Karunadu Studio

ಕರ್ನಾಟಕ

ಕ್ರಿಕೆಟ್ ಅಂಕಿ ಅಂಶ ತಜ್ಞ ಚನ್ನಗಿರಿ ಕೇಶವಮೂರ್ತಿ ಇನ್ನಿಲ್ಲ – Kannada News | Cricket statistician Channagiri Keshavamurthy no more


ಬೆಂಗಳೂರು: ಪ್ರಸಿದ್ಧ ಕ್ರಿಕೆಟ್ ಅಂಕಿ ಅಂಶ ತಜ್ಞ, ಕಾಫಿ ಬೋರ್ಡ್‌ನ ನಿವೃತ್ತ ಉಪ ಕಾರ್ಯದರ್ಶಿಗಳು ಆಗಿದ್ದ ಚನ್ನಗಿರಿ ಕೇಶವಮೂರ್ತಿ (85) ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಇವರಿಂದ ಸಾಹಿತ್ಯ ಮತ್ತು ಕ್ರಿಕೆಟ್ ಕ್ಷೇತ್ರಕ್ಕೆ ಅಪಾರ ಸೇವೆ ಸಂದಿದೆ. ಕ್ರಿಕೆಟ್‌ ಎಲ್ಲ ಅಂಕಿ ಅಂಶಗಳೂ ಇವರ ಬಾಯ್ತುದಿಯಲ್ಲಿದ್ದವು. ಅನೇಕ ಇಂಗ್ಲಿಷ್, ಕನ್ನಡ ಕೃತಿಕಾರರು ಕ್ರಿಕೆಟ್‌ಗೆ ಸಂಬಂಧಿಸಿ ಕೃತಿ ರಚನೆಗಾಗಿ ಇವರ ಸಹಾಯವನ್ನು ಪಡೆದಿದ್ದಾರೆ.

ಸಾಹಿತ್ಯದಲ್ಲೂ ಕೈಯಾಡಿಸಿದ್ದ ಇವರು ಹಲವಾರು ಪತ್ತೇದಾರಿ ಮತ್ತಿತರ ಕಾದಂಬರಿಗಳನ್ನು ಬರೆದಿದ್ದಾರೆ. ಇತ್ತೀಚೆಗೆ ಕಗ್ಗೆರೆ ಪ್ರಕಾಶ್‌ ಅವರು ಸಂಪಾದಿಸಿದ್ದ ಇವರ ಜೀವನ ಸಾಧನೆಯ ‘ಸಾಹಿತ್ಯವೇ ಹಸಿರು ಕ್ರಿಕೆಟೇ ಉಸಿರು’ ಪುಸ್ತಕ ಪ್ರಕಟವಾಗಿತ್ತು. ವಿಶ್ವವಿಖ್ಯಾತ ಕ್ರಿಕೆಟ್‌ನ ಸ್ಪಿನ್ ಮಾಂತ್ರಿಕ ಬಿ.ಎಸ್. ಚಂದ್ರಶೇಖರ್ ಅವರು ಈ ಕೃತಿಯನ್ನು ಬಿಡುಗಡೆ ಮಾಡಿದ್ದರು.

ಕಾಫಿ ಬೋರ್ಡ್‌ನ ಉಪ ಕಾರ್ಯದರ್ಶಿಯಾಗಿ ಕೆಲವು ಕಾಲ ಇವರು ಮೌಲ್ಯಯುತ ಸೇವೆ ಸಲ್ಲಿಸಿದ್ದರು. ಚನ್ನಗಿರಿ ಕೇಶವಮೂರ್ತಿ ಅವರು ಮಗ ಸಂಜಯ್, ಮಗಳು ಸವಿತಾ, ಪತ್ನಿ ಶಾಂತಾ ಹಾಗೂ ಅಪಾರ ಬಂಧು ಬಳಗ, ಸ್ನೇಹಿತರನ್ನು ಅಗಲಿದ್ದಾರೆ.

ಇದನ್ನೂ ಓದಿ: Book Release: ಚನ್ನಗಿರಿ ಕೇಶವಮೂರ್ತಿ ಜೀವನ ಸಾಧನೆಯ ಪುಸ್ತಕ ಲೋಕಾರ್ಪಣೆ



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »