ಗೌರಿಬಿದನೂರು: ತಾಲ್ಲೂಕಿನ ಕಡಬೂರು ಗ್ರಾಮದಲ್ಲಿ ಗ್ರಾಮದೇವತೆ ಮಾರಮ್ಮ ದೇವಿಯ ಪ್ರಾಣ ಪ್ರತಿಷ್ಟಾಪನೆ ಮತ್ತು ಬೆಳ್ಳಿ ಹಬ್ಬದ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ದೇವಾಲಯದ ಧಾರ್ಮಿಕ ಪೂಜಾಧಿ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿ ಗ್ರಾಮ ದೇವರ ಆರಾಧನೆ, ವಾರ್ಷಿಕೋತ್ಸವ ಇತ್ಯಾದಿಗಳಿಂದ ಗ್ರಾಮಕ್ಕೆ ಶುಭವಾಗಲಿದೆ. ವೈಮನಸ್ಸು ದೂರವಾಗಿ ಶಾಂತಿ ನೆಲಸಲು ಸಹಕಾರಿ ಅಗುವುದರ ಜೊತೆಗೆ ಮಾನವ ಸಂಬಂಧಗಳು ಬೆಸೆಯಲು ಸಾಧ್ಯವಾಗುತ್ತದೆ ಎಂದರು.
ಪೂಜೆ ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಸದಸ್ಯರ ಗ್ರಾಮದ ಮುಖಂಡರು ಭಾಗವಹಿಸಿದ್ದರು.