಅವಕಾಶವಾಗುತ್ತದೆ.

ಇದನ್ನೂ ಓದಿ IPL 2025: ಶತಕದ ಬಳಿಕ ಅಭಿಷೇಕ್‌ ಶರ್ಮಾ ಪ್ರದರ್ಶಿಸಿದ ಚೀಟಿಯಲ್ಲಿ ಬರೆದಿದ್ದೇನು?

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸಹಿತ ಕೆಲ ಮಾಜಿ ಕ್ರಿಕೆಟಿಗರು ಏಕದಿನ ಕ್ರಿಕೆಟ್‌ನಲ್ಲಿ 2 ಚೆಂಡು ಬಳಸುವುದನ್ನು ಟೀಕಿಸಿದ್ದರು. ಇದರಿಂದಾಗಿ ಏಕದಿನ ಕ್ರಿಕೆಟ್‌ನಲ್ಲಿ ರಿವರ್ಸ್ ಸ್ವಿಂಗ್ ಮಾಯವಾಗುತ್ತಿದೆ ಎಂದು ದೂರಿದ್ದರು.

ಪ್ರಸಕ್ತ ಏಕದಿನ ಮಾದರಿಯಲ್ಲಿ ನಡೆಯುತ್ತಿರುವ 19 ವಯೋಮಿತಿ ಪುರುಷರ ವಿಶ್ವಕಪ್ ಅನ್ನು ಟಿ20 ಕ್ರಿಕೆಟ್ ಪ್ರಕಾರಕ್ಕೆ ಬದಲಾಯಿಸಲು ಕೂಡ ಐಸಿಸಿ ಚಿಂತನೆ ನಡೆಸಿದೆ. ಆದರೆ ಇದು ಹಾಲಿ ಪ್ರಸಾರ ಹಕ್ಕು ಒಪ್ಪಂದ ಮುಗಿದ ಬಳಿಕ ಅಂದರೆ 2028ರ ನಂತರವಷ್ಟೇ ಜಾರಿಗೆ ಬರುವ ನಿರೀಕ್ಷೆ ಇದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »