Karunadu Studio

ಕರ್ನಾಟಕ

Operation Sindoor logo: ಆಪರೇಷನ್‌ ಸಿಂದೂರ್‌ ಲೋಗೋ ಡಿಸೈನ್‌ ಮಾಡಿದ್ದು ಯಾರು? ಇಲ್ಲಿದೆ ಡಿಟೇಲ್ಸ್‌ – Kannada News | Meet the Armymen who designed the Operation Sindoor logo


ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ನಾಗರಿಕರನ್ನು ಬಲಿ(Pahalgam Attack) ಪಡೆದು ಅಟ್ಟಹಾಸ ಮೆರೆದಿದ್ದ ಉಗ್ರರನ್ನು ಸದೆಬಡಿಯಲೆಂದು ಭಾರತ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ(Operation Sindoor) ಕೈಗೆತ್ತಿಕೊಂಡಿತ್ತು. ಕಾರ್ಯಾಚರಣೆಯಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಅವಿತಿದ್ದ ಉಗ್ರರು ಮತ್ತು ಉಗ್ರರ ನೆಲೆಗಳನ್ನು ಧ್ವಂಸ ಮಾಡಲಾಗಿತ್ತು. ಮೇ 7 ರಂದು ನಡೆದ ಆಪರೇಷನ್‌ ಸಿಂದೂರ್‌ ತನ್ನ ವಿನೂತನ ಹೆಸರಿನಿಂದ ಇಡೀ ಪ್ರಪಂಚದ ಗಮನ ಸೆಳೆದಿತ್ತು. ಈ ಆಪರೇಷನ್‌ ಸಿಂದೂರ್‌ನ ಲೋಗೋ ಅಂತೂ ವಾಟ್ಸಾಪ್‌ ಡಿಪಿ, ಸ್ಟೇಟಸ್‌, ಫೇಸ್‌ಬುಕ್‌ ಪೋಸ್ಟ್‌, ಬ್ಯಾನರ್‌ಗಳು, ಪೋಸ್ಟರ್‌ಗಳು ಹೀಗೆ ಎಲ್ಲೆಂದರಲ್ಲಿ ರಾರಾಜಿಸಿತ್ತು. ಹಾಗಿದ್ದರೆ ಈ ವಿನೂತನ ಲೋಗೋ ಡಿಸೈನ್‌ ಮಾಡಿದವರು ಯಾರು? ಈ ಐಡಿಯಾ ಬಂದಿದ್ದು ಹೇಗೆ? ಇಲ್ಲಿದೆ ಡಿಟೇಲ್ಸ್‌.

operation sindoor (4)

ಉಗ್ರರ ವಿರುದ್ಧ ದಾಳಿ ಆರಂಭಿಸುತ್ತಿದ್ದಂತೆ ಆಪರೇಷನ್‌ ಸಿಂದೂರ್‌ನ ಲೋಗೋ ಅನಾವರಣಗೊಂಡಿತ್ತು. ಇದು ದೇಶಕ್ಕಾದ ನಷ್ಟ ಮತ್ತು ನ್ಯಾಯಕ್ಕಾಗಿ ಭುಗಿಲೆದ್ದ ಆಕ್ರೋಶವನ್ನು ಪ್ರತಿನಿಧಿಸುವಂತಿದೆ. ಇನ್ನು ಈ ಲೋಗೋವನ್ನು ಈ ಲೋಗೋವನ್ನು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಹರ್ಷ್ ಗುಪ್ತಾ ಮತ್ತು ಹವಾಲ್ದಾರ್ ಸುರಿಂದರ್ ಸಿಂಗ್ ರಚಿಸಿದ್ದಾರೆ. ಈ ವಿನ್ಯಾಸದಲ್ಲಿ ಕಾರ್ಯಾಚರಣೆಯ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ. ಇದರಲ್ಲಿ ಒಂದು ‘O’ಅಕ್ಷರ ಇರುವಲ್ಲಿ ಕುಂಕುಮದ ಬಟ್ಟಲಿನ ಚಿತ್ರವನ್ನು ರಚಿಸಲಾಗಿದೆ. ಪಕ್ಕಕ್ಕೆ ಕುಂಕುಮ ಚೆಲ್ಲಿರುವುದನ್ನು ಕೂಡ ನಾವು ಕಾಣಬಹುದಾಗಿದೆ. ಇದು ಪಹಲ್ಗಾಮ್‌ ದಾಳಿಯಲ್ಲಿ ಪತಿಯರನ್ನು ಕಳೆದುಕೊಂಡ ಮಹಿಳೆಯರನ್ನು ಪ್ರತಿನಿಧಿಸುತ್ತಾನೆ.

ಆಪರೇಷನ್‌ ಸಿಂದೂರ್‌ ಹೆಸರಿಟ್ಟಿದ್ದೇಕೆ?

ಕಾರ್ಯಾಚರಣೆಯ ಶೀರ್ಷಿಕೆ “ಸಿಂದೂರ” ಆಳವಾದ ಮಹತ್ವವನ್ನು ಹೊಂದಿದೆ. ಹಿಂದೂ ಸಂಪ್ರದಾಯದಲ್ಲಿ, ಸಿಂದೂರ ಮುತ್ತೈದೆತನದ ಪವಿತ್ರ ಸಂಕೇತವಾಗಿದೆ. ಮತ್ತೊಂದೆಡೆ ಯುದ್ಧಕ್ಕೆ ಹೋಗುವ ಯೋಧರು ತಿಲಕವಾಗಿ ಹಚ್ಚುತ್ತಾರೆ. ಏ.22ರಂದು ಅಂತಹ ಮಹಿಳೆಯರ ಮುತ್ತೈದೆತನವನ್ನೇ ಉಗ್ರರು ಕಿತ್ತುಕೊಂಡಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್‌ ಸಿಂದೂರ್‌ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ಸದೆಬಡಿದಿತ್ತು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »