Karunadu Studio

ಕರ್ನಾಟಕ

Viral Video: ರೈಲಿನಲ್ಲಿ ‘ಯೇ ತುನೇ ಕ್ಯಾ ಕಿಯಾ’ ಹಾಡು ಹಾಡಿದ ದಿವ್ಯಾಂಗ ವ್ಯಕ್ತಿ; ಕಣ್ಣಾಲಿಗಳನ್ನು ಒದ್ದೆ ಮಾಡುವ ವಿಡಿಯೊ ವೈರಲ್! – Kannada News | Blind man sings ‘Yeh Tune Kya Kiya’ song on train; Video goes viral


ಗಾಂಧಿನಗರ: ರೈಲಿನ ಪ್ರಯಾಣದ ವೇಳೆ ಪ್ರಯಾಣಿಕರು‌ ನೃತ್ಯ ಮಾಡುವುದು, ಸ್ಟಂಟ್‌ ಮಾಡುವುದು ಹಾಗೇ ಮಿನಿ ಸಂಗೀತ ಕಚೇರಿ ನಡೆಸುವ ವಿಡಿಯೊಗಳು ಈ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್‌ ಸದ್ದು ಮಾಡಿತ್ತು. ಇದೀಗ ಗುಜರಾತ್‍ನ ವಡೋದರಾಕ್ಕೆ ಚಲಿಸುತ್ತಿದ್ದ ರೈಲಿನಲ್ಲಿ ದಿವ್ಯಾಂಗ ವ್ಯಕ್ತಿಯ ಹೃದಯಸ್ಪರ್ಶಿ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ. ಆತ ‘ಯೇ ತುನೇ ಕ್ಯಾ ಕಿಯಾ’ ಎಂಬ ಭಾವಪೂರ್ಣ ಬಾಲಿವುಡ್ ಹಾಡನ್ನು ಹಾಡಿದ್ದಾನೆ. ಆತನ ಸ್ನೇಹಿತರು ನೀರಿನ ಬಾಟಲಿಗಳು ಮತ್ತು ರೈಲಿನ ಸೀಟುಗಳನ್ನು ಹಾಡಿನ ಲಯಕ್ಕೆ ತಕ್ಕ ಹಾಗೇ ಬಡಿಯುವ ಮೂಲಕ ಸಾಥ್‌ ನೀಡಿದ್ದಾರೆ.

ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಇದು 7 ಮಿಲಿಯನ್ ವ್ಯೂವ್ಸ್‌, 1.1 ಮಿಲಿಯನ್ ಲೈಕ್‍ಗಳು ಮತ್ತು 23,000 ಕಾಮೆಂಟ್‍ಳೊಂದಿಗೆ ವೈರಲ್ ಆಗಿದೆ. ಈ ಅದ್ಭುತ ಕ್ಷಣವನ್ನು ಸಹ ಪ್ರಯಾಣಿಕರೊಬ್ಬರು ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ.ಅಂದಹಾಗೇ ಆ ಗಾಯಕನ ಹೆಸರು ವಿಕಾಸ್ ಎಂಬುದಾಗಿ ಗುರುತಿಸಿದ್ದಾರೆ.

ಗಾಯಕ ವಿಕಾಸ್‌ ಹಾಡಿದ ಹಾಡಿನ ವಿಡಿಯೊ ಇಲ್ಲಿದೆ ನೋಡಿ…

ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಅದಕ್ಕೆ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. “ಇದು ತುಂಬಾ ಅದ್ಭುತ ಮತ್ತು ಸುಂದರವಾಗಿದೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. “ವಾಹ್” ಎಂದು ಇನ್ನೊಬ್ಬರು ಬರೆದಿದ್ದಾರೆ.

ಈ ಹಿಂದೆ ದೆಹಲಿ ಮೆಟ್ರೋ ರೈಲಿನಲ್ಲಿ ಮಹಿಳೆಯರ ಗುಂಪು ಸಾಂಪ್ರದಾಯಿಕ ಸಂಗೀತ ವಾದ್ಯಗಳನ್ನು ನುಡಿಸುವುದರ ಜೊತೆಗೆ ಭಜನೆಗಳನ್ನು ಹಾಡಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ರೈಲು ಪ್ರಯಾಣಿಕರಿಂದ ತುಂಬಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:‌Viral Video: ಸಖತ್‌ ವೈರಲ್‌ ಆಯ್ತು ಮೂವರು ಸಹೋದರರ ಈ ಕ್ಯೂಟ್‌ ಡ್ಯಾನ್ಸ್‌! ನೆಟ್ಟಿಗರು ಹೇಳಿದ್ದೇನು?

ವೈರಲ್ ಆದ ವಿಡಿಯೊದಲ್ಲಿ ಮಹಿಳೆಯರು ಮೆಟ್ರೋದೊಳಗೆ ಜೋರಾಗಿ ಭಜನೆಗಳನ್ನು ಮಾಡಿದ್ದಾರೆ. ಅವರು ಡೋಲಕ್ ಮತ್ತು ಕರ್ತಾಲ್‍ನಂತಹ ವಾದ್ಯಗಳನ್ನು ನುಡಿಸುತ್ತಾ ಭಕ್ತಿಗೀತೆಗಳನ್ನು ಪಠಿಸಿದ್ದರು. ನಂತರ ಸಮವಸ್ತ್ರ ಧರಿಸಿದ ಸಿಐಎಸ್ಎಫ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಇತರರಿಗೆ ಉಪದ್ರವ ಅಥವಾ ಅನಾನುಕೂಲತೆಯನ್ನು ಉಂಟುಮಾಡಿದ್ದಕ್ಕಾಗಿ ಮಹಿಳೆಯರನ್ನು ಗದರಿಸಿದ್ದರು. ಈ ಘಟನೆಯನ್ನು ಯಾವುದೇ ಲಿಖಿತ ದೂರು ಅಥವಾ ದಂಡವಿಲ್ಲದೆ ಪರಿಹರಿಸಲಾಗಿದೆ ಎನ್ನಲಾಗಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »