Karunadu Studio

ಕರ್ನಾಟಕ

ಆಪರೇಷನ್ ಸಿಂದೂರ್‌ ಕಾರ್ಯಾಚರಣೆಯಿಂದ ಹೆಚ್ಚಿನ ಹಾನಿಯಾಗಿದೆ ಎಂದು ಒಪ್ಪಿಕೊಂಡ ಪಾಕ್; ಇನ್ನೂ 8 ಸ್ಥಳಗಳ ದಾಖಲೆ ಬಹಿರಂಗ – Kannada News | Pakistan Admits To Wider Damage From India’s Operation Sindoor


ನವದೆಹಲಿ: ಭಾರತದ ಆಪರೇಷನ್ ಸಿಂದೂರ್ (Operation Sindoor) ಸಂದರ್ಭದಲ್ಲಿ ಪಾಕಿಸ್ತಾನಕ್ಕೆ (Pakistan) ಈ ಹಿಂದೆ ಒಪ್ಪಿಕೊಂಡಿದ್ದಕ್ಕಿಂತ ಹೆಚ್ಚಿನ ಹಾನಿಯಾಗಿದೆ (Damage) ಎಂದು ಆ ದೇಶದ ಗೌಪ್ಯ ದಾಖಲೆಯೊಂದು ಬಹಿರಂಗಪಡಿಸಿದೆ. ಪಾಕಿಸ್ತಾನದ ಆಂತರಿಕ ಮಿಲಿಟರಿ ಕಾರ್ಯಾಚರಣೆ ಬುನಿಯಾನ್ ಉನ್ ಮಾರ್ಸೂಸ್‌ನ (Bunyan un Marsoos) ದಾಖಲೆಯ ಪ್ರಕಾರ, ಭಾರತದ ದಾಳಿಯಿಂದ ಕನಿಷ್ಠ 8 ಹೆಚ್ಚುವರಿ ಸ್ಥಳಗಳಿಗೆ ಹಾನಿಯಾಗಿದೆ.

ದಾಖಲೆಯ ಒಂದು ನಕ್ಷೆಯ ಪ್ರಕಾರ, ಮೇ 9-10ರ ರಾತ್ರಿ ಭಾರತದ ದಾಳಿಗಳಿಂದ ಪಾಕಿಸ್ತಾನದ ಪೇಶಾವರ್, ಜಂಗ್, ಸಿಂಧ್‌ನ ಹೈದರಾಬಾದ್, ಪಂಜಾಬ್‌ನ ಗುಜ್ರಾತ್, ಗುಜ್ರಾನ್‌ವಾಲಾ, ಭವಾಲ್‌ನಗರ್, ಅಟಕ್, ಮತ್ತು ಚೋರ್‌ನಲ್ಲಿ ಕಟ್ಟಡಗಳಿಗೆ ಹಾನಿಯಾಗಿದೆ. ಈ 8 ಸ್ಥಳಗಳನ್ನು ಭಾರತೀಯ ಸಶಸ್ತ್ರ ಪಡೆಗಳು ಮೇ 7ರ ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಿರಲಿಲ್ಲ. ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (PoK) ಭಯೋತ್ಪಾದಕ ಗುರಿಗಳ ವಿರುದ್ಧ ಆಪರೇಷನ್ ಸಿಂಧೂರ್ ಆರಂಭಿಸಿದ ಮೂರು ದಿನಗಳ ನಂತರ ಮೇ 10ರಂದು ಶೆಹಬಾಜ್ ಷರೀಫ್ ನೇತೃತ್ವದ ಪಾಕಿಸ್ತಾನವು ಭಾರತಕ್ಕೆ ಶಾಂತಿಯ ಕರೆ ನೀಡಿತು.



ಈ ಸುದ್ದಿಯನ್ನೂ ಓದಿ: Bhagwant Mann: ಆಪರೇಷನ್‌ ಸಿಂದೂರ್‌ ಎಂದರೆ ʼಒನ್‌ ನೇಷನ್‌ ಒನ್‌ ಹಸ್ಬೆಂಡ್‌ʼ ಯೋಜನೆಯೇ? ನಾಲಿಗೆ ಹರಿಬಿಟ್ಟ ಪಂಜಾಬ್‌ ಸಿಎಂ ಭಗವಂತ್‌ ಮಾನ್‌

ಶಾಂತಿಯ ಒಪ್ಪಂದದ ಎರಡು ದಿನಗಳ ನಂತರ, ಮ್ಯಾಕ್ಸರ್ ಟೆಕ್ನಾಲಜೀಸ್ ಸೆರೆಹಿಡಿದ ಉಪಗ್ರಹ ಚಿತ್ರಗಳು ಪಾಕಿಸ್ತಾನದ ನಾಲ್ಕು ವಾಯುನೆಲೆಗಳಾದ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ, ಸರ್ಗೋಧಾದ PAF ಬೇಸ್ ಮುಶಾಫ್, ಭೋಲಾರಿ ವಾಯುನೆಲೆ, ಮತ್ತು ಜಾಕೋಬಾಬಾದ್‌ನ PAF ಬೇಸ್ ಷಹಬಾಜ್‌ಗೆ ಹೆಚ್ಚು ಹಾನಿಯಾಗಿರುವುದನ್ನು ತೋರಿಸಿವೆ. ಇತರ ಉಪಗ್ರಹ ಚಿತ್ರಗಳು ಪಾಕಿಸ್ತಾನದ ಬಹವಾಲ್‌ಪುರ್ ಮತ್ತು ಮುರಿದ್ಕೆಯ ಭಯೋತ್ಪಾದಕ ಮೂಲಸೌಕರ್ಯದ ಧ್ವಂಸವನ್ನು ಸ್ಪಷ್ಟವಾಗಿ ತೋರಿಸಿವೆ. ಜೈಷ್-ಎ-ಮೊಹಮ್ಮದ್ (JeM)ನ ಕಾರ್ಯಾಚರಣಾ ಕೇಂದ್ರವಾದ ಬಹವಾಲ್‌ಪುರದ ಜಾಮಿಯಾ ಮಸ್ಜಿದ್ ಸುಭಾನ್‌ನ ಮೊದಲು-ನಂತರದ ಚಿತ್ರಗಳು ಭಾರಿ ಹಾನಿಯನ್ನು ದಾಖಲಿಸಿವೆ.

ಭಾರತವು ಪಾಕಿಸ್ತಾನ ಮತ್ತು PoKನಲ್ಲಿರುವ ಭಯೋತ್ಪಾದಕ ಗುರಿಗಳನ್ನು ಗುರಿಯಾಗಿಟ್ಟು ಆರಂಭಿಸಿದ ಆಪರೇಷನ್ ಸಿಂದೂರ್‌ನಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಈ ಕಾರ್ಯಾಚರಣೆಯನ್ನು ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನಡೆಸಲಾಯಿತು. ಲಷ್ಕರ್-ಎ-ತೊಯ್ಬಾದ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಈ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ

ಪಹಲ್ಗಾಮ್ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು. ಬದುಕುಳಿದವರ ಪ್ರಕಾರ, ಭಯೋತ್ಪಾದಕರು ಪ್ರವಾಸಿಗರಿಗೆ ತಮ್ಮ ಧರ್ಮದ ಬಗ್ಗೆ ಕೇಳಿದ್ದು, ಮುಸ್ಲಿಮೇತರರೆಂದು ಒಪ್ಪಿಕೊಂಡವರನ್ನು ಗುಂಡಿಕ್ಕಿ ಕೊಂದಿದ್ದರು. ಭಯೋತ್ಪಾದಕರು ಪ್ರವಾಸಿಗರಿಗೆ ‘ಕಲ್ಮಾ’ ಓದಲು ಆದೇಶಿಸಿ, ಮುಸ್ಲಿಮೇತರರನ್ನು ಗುರುತಿಸಿ ಗುಂಡಿಕ್ಕಿದ್ದರು.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »