Karunadu Studio

ಕರ್ನಾಟಕ

Prithvi Bhat Marriage Controversy: ತಪ್ಪಾಯ್ತು ಅಪ್ಪ ದಯವಿಟ್ಟು ಕ್ಷಮಿಸಿ! ಗಾಯಕಿ ಪೃಥ್ವಿ ಭಟ್ ಆಡಿಯೊ ಮೆಸೇಜ್! – Kannada News | singer Prithvi Bhat Marriage Controversy and her audio message goes viral


ಬೆಂಗಳೂರು: ಕನ್ನಡದ ಜನಪ್ರಿಯ ಯುವ ಗಾಯಕಿ ಪೃಥ್ವಿ ಭಟ್ ಅವರ ಪ್ರೇಮ ವಿವಾಹ (Prithvi Bhat Marriage Controversy) ಮತ್ತು ಇದನ್ನು ವಿರೋಧಿಸಿ ಅವರ ಅಪ್ಪ ಬಿಡುಗಡೆ ಮಾಡಿರುವ ಆಡಿಯೊ (Audio message) ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಡುವೆ, ಗಾಯಕಿ ಪೃಥ್ವಿ ಭಟ್ ತಾವೂ ಒಂದು ವಿಡಿಯೊ ಬಿಡುಗಡೆ ಮಾಡಿ ಅಪ್ಪನ ಕ್ಷಮೆ ಕೇಳಿದ್ದಾರೆ. ದಯವಿಟ್ಟು ಕ್ಷಮಿಸಿಬಿಡಿ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದಾರೆ.

ಹಾಯ್ ಅಪ್ಪ, ನನ್ನಿಂದ ತಪ್ಪಾಗಿದೆ. ದಯವಿಟ್ಟು ಕ್ಷಮಿಸಿ. ಪ್ಲೀಸ್ ನನ್ನನ್ನು ಕ್ಷಮಿಸಿ. ನಾನು ಮತ್ತು ಅಭಿಷೇಕ್ ಪ್ರೀತಿಸುತ್ತಿದ್ದೆವು. ಈ ವಿಷಯವನ್ನು ಸಂಗೀತ ಗುರು, ಸರಿಗಮಪ ರಿಯಾಲಿಟಿ ಶೋ ಜೂರಿ ನರಹರಿ ದೀಕ್ಷಿತ್ ಅವರು ಮಾರ್ಚ್ 7ರಂದು ನಮ್ಮ ಮನೆಗೆ ಬಂದು ನಿಮಗೆ ವಿಷಯ ಹೇಳಿದ್ದರು. ಆಗಲೂ ನಾನು, ಅಭಿಷೇಕ್‌‌ರನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದೆ‌.

ಆದರೆ ಮನೆಯಲ್ಲಿ ನೀವು ಒತ್ತಡ ಹೇರಿದ್ದರಿಂದ ನಾನು ಅವರಿಂದ ದೂರ ಸರಿಯುವುದಾಗಿ ಹೇಳಿದ್ದೆ. ಆದರೆ ನನ್ನ ಮನಸ್ಸಿನಿಂದ ಅಭಿ ದೂರ ಆಗಿರಲಿಲ್ಲ. ಮನೆಯಲ್ಲಿ ನನ್ನ ಮೇಲೆ ಒತ್ತಡ ಹೆಚ್ಚುತ್ತ ಹೋಯಿತು. ಸಂಗೀತ ಕಾರ್ಯಕ್ರಮಕ್ಕೂ ಹೋಗದಂತೆ ಒತ್ತಾಯಿಸಲಾಯಿತು. ಶೋಗೆ ಹೋಗದಂತೆ ನಿರ್ಬಂಧಿಸಲಾಯಿತು. ನೀವೇ ನನ್ನನ್ನು ಎಲ್ಲೆಡೆ ಕರೆದುಕೊಂಡು ಹೋಗಲು ಶುರು ಮಾಡಿದಿರಿ. ಮ್ಯೂಸಿಕ್ಕೇ ಬಿಡು ಅನ್ನುವಲ್ಲಿಯವರೆಗೆ ಹೋಯಿತು. ಹಾಗಾಗಿ ನಾನು ಭಯಗೊಂಡು ಮನೆ ಬಿಟ್ಟು ಹೋದೆ ಮತ್ತು ಅಭಿಷೇಕ್ ರನ್ನು ಮದುವೆಯಾದೆ.

ಅಪ್ಪ ನೀವೀಗ ಹವ್ಯಕರ ಗ್ರೂಪ್ ಗಳಲ್ಲಿ ಮತ್ತು ಬೇರೆ ಬೇರೆ ಗ್ರೂಪ್ ಗಳಲ್ಲಿ ಆಡಿಯೊ ಮೆಸೆಜ್ ಹಾಕಿ ನರಹರಿ ದೀಕ್ಷಿತ್ ಮತ್ತು ನನ್ನ ಬಗ್ಗೆ ಆರೋಪ ಮಾಡಿದ್ದೀರಿ.

ವಾಸ್ತವವಾಗಿ ನರಹರಿ ದೀಕ್ಷಿತರಿಗೂ ನಮ್ಮ ಮದುವೆಗೂ ಯಾವುದೇ ಸಂಬಂಧವಿಲ್ಲ. ಮದುವೆ ಸ್ಥಳಕ್ಕೆ ಬರಲು ನಾನೇ ಅವರಿಗೆ ಹೇಳಿದ್ದೆ. ಹಾಗಾಗಿ ಅವರು ಬಂದು ಆಶೀರ್ವಾದ ಮಾಡಿದರು. ಇದರಲ್ಲಿ ಅವರ ತಪ್ಪು ಏನೂ ಇಲ್ಲ. ನಾನು ಮೊದಲೂ ಹೇಳುತ್ತಿದ್ದೆ. ಈಗಲೂ ಹೇಳುತ್ತೇನೆ. ಅವರದೇನೂ ತಪ್ಪಿಲ್ಲ.

ಅಪ್ಪ, ದೀಕ್ಷಿತ್ ಸರ್ ಮೇಲಿರುವ ದ್ವೇಷ, ಕೋಪ ಎಲ್ಲವನ್ನೂ ಬಿಡಿ ಪ್ಲೀಸ್. ಅವರದೇನೂ ತಪ್ಪಿಲ್ಲ. ಹೌದು, ನಾನು ಮಾಡಿದ್ದು ತಪ್ಪು. ಮದುವೆಯಾದ ಮರುದಿನ ನಾನೇ ನಿಮಗೆ ಸಾರಿ ಅಂತ ಮೆಸೆಜ್ ಮಾಡಿದ್ದೆ. ದಯವಿಟ್ಟು ಕ್ಷಮಿಸಿ ಅಪ್ಪ ಎಂದು ಪೃಥ್ವಿ ಪರಿಪರಿಯಾಗಿ ಕೇಳಿಕೊಂಡಿದ್ದಾರೆ.

ಅವರು ಕಳುಹಿಸಿರುವ ಆಡಿಯೊ ಇಲ್ಲಿದೆ ಕೇಳಿ…

ಕನ್ನಡ ಕಿರುತೆರೆಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ ಸೀಸನ್ 15’ರ ಸ್ಪರ್ಧಿಯಾಗಿ ಮತ್ತು ಆ ಬಳಿಕ ಕಿರುತೆರೆಯ ಕೆಲವು ಧಾರಾವಾಹಿಗಳ ಹಾಡಿನ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಪೃಥ್ವಿ ಭಟ್ ಅವರು ಅಪ್ಪ ಅಮ್ಮನ ವಿರೋಧವನ್ನೂ ಲೆಕ್ಕಿಸದೆ ಮನೆ ತೊರೆದು ಪ್ರೀತಿಸಿದವನ ಜತೆ ಮದುವೆಯಾಗಿದ್ದರು. ಅವರು ಜೀ ಕನ್ನಡದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಎಂಬುವರನ್ನು ಇತ್ತೀಚೆಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು.

ಇದರಿಂದ ಮನನೊಂದ ಅಪ್ಪ ಸುದೀರ್ಘ ಆಡಿಯೊ ಮಾಡಿ ನೋವು ತೋಡಿಕೊಂಡಿದ್ದರು. ಮುದ್ದಿನ ಮಗಳು ಮನೆ ಬಿಟ್ಟು ಓಡಿ ಹೋಗಲು ಯಾರು ಕಾರಣರು ಎಂಬ ಬಗ್ಗೆಯೂ ಮಾಹಿತಿ ನೀಡಿದ್ದರು. ತಮ್ಮ ಮಗಳನ್ನು ವಶೀಕರಣ ಮಾಡಿ ಮದುವೆಯಾಗಿದ್ದಾರೆ ಎಂದೂ ಪೃಥ್ವಿ ಭಟ್ ಅವರ ತಂದೆ ಶಿವಪ್ರಸಾದ್ ಆರೋಪಿಸಿದ್ದರು.

ತಮ್ಮ ಮಗಳ ಮೇಲೆ ವಶೀಕರಣ ವಿದ್ಯೆ ಪ್ರಯೋಗಿಸಲಾಗಿದೆ. ಇದರ ಹಿಂದೆ ಜೀ ಟಿವಿ ಕನ್ನಡದ ರಿಯಾಲಿಟಿ ಶೋನ ಜೂರಿ ನರಹರಿ ದೀಕ್ಷಿತ್ ಅವರ ಕೈವಾಡವಿದೆ ಎಂದು ಪೃಥ್ವಿ ಭಟ್ ಅವರು ಆರೋಪಿಸಿದ್ದರು.

ಕನ್ನಡ ಕಿರುತೆರೆಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ ಸೀಸನ್ 15’ರ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಪೃಥ್ವಿ ಭಟ್ ಆಡಿಶನ್‌ನಲ್ಲಿಯೇ ಕಿರುತೆರೆ ವೀಕ್ಷಕರ ಜೊತೆಗೆ ತೀರ್ಪುಗಾರರ ಮನಗೆದ್ದಿದ್ದರು. ಇವರು ಹಾಡಿರುವ ಭಕ್ತಿ ಗೀತೆಗಳೂ ಜನಪ್ರಿಯವಾಗಿವೆ.

ಇದನ್ನೂ ಓದಿ: Singer Prithvi Bhat: ಮಗಳನ್ನು ವಶೀಕರಣ ಮಾಡಿ ಮದ್ವೆ ಮಾಡಿಸಿದ್ದಾರೆ… ಗಾಯಕಿ ಪೃಥ್ವಿ ಭಟ್‌ ತಂದೆ ಆಡಿಯೊ ವೈರಲ್‌



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »