Karunadu Studio

ಕರ್ನಾಟಕ

Kamal Hasaan: 300 ಕೋಟಿಯ ಥಗ್​ ಲೈಫ್ ಚಿತ್ರ ಕರ್ನಾಟಕದಲ್ಲಿ ಬ್ಯಾನ್‌; ಕೋರ್ಟ್‌ ಮೊರೆ ಹೋದ ಕಮಲ್‌ ಹಾಸನ್‌ – Kannada News | Kamal Haasan Goes To Court Over Films Launch In Karnataka Amid Kannada Row


ಚೆನ್ನೈ: ಕನ್ನಡ ತಮಿಳಿನಿಂದ ಹುಟ್ಟಿದೆ ಎಂದು ವಿವಾದದ ಕಿಚ್ಚು ಇನ್ನೂ ನಿಂತಿಲ್ಲ. ಕಮಲ್‌ ಹಾಸನ್‌ (Kamal Haasan) ಹೇಳಿಕೆಯನ್ನು ಖಂಡಿಸಿ ಕರ್ನಾಟಕದಲ್ಲಿ ಹಲವು ಪ್ರತಿಭಟನೆ ನಡೆಯುತ್ತಿವೆ. ತಮ್ಮ ಹೇಳಿಕೆಗೆ ಕ್ಷಮೆಯಾಚಿಸದಿದ್ದರೆ, ಅವರ ‘ಥಗ್ ಲೈಫ್’ ( Thug Life) ಚಿತ್ರ ರಾಜ್ಯದಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಚಲನಚಿತ್ರ ಮಂಡಳಿ ಎಚ್ಚರಿಸಿದ ನಂತರ, ನಟ ಇದೀಗ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಬರೋಬ್ಬರಿ 300 ಕೋಟಿ ಬಜೆಟ್​​ನಲ್ಲಿ ಸೆಟ್ಟೇರಿರುವ ಈ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅನುಮತಿ ಸಿಕ್ಕಿಲ್ಲ. ಇದೀಗ ನಟ ಕಾನೂನಿನ ಮೊರೆ ಹೋಗಿದ್ದಾರೆ.

ಕಮಲ್‌ ಹಾಸನ್‌ ಕನ್ನಡಿಗರ ಬಳಿ ಕ್ಷಮೆ ಕೇಳಲೇ ಬೇಕು. ಅವರು ಕ್ಷಮೆಯಾಚಿಸದಿದ್ದರೆ, ಥಗ್ ಲೈಫ್ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅನುಮತಿ ನೀಡುವುದಿಲ್ಲ ಎಂದು ಇದು ಖಚಿತ, ಇದು ಉದ್ಯಮದ ಬಗ್ಗೆ ಅಲ್ಲ, ಇದು ರಾಜ್ಯದ ಬಗ್ಗೆ. ರಾಜಕೀಯ ಪಕ್ಷಗಳು ಸಹ ವಿರೋಧಿಸುತ್ತಿವೆ. ಅವರ ಕ್ಷಮೆಯಾಚನೆಯಿಲ್ಲದೆ ಚಿತ್ರದ ಬಿಡುಗಡೆ ಕಷ್ಟ. ನಮ್ಮ ಪ್ರದರ್ಶಕರು ಅಥವಾ ವಿತರಕರು ಅದನ್ನು ಪ್ರದರ್ಶಿಸಲು ಸಿದ್ಧರಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಂ. ನರಸಿಂಹಲು ಹೇಳಿದರು.

ಕರ್ನಾಟಕ ಬಿಜೆಪಿ ಮುಖ್ಯಸ್ಥ ಬಿ.ವೈ. ವಿಜಯೇಂದ್ರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. “ಒಬ್ಬರು ತಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು, ಆದರೆ ಅದರ ಹೆಸರಿನಲ್ಲಿ ದುರಹಂಕಾರವನ್ನು ಪ್ರದರ್ಶಿಸುವುದು ಸಾಂಸ್ಕೃತಿಕ ದಿವಾಳಿತನದ ಸಂಕೇತವಾಗಿದೆ. ವಿಶೇಷವಾಗಿ ಕಲಾವಿದರು ಪ್ರತಿಯೊಂದು ಭಾಷೆಯನ್ನು ಗೌರವಿಸುವ ನೀತಿಯನ್ನು ಹೊಂದಿರುವುದು ಅತ್ಯಗತ್ಯ ಎಂದು ಹೇಳಿದ್ದಾರೆ. ಕನ್ನಡ ಭಾಷೆಗೆ ದೀರ್ಘ ಇತಿಹಾಸವಿದೆ ಅದು ಕಮಲ್‌ ಹಾಸನ್‌ಗೆ ತಿಳಿದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Shiva Rajkumar: ಕಮಲ್‌ ಹಾಸನ್‌ ಕನ್ನಡ ಹೇಳಿಕೆಗೆ ಚಪ್ಪಾಳೆ ಹೊಡೆದಿಲ್ಲ: ಶಿವ ರಾಜ್‌ಕುಮಾರ್‌ ಸ್ಪಷ್ಟನೆ

ಏನಿದು ಘಟನೆ?

ಥಗ್‌ ಲೈಫ್‌ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ನಟ ಶಿವರಾಜ್‌ಕುಮಾರ್‌ ಎದುರೇ ಕನ್ನಡ ತಮಿಳಿನಿಂದ ಹುಟ್ಟಿದೆ. ಕನ್ನಡದ ಮೂಲ ತಮಿಳು ಎಂದು ಹೇಳಿದ್ದರು. ಇದು ಕನ್ನಡಿಗರನ್ನು ಕೆರಳಿಸಿತ್ತು. ತಮ್ಮ ಹೇಳಿಕೆಗೆ ಕ್ಷಮೆ ಕೇಳದೆ ನಟ ಮತ್ತೆ ಮೊಂಡು ಪ್ರದರ್ಶನ ಮಾಡಿದ್ದರು. ಮೆಯಾಚಿಸುವ ಯಾವುದೇ ಯೋಜನೆ ಇಲ್ಲ ಎಂದು ನಟ ಸ್ಪಷ್ಟಪಡಿಸಿದ್ದಾರೆ. “ಇದು ಪ್ರಜಾಪ್ರಭುತ್ವ. ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ಕಾರ್ಯಸೂಚಿ ಹೊಂದಿರುವವರನ್ನು ಹೊರತುಪಡಿಸಿ ಯಾರೂ ಇದನ್ನು ಅನುಮಾನಿಸುವುದಿಲ್ಲ. ನನಗೆ ಈ ಹಿಂದೆಯೂ ಬೆದರಿಕೆ ಹಾಕಲಾಗಿದೆ, ಮತ್ತು ನಾನು ತಪ್ಪಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ. ಆದರೆ ನಾನು ತಪ್ಪೇ ಮಾಡಿಲ್ಲ ಎಂದು ಹೇಳಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »