Karunadu Studio

ಕರ್ನಾಟಕ

“ಮಿಷನ್ 2035” ಮೂಲಕ ಥಲಸ್ಸೇಮಿಯಾ ಮುಕ್ತ ರಾಷ್ಟ್ರಗೊಳಿಸುವ ಗುರಿ: ನಟ ಜಾಕಿ ಶ್ರಾಫ್ ಥಲಸ್ಸೆಮಿಯಾ ಜಾಗೃತಿ ರಾಯಭಾರಿಯಾಗಿ ನಿಯುಕ್ತಿ – Kannada News | Aiming to make the nation Thalassemia-free through “Mission 2035”: Actor Jackie Shroff appointed as Thalassemia Awareness Ambassador


ಬೆಂಗಳೂರು: ಅನುವಂಶಿಕ ರಕ್ತದ ಕಾಯಿಲೆಯಾದ “ಥಲಸ್ಸೇಮಿಯಾ” ಮುಕ್ತ ರಾಷ್ಟ್ರವನ್ನು 2035ರ ಒಳಗೆ ನಿರ್ಮಿಸುವ ಉದ್ದೇಶದಿಂದ ಫೋರ್ಟಿಸ್‌ ಆಸ್ಪತ್ರೆಯು “ರೆಡ್‌ರನ್‌” ಅಭಿಯಾನ ಆಯೋಜಿಸಿದ್ದು, ಬಾಲಿವುಡ್ ನಟ ಜಾಕಿ ಶ್ರಾಫ್ ಇದಕ್ಕೆ ಚಾಲನೆ ನೀಡಿದ್ದಾರೆ. ಜೊತೆಗೆ, ಥಲಸ್ಸೆ ಮಿಯಾ ಜಾಗೃತಿಯ ರಾಯಭಾರಿಯಾಗಿ ನಿಯೋಜನೆಗೊಂಡಿದ್ದಾರೆ. ಈ ಕುರಿತು ಮಾತನಾಡಿದ ಫೋರ್ಟಿಸ್ ಹೆಲ್ತ್‌ಕೇರ್‌ನ ಎಂಡಿ ಮತ್ತು ಸಿಇಒ ಡಾ. ಅಶುತೋಷ್ ರಘುವನ್‌ಶಿ, ಥಲಸ್ಸೇಮಿಯಾ ತಡೆಗಟ್ಟಬಹುದಾದ ಅನುವಂಶಿಕ ರಕ್ತದ ಕಾಯಿಲೆಯಾಗಿದ್ದು, ಭಾರತದಲ್ಲಿ ಪ್ರತಿವರ್ಷ 10 ರಿಂದ 15 ಸಾವಿರಕ್ಕೂ ಹೆಚ್ಚು ಮಕ್ಕಳು ಜನಿಸುತ್ತಿದ್ದಾರೆ. ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಮೂಲಕ, ಆರಂಭಿಕ ಸ್ಕ್ರೀನಿಂಗ್ ಮತ್ತು ಆನುವಂಶಿಕ ಸಮಾಲೋಚನೆಯನ್ನು ಉತ್ತೇಜಿಸಲಾಗು ತ್ತದೆ. ಚಿಕಿತ್ಸೆಯ ಮೂಲಕ ಈ ಕಾಯಿಲೆಯನ್ನು ಸಂಪೂರ್ಣವಾಗಿ ಪ್ರವೇಶವನ್ನು ಸುಧಾರಿಸುವ ಜೊತೆಗೆ, ಹೊಸ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಫೋರ್ಟಿಸ್‌ ಆಸ್ಪತ್ರೆ ವತಿಯಿಂದ “ಮಿಷನ್ 2035” ಅಭಿಯಾನವನ್ನು ಪ್ರಾರಂಭಿಸಿದೆ.

ಇದನ್ನೂ ಓದಿ: Roopa Gururaj Column: ಪುಟ್ಟ ಹಣತೆಯ ದೊಡ್ಡ ಗುಣ

ಈ ಅಭಿಯಾನದ ಮೂಲಕ ಥಲಸ್ಸೆಮಿಯಾವನ್ನು ಅಧಿಸೂಚಿತ ಕಾಯಿಲೆಯೆಂದು ಘೋಷಿಸಿದೆ, ಪ್ರಕರಣಗಳ ನೈಜ-ಸಮಯದ ಟ್ರ್ಯಾಕಿಂಗ್ ಶೀಘ್ರಚಿಕಿತ್ಸೆ ನೀಡಲಿದೆ, ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡುವ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ, ಈ ಎಲ್ಲಾ ಪ್ರಯತ್ನದ ಮೂಲಕ 2035ರ ಹೊತ್ತಿಗೆ ಥಲಸ್ಸೇಮಿಯಾ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಉದ್ದೇಶ ಹೊಂದ ಲಾಗಿದೆ ಎಂದು ಹೇಳಿದರು.

ನಟ ಜಾಕಿ ಶ್ರಾಫ್ ಮಾತನಾಡಿ, “ಥಲಸ್ಸೇಮಿಯಾವನ್ನು ಕೊನೆಗೊಳಿಸುವುದು ಕೇವಲ ವೈದ್ಯಕೀಯ ಗುರಿಯಲ್ಲ – ಇದು ನೈತಿಕ ಕಡ್ಡಾಯವಾಗಿದೆ, ಅಸಂಖ್ಯಾತ ಕುಟುಂಬಗಳು ಈ ಸಮಸ್ಯೆಯಿಂದ ಬಳಲುತ್ತಿದ್ದು, ಗ್ರಾಮೀಣಭಾಗದಲ್ಲಿ ಇದು ಹೆಚ್ಚು. ಆರಂಭಿಕ ಸ್ಕ್ರೀನಿಂಗ್ ಮತ್ತು ಅರಿವು ಅನೇಕ ಮಕ್ಕಳಿಗೆ ಜೀವಮಾನದ ದುಃಖವನ್ನು ತಡೆಯುತ್ತದೆ, ಇದು ಮುಂದಿನ ಪೀಳಿಗೆಗೆ ಆರೋಗ್ಯಕರ ಭವಿಷ್ಯವನ್ನು ರಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »