Karunadu Studio

ಕರ್ನಾಟಕ

Chikkaballapur News: ಗಣಿಗಾರಿಕೆ, ಅಕ್ರಮ ವಿರುದ್ಧ ಹೋರಾಟ ; ಮಂಚೇನಹಳ್ಳಿ ಬಂದ್ ಯಶಸ್ವಿ – Kannada News | Fight against mining, illegality; Manchenahalli bandh a success


ಮಂಚೇನಹಳ್ಳಿ ; ಜಿಲ್ಲೆಯಲ್ಲಿ ತಲೆಯೆತ್ತಿರುವ ಕಲ್ಲುಗಣಿಗಾರಿಕೆ,ಪರಿಣಾಮವಾಗಿ ನಡೆಯುತ್ತಿರುವ ರೌಡಿವರ್ತನೆಯನ್ನು ಬೇರುಸಹಿತ ಕಿತ್ತಸೆಯಬೇಕು. ಇಲ್ಲವಾದಲ್ಲಿ ರೈತಾಪಿ ವರ್ಗಕ್ಕೆ ಉಳಿಗಾಲ ವಿರುವುದಿಲ್ಲ ಎಂದು ರೈತಸಂಘದ ಮುಖಂಡರು ಜಿಲ್ಲಾಡಳಿತ ಮತ್ತು ಸರಕಾರವನ್ನು ಆಗ್ರಹಿಸಿ ದರು. ಪಟ್ಟಣದಲ್ಲಿ ಸೋಮವಾರ  ಕಲ್ಲು ಗಣಿಗಾರಿಕೆ ಮತ್ತು ಅಕ್ರಮದಾರಿ ವಿರೋಧಿ ಸಮಿತಿ ಯಿಂದ ನಡೆದ ಸ್ವಯಂ ಪ್ರೇರಿತ ಬಂದ್‌ಗೆ ಉದ್ದೇಶಿಸಿ ಮುಖಂಡರು ಮಾತನಾಡಿದರು.

ಬಂದ್‌ಗೆ ಬಾರೀ ಜನಬೆಂಬಲ ವ್ಯಕ್ತವಾಗಿತ್ತು. ಸಾರ್ವಜನಿಕರು, ರೈತರು, ಸರ್ವಪಕ್ಷಗಳ ಮುಖಂಡರು, ವರ್ತಕರು, ರೈತಸಂಘದ ಮುಖಂಡರು ಸಹಕರಿಸಿದ ಪರಿಣಾಮ ಮಂಚೇನಹಳ್ಳಿ ಬಂದ್ ಸಂಪೂ ರ್ಣ ಯಶಸ್ವಿಯಾಗಿದೆ. ಸ್ವಯಂ ಪ್ರೇರಿತ ಬಂದ್ ಕಾರಣವಾಗಿ ಮಂಚೇನಹಳ್ಳಿ ತಾಲೂಕು ಕೇಂದ್ರ ದಲ್ಲಿ ಎಲ್ಲಾ ಅಂಗಡಿ ಮುಂಗಟ್ಟೆಗಳನ್ನು ಮುಚ್ಚಲಾಗಿತ್ತು.

ಇದನ್ನೂ ಓದಿ: Chikkaballapur News: ಬಾಗೇಪಲ್ಲಿ ಕಾಶ್ಮೀರದ ಗುಂಡಿನ ದಾಳಿ; ಹುತಾತ್ಮರಿಗೆ ಶ್ರದ್ಧಾಂಜಲಿ

ಮಂಚೇನಹಳ್ಳಿ ತಾಲ್ಲೂಕಿನ ವಿವಿದೆಡೆಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಅಕ್ರಮ ಕ್ವಾರಿಗಳಿಂದಾಗಿ ಸರ್ಕಾರಿ ಭೂಮಿ ಮತ್ತು ಪರಿಸರಕ್ಕೆ ಧಕ್ಕೆಯಾಗುತ್ತಿದೆ. ರೈತರ ಬದುಕಿಗೆ ಮಾರಕವಾಗುತ್ತಿದೆ ಎಂಬುದಾಗಿ ರೈತ ಸಂಘದ ಮುಖಂಡರು ಪ್ರತಿಭಟನೆಗೆ ಮುಂದಾಗಿದ್ದರು. ಪಟ್ಟಣದ ಗಣೇಶ ದೇವಾಲಯದ ಆವರಣದಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮುಖಂಡರು ಮಾತನಾಡಿದರು.

ಏಪ್ರಿಲ್ ೨೩ ರಂದು ಮಂಚೇನಹಳ್ಳಿ ಸಮೀಪದ ಕನಗಾನಕೊಪ್ಪ ಗ್ರಾಮದ ಬಳಿ ಕಲ್ಲು ಗಣಿಗಾರಿಕೆ ಗಾಗಿ ಗಣಿ ಮಾಲೀಕರು ನಿರ್ಮಿಸುತ್ತಿದ್ದ ಅಕ್ರಮ ದಾರಿಯನ್ನು ತಡೆಯಲು ಮುಂದಾದ ರೈತರ ವಿರುದ್ಧ ಬಂದೂಕು ಬಳಸಿ ಗುಂಡು ಹಾರಿಸಿರುವವರ ವಿರುದ್ಧ ಕ್ರಮವಹಿಸಬೇಕು. ಕೂಡಲೇ ಅಧಿಕಾರಿಗಳು ಕಲ್ಲು ಗಣಿಗಾರಿಕೆಯ ಅನುಮತಿಯನ್ನು ರದ್ದು ಮಾಡುವಂತೆ ಆಗ್ರಹಿಸಿ ಶಾಂತ ರೀತಿಯಲ್ಲಿ ಹೋರಾಟ ಮಾಡಿದರು.

ಹೋರಾಟದಲ್ಲಿ ಹೋರಾಟಗಾರರಾದ ಆರ್.ಆಂಜನೇಯರೆಡ್ಡಿ, ಚಾಮರಸ ಮಾಲೀಪಾಟೀಲ್, ಅನಸೂಯಮ್ಮ, ಎಂ.ಆರ್.ಲಕ್ಷ್ಮಿನಾರಾಯಣ, ಜಿ.ವಿ.ಲೋಕೇಶ್ ಗೌಡ, ಸುಷ್ಮಾ ಶ್ರೀನಿವಾಸ್, ಪಿ.ಎನ್.ಪ್ರಕಾಶ್, ಜಿ.ವಿ.ಹನುಮೇಗೌಡ, ಸುಬ್ಬಾರೆಡ್ಡಿ, ಜಿ.ಆರ್.ರಾಜಶೇಖರ್, ಪಿ.ಎನ್.ಜಗನ್ನಾಥ್, ನಾರಾಯಣಸ್ವಾಮಿ, ಕೆ.ವಿ.ಹನುಮಪ್ಪರೆಡ್ಡಿ, ಸಂದೀಪರೆಡ್ಡಿ, ಎಚ್.ಸಿ.ನಾರಾಯಣಗೌಡ, ಕೆ.ಪ್ರಭಾ, ಸೇರಿದಂತೆ ಅನೇಕರು ಭಾಗಿಯಾಗಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »