Karunadu Studio

ಕರ್ನಾಟಕ

Kamal Hassan: ಕಮಲ ಹಾಸನ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿದ ಕನ್ನಡಸೇನೆ ಕಾರ್ಯಕರ್ತರು – Kannada News | Kannada Sena activists offer slippers to Kamal Haasan’s portrait


ಚಿಕ್ಕಬಳ್ಳಾಪುರ: ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಕಮಲಹಾಸನ್‌ನ  ಭಾವಚಿತ್ರಕ್ಕೆ ಕನ್ನಡಸೇನೆಯ ಕಾರ್ಯಕರ್ತರು ಚಪ್ಪಲಿಯಿಂದ ಹೊಡೆದು ತಮ್ಮ ಆಕ್ರೋಶ ಹೊರಹಾಕಿದ  ಘಟನೆ ನಗರದ  ಚನ್ನಯ್ಯ ಪಾರ್ಕ್ ಬಳಿ ನಡೆಯಿತು.

ಚಪ್ಪಲಿಯಿಂದ ಭಾವಚಿತ್ರಕ್ಕೆ ಹೊಡೆದ ನಂತರ ಮಾತನಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ವಿ.ರವಿಕುಮಾರ್  “ಥಗ್ ಲೈಫ್” ಚಿತ್ರದ ಪ್ರಮೋಷನ್ ವೇಳೆ ಕನ್ನಡ ಚಲನ ಚಿತ್ರದ ನಾಯಕ ನಟ ಡಾ.ಶಿವರಾಜ್ ಕುಮಾರ್ ಅವರನ್ನು ಆಹ್ವಾನಿಸಿ, ಅವರ ಎದುರೇ ಕನ್ನಡ ಹುಟ್ಟಿರುವುದು ತಮಿಳು ಭಾಷೆಯಿಂದ ಎಂದು ಉದ್ಧಟತನದಿಂದ ಮಾತನಾಡಿ ದುರಹಂಕಾರ ಪ್ರದರ್ಶಿಸಿದ್ದಾರೆ.

ಸಾವಿರಾರು ವರ್ಷ ಇತಿಹಾಸವುಳ್ಳ ಕನ್ನಡ  ಭಾಷೆಗೆ ಅಪಮಾನ ಮಾಡಿ ಮಾತನಾಡಿರುವುದನ್ನು ಖಂಡಿಸಿ ಕಮಲಹಾಸನ್ (ತಮಿಳು ಹಾಸನ್)ಅವರ ಭಾವಚಿತ್ರಕ್ಕೆ ಪಾದರಕ್ಷೆಯನ್ನು ತೋರಿಸಿ ಖಂಡಿಸಿದ್ದೇವೆ. ನಮ್ಮ ಕನ್ನಡಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅದನ್ನು ಅರಿಯದೆ ಕಮಲಹಾಸನ್ ರವರು ಮಾತನಾಡಿರುವುದು ಕನ್ನಡಿಗರಾದ ನಮಗೆಲ್ಲಾ ತುಂಬಾ ನೋವಿನ ಸಂಗತಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Chikkaballapur News: ಶ್ರದ್ಧಾಭಕ್ತಿಯಿಂದ ನಡೆದ ಕಾಳಿಕಾಂಭದೇವಿ ಕರಗ ಮಹೋತ್ಸವ

ಮುಂದಿನ ವಾರ ಬಿಡುಗಡೆಗೆ ಸಿದ್ದವಾಗಿರುವ ಕಮಲಹಾಸನ್ ರ ‘ಥಗ್ ಲೈಫ್’ ಚಿತ್ರವನ್ನು ಯಾವ ಕಾರಣಕ್ಕೂ ಕನ್ನಡ ಪರ ನಮ್ಮ ಎಲ್ಲಾ ಸಂಘಟನೆಗಳು ಒಟ್ಟುಗೂಡಿ ರಾಜ್ಯಾದ್ಯಂತ ಪ್ರದರ್ಶನ ಮಾಡಲು ಅವಕಾಶ ನೀಡಕೂಡದು ಎಂದು ಖಡಾಖಂಡಿತವಾಗಿ ತಿಳಿಸಿದರು.

ದಕ್ಷಿಣ ಭಾರತದಲ್ಲಿ ನಮ್ಮ ನಮ್ಮಲ್ಲಿ ಸಾಮರಸ್ಯ ಬೆಳಸಬೇಕಿದ್ದ ಕಮಲ ಹಾಸನ್ ರವರು ಕನ್ನಡಿಗರ ಸ್ವಾಭಿಮಾನಕ್ಕೆ ಕೊಳ್ಳಿ ಇಟ್ಟಿದ್ದಾರೆ. ಅವರು ಈ ಕೂಡಲೇ ಕನ್ನಡಿಗರ ಮುಂದೆ ಬೇಷರತ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸೇನೆ  ನಗರಾಧ್ಯಕ್ಷ ಶ್ರವಣ್ ಕುಮಾರ್.ಎಸ್, ಮೋಹನ್, ರಫೀಕ್, ಅಯ್ಯಪ್ಪ, ಈಶ್ವರ್, ವಿಜಯಕುಮಾರ್ ಪಿ, ವಿಜಯಕುಮಾರ್ ಟಿ.ಎಸ್, ಶ್ರೀನಿವಾಸಾಚಾರಿ ಮತ್ತಿತರರು ಇದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »