Karunadu Studio

ಕರ್ನಾಟಕ

ರೈತ ಮಿತ್ರನಂತೆ ಮಹೇಂದ್ರ ಟ್ರಾಕ್ಟರ್ ಕಂಪನಿ ಕೆಲಸ ಮಾಡುತ್ತಿದೆ: ಸಚಿವ ಕೆ.ಹೆಚ್.ಮುನಿಯಪ್ಪ ಬಣ್ಣನೆ – Kannada News | Mahendra Tractor Company is working like a farmer’s friend: Minister K.H. Muniyappa Bannane


ರೈತ ಮಿತ್ರನಂತೆ ಮಹೇಂದ್ರ ಟ್ರಾಕ್ಟರ್ ಕಂಪನಿ ಕೆಲಸ ಮಾಡುತ್ತಿದೆ

ನಗರ ಹೊರವಲಯ ಹೊನ್ನೇನಹಳ್ಳಿ ಗ್ರಾಮದ ಬಳಿ ಪ್ರಾರಂಭವಾಗಿರುವ ನೂತನ ಮಹಿಂದ್ರಾ ಟ್ರಾಕ್ಟರ್ ಷೋರೂಮ್‌ಗೆ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಚಾಲನೆ ನೀಡಿ ಶುಭಕೋರಿದರು. ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.

ಚಿಕ್ಕಬಳ್ಳಾಪುರ: 50 ವರ್ಷಗಳಿಗೂ ಹೆಚ್ಚು ಕಾಲದಿಂದ ಮಹಿಂದ್ರಾ ಟ್ರಾಕ್ಟರ್ ಕಂಪನಿ ದೇಶದ ರೈತಾಪಿ ವರ್ಗದ ಮಿತ್ರನಂತೆ ಕೆಲಸ ಮಾಡುತ್ತಿದೆ. ಇಂತಹ ಕಂಪನಿಯ ಶಾಖೆಯನ್ನು ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿ ನನ್ನ ಮಿತ್ರ ಶ್ರೀನಿವಾಸಪುರದ ನಾರಾಯಣಸ್ವಾಮಿ ತಮ್ಮ ಮಗಳಿಗಾಗಿ ಪ್ರಾರಂಭಿಸಿರುವುದು ಸಂತೋಷ ತಂದಿದೆ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.

khmuniyappa

ನಗರ ಹೊರವಲಯ ಹೊನ್ನೇನಹಳ್ಳಿ ಗೇಟ್‌ಬಳಿ ನೂತನವಾಗಿ ತೆರೆದಿರುವ ಮಹಿಂದ್ರಾ ಕಂಪನಿಯ ಟ್ರಾಕ್ಟರ್ ಷೋರೂಮ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇದನ್ನೂ ಓದಿ: Chikkaballapur News: ಸ್ತ್ರೀ ಚೇತನ ಮತ್ತು ದುಡಿಯೋಣ ಬಾ ಅಭಿಯಾನ, ಗ್ರಾಮೀಣ ಜನರಿಗೆ ಸಹಕಾರಿ

ನಾರಾಯಣಸ್ವಾಮಿ ತಮ್ಮ ಮಗಳಿಗಾಗಿ  ಮಹಿಂದ್ರಾ ಟ್ರಾಕ್ಟರ್ ಷೋರೂಮ್ ಅನ್ನು ಚಿಕ್ಕಬಳ್ಳಾ ಪುರ ಭಾಗದಲ್ಲಿ ತೆರೆದು ರೈತಾಪಿ ವರ್ಗದ ಸೇವೆ ಮಾಡಲು ಮುಂದಾಗಿರುವುದು ಸಂತೋಷದ ವಿಚಾರವಾಗಿದೆ.ಇವರ ಮಗಳು ಸಿಂಧುರಾಜ್ ಉನ್ನತ ಶಿಕ್ಷಣ ಪಡೆದರೂ ಯಾವುದೋ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರದೆ ತಮ್ಮದೇ ಆದ ಕಂಪನಿ ಕಟ್ಟಿಕೊಂಡು ಹತ್ತಾರು ಮಂದಿಗೆ ಉದ್ಯೋ ಗ ನೀಡಲು ಮುಂದಾಗಿರುವುದು ಕೂಡ ಸ್ವಾವಲಂಬನೆಯ ಪ್ರತೀಕವಾಗಿದೆ.ಇವರ ಮುಂದಾಳತ್ವ ದಲ್ಲಿ ಈ ಶಾಖೆ ಉತ್ತರೋತ್ತರ ಅಭಿವೃದ್ಧಿ ಕಾಣಲಿ.ಭಗವಂತ ಇವರಿಗೆ ಎಲ್ಲಾ ಶಕ್ತಿಯನ್ನು ನೀಡಲಿ ಎಂದು ಶುಭ ಹಾರೈಸಿದರು.

khmu

ಈ ವೇಳೆ  ಷೋರೂಮ್ ಮಾಲಿಕ ಶ್ರೀನಿವಾಸಪುರ ನಾರಾಯಣಸ್ವಾಮಿ, ಎಂ.ಡಿ.ಸಿAಧುರಾಜ್,ಫೀಲ್ಡ್ ಆಫೀಸರ್ ಶಿವಕುಮಾರ್.ಷೋರೂಮ್ ವ್ಯವಸ್ಥಾಪಕ ದೇವರಾಜ್, ಗುಡಿಹಳ್ಳಿ ಗ್ರಾಮದ ಕೆ.ಪಿ.ಸಿ.ಸಿ. ಸದಸ್ಯ ಜಿ.ಎನ್.ನಾರಾಯಣಸ್ವಾಮಿ(ಬಂಗಾರಪ್ಪ) ರೈತಮುಖಂಡ ಜಾತವಾರ ರಾಮಕೃಷ್ಣಪ್ಪ, ಮರಸನಹಳ್ಳಿ ಪ್ರಕಾಶ್,ದಾಸರ‍್ಲಹಳ್ಳಿ ಮಂಜುನಾಥ್, ಮಣಿ, ಗ್ರಾಮಪಂಚಾಯಿತಿ ಮಾಜಿ ಆಧ್ಯಕ್ಷ ರವಿಚಂದ್ರ,ಪಟ್ರೇನಹಳ್ಳಿ ಕೃಷ್ಣ, ಜೆ.ನಂಜಪ್ಪ ವಿಜಯಪುರ, ಕೆ.ಬಿ.ಶಿವಣ್ಣ ಇದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »