Karunadu Studio

ಕರ್ನಾಟಕ

IPL 2025: ವೈಭವ್‌ ಸೂರ್ಯವಂಶಿ ಬಗ್ಗೆ ದೊಡ್ಡ ಭವಿಷ್ಯ ನುಡಿದ ವಿಕ್ರಮ್‌ ರಾಥೋಡ್‌! – Kannada News | “For A 14-Year-Old Kid To Play Like That”-Vikram Rathour Praises Vaibhav Suryavanshi


ಜೈಪುರ: ವೈಭವ್ ಸೂರ್ಯವಂಶಿ (Vaibhav Suryavanshi) ಸೋಮವಾರ 38 ಎಸೆತಗಳಲ್ಲಿ 101 ರನ್ ಗಳಿಸುವ ಮೂಲಕ ಐಪಿಎಲ್‌ನಲ್ಲಿ (IPL 2025) ಅತ್ಯಂತ ವೇಗವಾಗಿ ಶತಕ ಸಿಡಿಸಿದ ಕಿರಿಯ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆದಿದ್ದರು. ಗುಜರಾತ್‌ ಟೈಟನ್ಸ್‌ (Gujarat Titans) ತಂಡದ ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್ ಮತ್ತು ಅಫ್ಘಾನಿಸ್ತಾನದ ರಶೀದ್ ಖಾನ್ ಮತ್ತು ಕರೀಮ್ ಜನತ್ ಅವರಂತಹ ಅಂತಾರಾಷ್ಟ್ರೀಯ ಬೌಲರ್‌ಗಳ ವಿರುದ್ಧ ಎಡಗೈ ಬ್ಯಾಟ್ಸ್‌ಮನ್‌ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅವರು 11 ಸಿಕ್ಸರ್‌ಗಳು ಮತ್ತು ಏಳು ಬೌಂಡರಿಗಳನ್ನು ಬಾರಿಸಿದರು ಮತ್ತು ರಾಜಸ್ಥಾನ್ ರಾಯಲ್ಸ್‌ನ ಎಂಟು ವಿಕೆಟ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ವೈಭವ್ ಸೂರ್ಯವಂಶಿ ಅವರನ್ನು ವಿಶೇಷ ಪ್ರತಿಭೆ ಎಂದು ಬಣ್ಣಿಸಿದ್ದು, ಅವರು ಆಟದ ಮೇಲೆ ಗಮನ ಹರಿಸಿದರೆ ಭಾರತೀಯ ಕ್ರಿಕೆಟ್‌ಗೆ ದೀರ್ಘಕಾಲ ಆಡಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ಪಂದ್ಯದ ನಂತರ ಮಾತನಾಡಿದ ವಿಕ್ರಮ್‌ ರಾಥೋಡ್, “ಕಳೆದ ಕೆಲವು ತಿಂಗಳುಗಳಿಂದ ನಾವು ಅವರನ್ನು ನೆಟ್ಸ್‌ನಲ್ಲಿ ನೋಡುತ್ತಿದ್ದೇವೆ, ಅವರು ಏನು ಮಾಡಲು ಸಮರ್ಥರು ಮತ್ತು ಅವರು ಯಾವ ಹೊಡೆತಗಳನ್ನು ಆಡಬಹುದು ಎಂದು ನಮಗೆ ತಿಳಿದಿತ್ತು. ಆದರೆ ತುಂಬಿದ ಕ್ರೀಡಾಂಗಣದಲ್ಲಿ ಮತ್ತು ಅಂತಹ ಪರಿಸ್ಥಿತಿಯಲ್ಲಿ ನಿಜವಾಗಿಯೂ ಉತ್ತಮ ಬೌಲಿಂಗ್‌ ದಾಳಿಯ ವಿರುದ್ಧ ಇದನ್ನು ಮಾಡುವುದು ನಿಜಕ್ಕೂ ವಿಶೇಷವಾಗಿತ್ತು,” ಎಂದು ತಿಳಿಸಿದ್ದಾರೆ.

IPL 2025: ದಾಖಲೆಯ ಶತಕ ಸಿಡಿಸಿ ಅಮ್ಮನ ತ್ಯಾಗವನ್ನು ಸ್ಮರಿಸಿದ ವೈಭವ್‌ ಸೂರ್ಯವಂಶಿ!

“ಅವರು ವಿಶೇಷ ಪ್ರತಿಭೆ ಮತ್ತು ಉತ್ತಮ ತಂತ್ರವನ್ನು ಹೊಂದಿದ್ದಾರೆ. ಇಂದು ಅವರು ಎಷ್ಟು ಒಳ್ಳೆಯ ಬ್ಯಾಟ್ಸ್‌ಮನ್ ಎಂದು ಎಲ್ಲರಿಗೂ ತೋರಿಸಿದ್ದಾರೆ,” ಎಂದು ಹೇಳಿದ್ದಾರೆ.

“14ರ ವಯಸ್ಸಿನ ಬಾಲಕ ಈ ರೀತಿ ಆಟವಾಡುವುದು ಖಂಡಿತವಾಗಿಯೂ ಅವನನ್ನು ವಿಶೇಷವಾಗಿಸುತ್ತದೆ. ನಾಲ್ಕು ತಿಂಗಳ ಹಿಂದೆ ಅವ ಬಗ್ಗೆ ಚರ್ಚೆ ಬಂದಾಗ ನಾವು ಅವರನ್ನು ಮೊದಲು ನೋಡಿದೆವು. ಆ ದಿನದಿಂದಲೇ, ನಮ್ಮಲ್ಲಿ ಏನೋ ವಿಶೇಷತೆ ಇದೆ ಮತ್ತು ಅದನ್ನು ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಜವಾಬ್ದಾರಿ ಎಂದು ನಮಗೆ ತಿಳಿದಿತ್ತು. ಸೂರ್ಯವಂಶಿ ಅವರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೆ, ಭಾರತೀಯ ಕ್ರಿಕೆಟ್‌ಗೆ ದೀರ್ಘಕಾಲ ಆಡಬಹುದು,” ಎಂದು ರಾಥೋಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

IPL 2025: ಸೂರ್ಯವಂಶಿ ಶತಕ ಕಂಡು ವೀಲ್‌ ಚೇರ್‌ನಿಂದ ಎದ್ದು ಸಂಭ್ರಮಿಸಿದ ದ್ರಾವಿಡ್‌

“ಅವರು ಅಸಾಧಾರಣ ಇನಿಂಗ್ಸ್‌ ಆಡಿದರು. ಅವರು ಚೆಂಡನ್ನು ಚೆನ್ನಾಗಿ ಹೊಡೆಯುತ್ತಾರೆ. ಅವರಲ್ಲಿ ಏನೋ ವಿಶೇಷತೆ ಇದೆ ಮತ್ತು ಅವರು ಮುಂದೆ ಸಾಗುತ್ತಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೆ, ಅವರು ಭಾರತಕ್ಕಾಗಿ ದೀರ್ಘಕಾಲ ಆಡಬಹುದು. ಆದಾಗ್ಯೂ, 16ನೇ ವಯಸ್ಸಿನಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಸೂರ್ಯವಂಶಿ ಅವರನ್ನು ಹೋಲಿಸುವುದು ಒಳಿತಲ್ಲ,” ಎಂದು ರಾಥೋಡ್ ಹೇಳಿದ್ದಾರೆ.

ವೈಭವ್‌ಗೆ ಸಾಯಿ ಸುದರ್ಶನ್‌ ಮೆಚ್ಚುಗೆ

ಗುಜರಾತ್ ಟೈಟನ್ಸ್ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಕೂಡ ಸೂರ್ಯವಂಶಿಯನ್ನು ಹೊಗಳಿದ್ದಾರೆ. “ವೈಭವ್ ಬ್ಯಾಟ್‌ ಮಾಡಿದ ರೀತಿ ಅದ್ಭುತ ಮತ್ತು ನೋಡಲು ಅದ್ಭುತವಾಗಿತ್ತು ಆದರೆ ನಾವು ಇನ್ನೂ ಉತ್ತಮವಾಗಿ ಮಾಡಬಹುದಿತ್ತು. ನಾವು ಇನ್ನೂ 10 ರನ್ ಗಳಿಸಬಹುದಿತ್ತು. ಆದರೆ ಆರ್‌ಆರ್‌ ಆರಂಭ ಮಾಡಿದ ರೀತಿ ಮತ್ತು ಬ್ಯಾಟ್‌ ಮಾಡಿದ ರೀತಿ ನೋಡಿದಾಗ ನಾವು ತಪ್ಪು ಮಾಡಿದ್ದೇವೆಂದು ತೋಚಿತು,” ಎಂದು ಸಾಯಿ ಸುದರ್ಶನ್‌ ತಿಳಿಸಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »