Karunadu Studio

ಕರ್ನಾಟಕ

Chikkaballapur News: ವಿಷಯುಕ್ತ ರಾಸಾಯನಿಕ ಸೇವಿಸಿ ಸಾವಿರಾರು ಮೀನುಗಳು ಮಾರಣ ಹೋಮ – Kannada News | Thousands of fish die after consuming toxic chemicals


ಗೌರಿಬಿದನೂರು : ಉತ್ತರ ಪಿನಾಕಿನಿ ನದಿಯಲ್ಲಿ ವಿಷಯುಕ್ತ ರಾಸಾಯನಿಕ ಸೇವಿಸಿ ಸಾವಿರಾರು ಮೀನುಗಳು ಸಾವನಪ್ಪಿವೆ. ನಗರದ ವೀರ್ಲಗೊಲ್ಲಹಳ್ಳಿ ಬಳಿಯ ಮರಳೂರು ಕಾಲುವೆ ಮತ್ತು ಬೈ ಪಾಸ್ ರಸ್ತೆ ಬಳಿ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ಮೇಲ್ಸೇತುವೆ ಕೆಳಗೆ ರಾಸಾಯನಿಕ ಸೇವಿಸಿ ಸಾವಿರಾರು ಮೀನುಗಳು ಸಾವನಪ್ಪಿವೆ, ಸ್ಥಳದಲ್ಲಿ ರಾಸಾಯನಿಕದ ದುರ್ನಾತ ಬೀರುತ್ತಿರುವು ದನ್ನು ಗಮನಿಸಿದ ಸ್ಥಳೀಯ ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೀನುಗಳು ಸತ್ತು ಬಿದ್ದಿರುವುದನ್ನು ಕಂಡು, ಕಾರ್ಖಾನೆಗಳು ವಿಲೇವಾರಿ ಮಾಡುವ ರಾಸಾಯ ನಿಕವನ್ನು ರಾತ್ರಿ ವೇಳೆ ನದಿಯಲ್ಲಿ ವಿಸರ್ಜಿಸಲಾಗಿದೆ ಎಂದು ಸ್ಥಳೀಯರು ಅನುಮನ ವ್ಯಕ್ತ ಪಡಿಸುತ್ತಿದ್ದಾರೆ. ಎಚ್ ಎನ್ ವ್ಯಾಲಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದು ನೀರಿನ ಮಾದರಿ ಯನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ:Chikkaballapur Crime: ಲಾಂಗ್ ಮೂಲಕ ಹುಟ್ಟು ಹಬ್ಬದ ಕೇಕ್ ಕಟ್: ಆಟೋ ಚಾಲಕ ಬಂಧನ

ಈ ವೇಳೆ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಲೋಕೇಶ್ ಗೌಡ ಮಾತನಾಡಿ, ಉತ್ತರ ಪಿನಾಕಿನಿ ನದಿಯಲ್ಲಿ ಸಾವಿರಾರು ಮೀನುಗಳ ಮಾರಣ ಹೋಮಕ್ಕೆ, ಎಚ್ ಎನ್ ವ್ಯಾಲಿಯ ಸಂಸ್ಕರಿತ ನೀರಿನ ಪರಿಣಾಮವೇ ಅಥವಾ ಕಾರ್ಖಾನೆಗಳ ವಿಲೇವಾರಿ ಮಾಡುವ ರಾಸಾಯನಿಕಗಳಿಂದ ಉಂಟಾಗಿ ದೆಯೇ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಎಚ್ ಎನ್ ವ್ಯಾಲಿ ಅಧಿಕಾರಿಗಳು ಪರಿಶೀಲನೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಉತ್ತರ ಪಿನಾಕಿನಿ ನದಿ ನೀರು ಮರಳೂರು ಕಾಲುವೆ ಮೂಲಕ ಮರಳೂರು ಕೆರೆ ಸೇರುತ್ತವೆ, ಇದೆ ನೀರು ಭೂಮಿಯಲ್ಲಿ ಇಂಗಿ ಕೊಳವೆ ಬಾವಿಗಳ ಮೂಲಕ ಮನುಷ್ಯನ ದೇಹ ಸೇರುತ್ತಿವೆ, ಇದನ್ನು ಅಧಿಕಾರಿಗಳು ಗಂಭೀರ ವಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರೈತರಾದ ಗೋಪಿ, ನಂದನ್,  ಶ್ರೀಕಾಂತ್,  ನಾರಾಯಣಪ್ಪ, ಮೋಹನ್ ಮುಂತಾದವರು ಹಾಜರಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »