ನಾಯಕನಹಟ್ಟಿ
ವರದಿ : ಹರೀಶ್ ನಾಯಕನಹಟ್ಟಿ
ಡಾ. ಬಿ.ಆರ್. ಅಂಬೇಡ್ಕರ್ರವರ ದೊಡ್ಡ ಶಕ್ತಿಯೇ ಅಪಾರ ಜ್ಞಾನ, ಡಾ. ಬಿ.ಆರ್. ಅಂಬೇಡ್ಕರ್ರವರು ಗ್ರಂಥಾಲಯವನ್ನು ದೇವಾಲಯವೆಂದು ತಿಳಿದವರು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಹೇಳಿದರು.
ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ರವರ ೧೩೪ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ನಂತರ ಮಾತನಾಡಿದ ಅವರು ಡಾ. ಬಿ.ಆರ್. ಅಂಬೇಡ್ಕರ್ ಓದುವುದೇ ಅವರ ಹ ವ್ಯಾಸವಾಗಿತ್ತು, ಅವರಿಗೆ ಮನುಷ್ಯರ ಒಡನಾಟಕ್ಕಿಂತ ಪುಸ್ತಕಗಳ ಒಡನಾಟವೇ ಹೆಚ್ಚು ಆನಂದ ಕೊಡುತ್ತಿತ್ತು.
ಅವರು ಇಡೀ ರಾತ್ರಿ ಓದುತ್ತಲ್ಲೇ ಇರುತ್ತಾರಂತೆ. ಡಾ. ಬಿ.ಆರ್. ಅಂಬೇಡ್ಕರ್ರವರು ಸಾರ್ವಜನಿಕರ ಗ್ರಂಥಾಲಯವನ್ನು ಅತ್ಯಂತ ಹೆಚ್ಚು ಬಳಸುತ್ತಿದ್ದರು. ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲ್ಪಡುವ ಡಾ. ಬಿ.ಆರ್. ಅಂಬೇಡ್ಕರ್ರವರು ಭಾರತೀಯ ಇತಿಹಾಸದಲ್ಲಿ ಅತ್ಯಂತ ಪ್ರಭಾವ ಶಾಲಿಯಾಗಿದ್ದರು.ನೀವು ಒಂದು ದೇವಾಲಯ ನಿರ್ಮಿಸಿದರೆ ನೂರಾರು ಭಿಕ್ಷಕರು ಹುಟ್ಟುತ್ತಾರೆ. ಆದರೆ ಒಂದು ಗ್ರಂಥಾಲಯ ನಿರ್ಮಿಸಿದರೆ ಸಾವಿರಾರು ವಿದ್ಯಾವಂತರು ಉದಯಿಸುತ್ತಾರೆ. ದೀನ ದಲಿತರು, ಶೋಷಿತರು ಮತ್ತು ಹಿಂದುಳಿದವರ ಧ್ವನಿಯಾದರು. ಅವರ ಹಕ್ಕುಗಳನ್ನು ಪಡೆಯಲು ಅವರು ಜೀವನ ವಿಡೀ ಹೋರಾಟ ನಡೆಸಿದರು. ಬಾಬಾ ಸಾಹೇಬ್ರು ಅರ್ಥಶಾಸ್ತçದ ಮಹಾನ್ ವಿದ್ವಾಂಸರು ಆಗಿದ್ದರು.
ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳಿಗಾಗಿ ಹೋರಾಡಿದರು. ಅಂಬೇಡ್ಕರ್ರವರು ೧೮೯೧ರ ಏಪ್ರಿಲ್ ೧೪ರಂದು ಮದ್ಯಪ್ರದೇಶದ ದಲಿತ ಮ್ಹೋವ್ ಕುಟುಂಬದಲ್ಲಿ ಜನಿಸಿದರು.ಓದು ಬರಹ ತಿಳಿದಿರುವ ವ್ಯಕ್ತಿ ತನ್ನ ಸಮುದಾಯದ ಜನರಿಗೆ ಶಿಕ್ಷಣ, ಮೂಢನಂಬಿಕೆ, ದೌರ್ಜನ್ಯಗಳ ಬಗ್ಗೆ ತಿಳಿಸಲಿಲ್ಲ ಎಂದರೇ ಆ ವ್ಯಕ್ತಿ ಬದುಕಿದ್ದು ಸತ್ತಂತೆ ಎನ್ನುವಂತೆ ತಮ್ಮ ಜೀವನವನ್ನು ಇತರರ ಹೇಳಿಗೆಗಾಗಿ ಶೃಮಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಓ.ಶ್ರೀನಿವಾಸ್, ಉಪಾಧ್ಯಕ್ಷೆ ಸರ್ವಮಂಗಳ ಉಮಾಪತಿ, ಪ.ಪಂ.ಸದ್ಯಸರುಗಳಾದ ಜೆ.ಆರ್.ರವಿಕುಮಾರ್, ಸುನಿತಮುದಿಯಪ್ಪ, ವಿನುತ, ಪಾಪಮ್ಮ, ಎನ್.ಮಹಂತಣ್ಣ, ಓಬಯ್ಯ, ಈರಮ್ಮ, ಜಾಗನೂರಹಟ್ಟಿ ಮಂಜುನಾಥ, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮುದಿಯಪ್ಪ, ಬಂಗಾರನಾಯಕ , ಮಾಜಿ ಗ್ರಾ.ಪಂ. ಸದಸ್ಯ ಶ್ರೀಕಾಂತ್ ಆರ್. ನಾಗರಾಜ ಮೀಸೆ ಪ.ಪಂ. ಸಿಬ್ಬಂದಿ ವರ್ಗ, ಪೌರಕಾರ್ಮಿಕರು ಹಾಗೂ ಇನ್ನಿತರರು ಇದ್ದರು.