Karunadu Studio

ಕರ್ನಾಟಕ

Pahalgam Terror Attack: ಪಹಲ್ಗಾಮ್ ದಾಳಿ ಹಿಂದಿನ ರೆಸಿಸ್ಟೆನ್ಸ್ ಫ್ರಂಟ್ ಎಂದರೇನು? ಮಾಸ್ಟರ್‌ಮೈಂಡ್ ಸೈಫುಲ್ಲಾ ಖಾಲಿದ್ ಯಾರು? – Kannada News | The Resistance Front Terrorist Group Behind Pahalgam Attack- Saifullah Khalid Is a Mastermind


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ (Pahalgam Terror Attack) ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ (Terrorist Attack) ಕನಿಷ್ಟ 26 ಪ್ರವಾಸಿಗರು ಸಾವನ್ನಪ್ಪಿದ್ದು, ಈ ಘಟನೆಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ (LeT) ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (TRF) ಒಪ್ಪಿಕೊಂಡಿದೆ. ಈ ದಾಳಿಯ ಮಾಸ್ಟರ್‌ಮೈಂಡ್ ಎಂದು ಶಂಕಿಸಲಾಗಿರುವ ಸೈಫುಲ್ಲಾ ಖಾಲಿದ್‌ನ (Saifullah Khalid) ಕುರಿತು ಗುಪ್ತಚರ ವರದಿಗಳು ಮಾಹಿತಿ ಬಿಚ್ಚಿಟ್ಟಿವೆ. ಹಾಗಿದ್ರೆ ಯಾವುದು ಈ ಉಗ್ರ ಸಂಘಟನೆ? ಈ ನರಮೇಧದ ಹಿಂದಿರುವ ಸಂಚುಕೋರ ಯಾರು? ಇಲ್ಲಿದೆ ಡಿಟೇಲ್ಸ್‌

2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಂಡ (ಆರ್ಟಿಕಲ್ 370) ನಂತರ, ಲಷ್ಕರ್-ಎ-ತೊಯ್ಬಾದ ಪರೋಕ್ಷ ಘಟಕವಾಗಿ TRF ರಚನೆಯಾಯಿತು. ಕರಾಚಿಯನ್ನು ಕೇಂದ್ರವಾಗಿರಿಸಿಕೊಂಡಿರುವ ಈ ಸಂಘಟನೆ, ತೆಹ್ರೀಕ್-ಎ-ಮಿಲ್ಲತ್ ಇಸ್ಲಾಮಿಯಾ, ಗಜನವಿ ಹಿಂದ್ ಸೇರಿದಂತೆ ವಿವಿಧ ಗುಂಪುಗಳ ಸಮ್ಮಿಶ್ರಣವಾಗಿದೆ ಎಂದು ವರದಿಯಾಗಿದೆ. ಗೃಹ ಸಚಿವಾಲಯದ ಅಧಿಸೂಚನೆಯ ಪ್ರಕಾರ, “TRF ಆನ್‌ಲೈನ್ ಮಾಧ್ಯಮದ ಮೂಲಕ ಯುವಕರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ನೇಮಕ ಮಾಡುತ್ತಿದ್ದು, ಭಯೋತ್ಪಾದನೆಯ ಪ್ರಚಾರ, ಭಯೋತ್ಪಾದಕರ ಒಳನುಸುಳುವಿಕೆ, ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರನ್ನು ಭಾರತದ ವಿರುದ್ಧ ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ಪ್ರಚೋದಿಸುತ್ತಿದೆ”.

ಪಾಕಿಸ್ತಾನವು LeT ಮತ್ತು ಜೈಶ್-ಎ-ಮೊಹಮ್ಮದ್‌ನ ಧಾರ್ಮಿಕ ಸಂಗತಿಗಳನ್ನು ತಪ್ಪಿಸಲು, TRFಗೆ ‘ರೆಸಿಸ್ಟೆನ್ಸ್’ ಎಂಬ ಹೆಸರನ್ನು ನೀಡಿತು, ಇದು ಜನರ ಚಳವಳಿಯಂತೆ ಕಾಣಲು ರೀಬ್ರಾಂಡಿಂಗ್ ಮಾಡಲಾಯಿತು. 2023ರ ಜನವರಿಯಲ್ಲಿ, ಗೃಹ ಸಚಿವಾಲಯವು TRF ಅನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ “ಭಯೋತ್ಪಾದಕ ಸಂಘಟನೆ” ಎಂದು ಘೋಷಿಸಿತು. TRF ಕಮಾಂಡರ್ ಶೇಖ್ ಸಜ್ಜಾದ್ ಗುಲ್ ಅವರನ್ನು ಭಯೋತ್ಪಾದಕ ಎಂದು ಗುರುತಿಸಲಾಗಿದ್ದು, “TRF ಚಟುವಟಿಕೆಗಳು ಭಾರತದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಹಾನಿಕಾರಕವಾಗಿವೆ. ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ಕೊಲೆಗೆ ಯೋಜನೆ, ಶಸ್ತ್ರಾಸ್ತ್ರ ಸಾಗಾಣಿಕೆ, ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುವ ಹಲವು ಪ್ರಕರಣಗಳು TRF ವಿರುದ್ಧ ದಾಖಲಾಗಿವೆ” ಎಂದು ಗೃಹ ಸಚಿವಾಲಯ ತಿಳಿಸಿದೆ.

TRF ದಾಳಿಗಳು

TRFನ ಚಟುವಟಿಕೆಗಳು 2020ರಲ್ಲಿ ಸೋಪೋರ್ ಮತ್ತು ಕುಪ್ವಾರಾದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಓವರ್‌ ದಿ ಗ್ರೌಂಡ್ ವರ್ಕರ್ಸ್ (OGWs) ಮಾಡ್ಯೂಲ್ ಭೇದಿಸಿದಾಗ ಗೋಚರಿಸಿದವು. ಬಂಧಿತ OGWs, ಹೊಸ ಸಂಘಟನೆಗೆ ಯುವಕರನ್ನು ನೇಮಕ ಮಾಡುತ್ತಿರುವುದಾಗಿ ಬಹಿರಂಗಪಡಿಸಿದರು. 2020ರಿಂದ TRF ಕಣಿವೆಯಲ್ಲಿ ದಾಳಿಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಲಾರಂಭಿಸಿತು, ಇದು LeT, ಜೈಶ್, ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಸಾಂಪ್ರದಾಯಿಕ ಸಂಘಟನೆಗಳಿಗೆ ವ್ಯತಿರಿಕ್ತವಾಗಿತ್ತು. 2022ರ ಡಾಟಾ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊಲ್ಲಲಾದ 172 ಭಯೋತ್ಪಾದಕರಲ್ಲಿ 108 ಮಂದಿ TRFಗೆ ಸಂಬಂಧಿಸಿದವರಾಗಿದ್ದರು. ಇದೇ ರೀತಿ, 100 ಹೊಸ ಭಯೋತ್ಪಾದಕರಲ್ಲಿ 74 ಮಂದಿಯನ್ನು TRF ನೇಮಕ ಮಾಡಿತ್ತು. ಕಳೆದ ವರ್ಷ ಗಂಡೇರ್‌ಬಾಲ್‌ನಲ್ಲಿ ನಡೆದ ದಾಳಿಯಲ್ಲಿ TRF ಭಾಗಿಯಾಗಿತ್ತು, ಇದರಲ್ಲಿ ಉತ್ತರ ಕಾಶ್ಮೀರದ ನಿರ್ಮಾಣ ಸ್ಥಳದಲ್ಲಿ ಏಳು ಜನರನ್ನು ಗುಂಡಿಟ್ಟು ಕೊಲ್ಲಲಾಗಿತ್ತು.

ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್ ಸೈಫುಲ್ಲಾ ಖಾಲಿದ್ ಯಾರು?

ಸೈಫುಲ್ಲಾ ಖಾಲಿದ್ ಅಥವಾ ಸೈಫುಲ್ಲಾ ಕಾಸುರಿ ಲಷ್ಕರ್-ಎ-ತೊಯ್ಬಾದ ಉಪ ಮುಖ್ಯಸ್ಥನಾಗಿದ್ದು, ಪಾಕಿಸ್ತಾನದ ಭಯೋತ್ಪಾದಕ ಹಫೀಜ್ ಸಯೀದ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ. ಪಾಕಿಸ್ತಾನದ ಸಂಪೂರ್ಣ ಬೆಂಬಲದೊಂದಿಗೆ ಸೇನಾ ಅಧಿಕಾರಿಗಳ “ಮೆಚ್ಚಿನ ಸಂಪತ್ತು” ಎಂದೇ ಗುರುತಿಸಲ್ಪಟ್ಟಿದ್ದಾನೆ. ಖಾಲಿದ್ ತನ್ನ ಜಿಹಾದಿ ಭಾಷಣಗಳಿಗೆ ಕುಖ್ಯಾತನಾಗಿದ್ದಾನೆ. ವರದಿಗಳ ಪ್ರಕಾರ, ಪಹಲ್ಗಾಮ್ ದಾಳಿಗೆ ಎರಡು ತಿಂಗಳ ಮೊದಲು ಖಾಲಿದ್ ಪಾಕಿಸ್ತಾನದ ಪಂಜಾಬ್‌ನ ಕಾಂಗನ್‌ಪುರ್‌ಗೆ ತಲುಪಿದ್ದ. ಅಲ್ಲಿ ಪಾಕಿಸ್ತಾನ ಸೇನೆಯ ದೊಡ್ಡ ಬೆಟಾಲಿಯನ್ ಇದ್ದು, ಕರ್ನಲ್ ಝಾಹಿದ್ ಝರೀನ್ ಖಟಕ್ ಎಂಬಾತ ಜಿಹಾದಿ ಭಾಷಣಕ್ಕಾಗಿ ಖಾಲಿದ್‌ನನ್ನು ಆಹ್ವಾನಿಸಿದ್ದ. ಖಾಲಿದ್ ಭಾರತದ ವಿರುದ್ಧ ಪಾಕಿಸ್ತಾನ ಸೇನೆಯ ದಾಳಿಗೆ ಪ್ರಚೋದನೆ ನೀಡಿದ್ದ.

ಈ ಸುದ್ದಿಯನ್ನು ಓದಿ: Pahalgam Terror Attack: ಹಿಂತಿರುಗಿ ನೋಡದೆ ಓಡಿದೆವು- ಭಯೋತ್ಪಾದಕ ದಾಳಿಯಿಂದ ಪಾರಾದ ಮಹಾರಾಷ್ಟ್ರ ದಂಪತಿ

ಇದೇ ರೀತಿ, ಖೈಬರ್ ಪಖ್ತುಂಕ್ವಾದ ಸಭೆಯೊಂದರಲ್ಲಿ ಭಾರತದ ವಿರುದ್ಧ ಭಾವನಾತ್ಮಕ ಭಾಷಣ ನೀಡಿದ ಖಾಲಿದ್, “ಇಂದು ಫೆಬ್ರವರಿ 2, 2025, 2026ರ ಫೆಬ್ರವರಿ 2ರೊಳಗೆ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ನಾವು ಶ್ರಮಿಸುತ್ತೇವೆ. ಮುಂದಿನ ದಿನಗಳಲ್ಲಿ ನಮ್ಮ ಮುಜಾಹಿದ್ದೀನ್ ದಾಳಿಗಳನ್ನು ತೀವ್ರಗೊಳಿಸುತ್ತಾರೆ” ಎಂದಿದ್ದ. ಗುಪ್ತಚರ ವರದಿಯ ಪ್ರಕಾರ, ಕಳೆದ ವರ್ಷ ಅಬ್ಬೋಟಾಬಾದ್‌ನ ಕಾಡುಗಳಲ್ಲಿ LeTನ ರಾಜಕೀಯ ಘಟಕ PMML ಮತ್ತು SML ಆಯೋಜಿಸಿದ್ದ ಭಯೋತ್ಪಾದಕ ಶಿಬಿರದಲ್ಲಿ ನೂರಾರು ಪಾಕಿಸ್ತಾನಿ ಯುವಕರು ಭಾಗವಹಿಸಿದ್ದರು. ಖಾಲಿದ್ ಈ ಶಿಬಿರದಲ್ಲಿ ಯುವಕರನ್ನು ಆಯ್ಕೆ ಮಾಡಿ, ಗುರಿ ಕೊಲೆಗೆ ತರಬೇತಿ ನೀಡಿದ್ದ. ಈ ಯುವಕರನ್ನು ಪಾಕಿಸ್ತಾನ ಸೇನೆಯ ಸಹಾಯದಿಂದ ಗಡಿಯಾಚೆಗೆ ಒಳನುಸುಳಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.

ಪಹಲ್ಗಾಮ್‌ನ ಈ ದಾಳಿಯು ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮಕ್ಕೆ ಆಘಾತವನ್ನುಂಟು ಮಾಡಿದ್ದು, ಭದ್ರತಾ ವ್ಯವಸ್ಥೆಯ ಮೇಲೆ ಪ್ರಶ್ನೆಗಳನ್ನು ಎತ್ತಿದೆ. TRFನ ಈ ಕೃತ್ಯವು ರಾಜ್ಯದಲ್ಲಿ ಭಯೋತ್ಪಾದನೆಯ ಹೊಸ ತಂತ್ರವನ್ನು ಬಿಚ್ಚಿಟ್ಟಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »