Karunadu Studio

ಕರ್ನಾಟಕ

Viral News: ಮಹಿಳಾ ಸರ್ಕಾರಿ ಅಧಿಕಾರಿಗೇ ಪಿಸ್ತೂಲ್‌ ತೋರಿಸಿ ಜೀವ ಬೆದರಿಕೆ; ಏನಿದು ಘಟನೆ? – Kannada News | Viral Video: assault on stray dogs; Woman PCS officer receives death threats


ಲಖನೌ: ಮಹಿಳೆಯೊಬ್ಬಳು ತನ್ನ ಮನೆಯ ಬಳಿ ಇದ್ದ ಬೀದಿ ನಾಯಿಗಳನ್ನು ಕೋಲುಗಳಿಂದ ಹೊಡೆದು ಕೊಲ್ಲಲು ಮುಂದಾದ ವ್ಯಕ್ತಿಯನ್ನು ತಡೆದಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಮತ್ತು ಅವನ ಸಹಚರರು ಸೇರಿ ಅವಳನ್ನು ನಿಂದಿಸಿ ಕಿರುಕುಳ ನೀಡಿದ್ದಲ್ಲದೇ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಉತ್ತರ ಪ್ರದೇಶದ ಆಲಿಗಢದಲ್ಲಿ ಈ ಆಘಾತಕಾರಿ ಘಟನೆ ನಡೆದಿರುವುದಾಗಿ ವರದಿಯಾಗಿದೆ ಮತ್ತು ತನ್ನ ಮನೆಯ ಬಳಿ ನಡೆಯುತ್ತಿದ್ದ ಪ್ರಾಣಿ ಕ್ರೌರ್ಯದ ಬಗ್ಗೆ ಧ್ವನಿ ಎತ್ತಿದ ಮಹಿಳೆಯನ್ನು ಪ್ರಾಂತೀಯ ನಾಗರಿಕ ಸೇವೆಗಳ (PCS) ಅಧಿಕಾರಿ ಎಂದು ಗುರಿಯಾಗಿಸಲಾಗಿದೆ. ಈ ಸುದ್ದಿ ಈಗ ವೈರಲ್‌(Viral News) ಆಗಿದೆ.

ಬೀದಿ ನಾಯಿಗಳಿಗೆ ಪ್ರತಿದಿನ ಆಹಾರವನ್ನು ನೀಡುವ ಅಧಿಕಾರಿ ಯಾವುದೋ ಕೆಲಸದ ನಿಮಿತ್ತ ಹೊರಬಂದಾಗ ನೆರೆಮನೆಯ ವ್ಯಕ್ತಿಯೊಬ್ಬ ಕೋಲುಗಳಿಂದ ನಾಯಿಗಳ ಮೇಲೆ ಹಲ್ಲೆ ಮಾಡುತ್ತಿರುವುದನ್ನು ನೋಡಿದ್ದಾಳೆ. ಅವಳು ತಕ್ಷಣ ಅವನ ಕೃತ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ನಿಲ್ಲಿಸುವಂತೆ ಕೇಳಿದ್ದಾಳೆ. ಆದರೆ ಆತ ಅವಳನ್ನು ನಿಂದಿಸಿದ್ದಾನೆ. ನಂತರ, ಆರೋಪಿ, ತನ್ನ ಮಕ್ಕಳು ಮತ್ತು ಇತರ ಪುರುಷರೊಂದಿಗೆ ಪಿಸ್ತೂಲ್‍ಗಳನ್ನು ಹಿಡಿದುಕೊಂಡು ಆಕೆಯ ಮನೆಗೆ ಬಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಮಹಿಳೆಯ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿದ್ದಾರೆ. ಬಿಎನ್ಎಸ್ ಸೆಕ್ಷನ್ 110 (ಅಪರಾಧಿ ನರಹತ್ಯೆಗೆ ಯತ್ನ), 191-2 (ಗಲಭೆ) ಮತ್ತು 325 (ಸ್ವಯಂಪ್ರೇರಿತವಾಗಿ ತೀವ್ರ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಬೀದಿ ನಾಯಿಗಳ ಮೇಲೆ ದೌರ್ಜನ್ಯ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಉತ್ತರ ಪ್ರದೇಶದ ಆಗ್ರಾದಲ್ಲಿ ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಕೋಲಿನಿಂದ ಹೊಡೆದು ಕ್ರೂರವಾಗಿ ಕೊಂದಿದ್ದನು. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಈ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಪ್ರಾಣಿಪ್ರಿಯರ ಕೆಂಗಣ್ಣಿಗೆ ಕಾರಣವಾಗಿತ್ತು.

ಈ ಸುದ್ದಿಯನ್ನೂ ಓದಿ:Viral Video: ಬಾಲ್ಯದಲ್ಲಿ ಆಡಿ ಬೆಳೆದ ಮನೆಯನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತ ವಿದೇಶಿಗ! ಭಾವನಾತ್ಮಕ ವಿಡಿಯೊ ಇಲ್ಲಿದೆ

ವರದಿ ಪ್ರಕಾರ, ನಾಯಿ ಶ್ಯಾಮ್ ನಗರದಲ್ಲಿ ವಾಸಿಸುವ ವಕೀಲ ಅಮಿತ್ ಮಿಶ್ರಾ ಮನೆಯ ಹೊರಗೆ ಮಲಗುತ್ತಿತಂತೆ. ಆಗ ನೆರೆಮನೆಯ ರಾಜ್ ಕುಮಾರ್ ಎಂಬಾತ ಇದ್ದಕ್ಕಿದ್ದಂತೆ ನಾಯಿಯ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದನು. ರಾಜಕುಮಾರನು ನಾಯಿಯನ್ನು ರಸ್ತೆಯಿಂದ ದೂರಕ್ಕೆ ಕರೆದೊಯ್ದು ಕೊನೆಗೆ ಅದನ್ನು ಹೊಡೆದು ಕೊಂದಿದ್ದಾನೆ. ಅಮಿತ್ ಮಿಶ್ರಾ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾನೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »