ವಿಶ್ವವಾಣಿ ಸುದ್ದಿಮನೆ, ಸಕಲೇಶಪುರ: ಕಾಫಿ ತೋಟದಲ್ಲಿ ಕಾಡಾನೆ ದಾಳಿಯಿಂದ ಮಾಲೀಕ ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲೂಕಿನ ಬೈಕೆರೆವ ಗ್ರಾಮದಲ್ಲಿ ನಡೆದಿದೆ.
ಬೈಕೆರೆವ ಗ್ರಾಮದ ಷಣ್ಮುಖ(45) ಮೃತಪಟ್ಟವರು. ಅಮೃತೇಶ್ವರ ಕಾಫಿ ತೋಟದ ಮಾಲಿಕರಾಗಿದ್ದ ಇವರು ತೋಟದಲ್ಲಿ ಕೆಲಸ ಮಾಡಿಸಲು ತೆರಳಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಷಣ್ಮುಖರಿಗೆ 15 ಎಕರೆ ಕಾಫಿ ಕಾಫಿ ತೋಟವಿದೆ. ಇವರ ತೋಟದಲ್ಲಿ ರಾತ್ರಿಯಿಂದಲೇ ಆನೆಗಳ ಹಿಂಡು ಬೀಡು ಬಿಟ್ಟಿದ್ದು, ಈ ಬಗ್ಗೆೆ ಷಣ್ಮುಖರಿಗೆ ಮಾಹಿತಿ ಇತ್ತೆೆನ್ನಲಾಗಿದೆ. ಹೀಗಿದ್ದರೂ ಅವರು ಏಕೆ ತೋಟಕ್ಕೆೆ ಹೋದರು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇನ್ನು ಮೃತಪಟ್ಟಿರುವ ಷಣ್ಮುಖ ಅವರ ಸಾವಿಗೆ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಅವರು ಸಂತಾಪ ವ್ಯಕ್ತಪಡಿಸಿದ್ದು, ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಈ ಹಿಂದೆ ಕಾಡಾನೆ ದಾಳಿಗೆ 15 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಆದರೆ ರಾಜ್ಯ ಸರಕಾರ ಪರಿಹಾರವನ್ನು 25 ಲಕ್ಷಕ್ಕೆೆ ಏರಿಸಿದೆ. ಈ ಪ್ರಕರಣದಲ್ಲಿ 15 ಲಕ್ಷ ಪರಿಹಾರ ನೀಡಲು ಅರಣ್ಯ ಇಲಾಖೆ ಮುಂದಾಗಿತ್ತು. ಆದರೆ ಶಾಸಕರ ಆಗ್ರಹಕ್ಕೆೆ ಮಣಿದು 20 ಲಕ್ಷ ರುಪಾಯಿ ಚೆಕ್ ವಿತರಿಸಲು ಇಲಾಖೆ ತೀರ್ಮಾನಿಸಿದೆ.