Karunadu Studio

ಕರ್ನಾಟಕ

The Preamble: ಶಾಲಾ ಪ್ರಾರ್ಥನೆ ವೇಳೆ ವಿದ್ಯಾರ್ಥಿಗಳು ಪ್ರತಿದಿನ ಸಂವಿಧಾನದ ಪೀಠಿಕೆ ಓದುವಿಕೆ ಕಡ್ಡಾಯ – Kannada News | The Preamble reading daily in schools while prayer is mandatory by education department


ಬೆಂಗಳೂರು : ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ (Schools) ಭಾರತ ಸಂವಿಧಾನ (Constitution of India) ಪೀಠಿಕೆಯನ್ನು (The Preamble) ವಿದ್ಯಾರ್ಥಿಗಳು (Students) ಪ್ರತಿ ನಿತ್ಯ ಪ್ರಾರ್ಥನೆ ಸಮಯದಲ್ಲಿ ಓದುವ ಬಗ್ಗೆ ಶಿಕ್ಷಣ ಇಲಾಖೆ (Education department) ಮಹತ್ವದ ಆದೇಶ ಹೊರಡಿಸಿದೆ. ಇದರ ಜೊತೆಗೆ, ಭಾರತದ ಸಂವಿಧಾನದ ಪೀಠಿಕೆಯನ್ನು ಎಲ್ಲಾ ಶಾಲೆಗಳಲ್ಲಿ ಪ್ರದರ್ಶಿಸಲು ಕೂಡ ಆದೇಶ ನೀಡಲಾಗಿದೆ. ಸಂವಿಧಾನದ ಪೀಠಿಕೆ ಆಶಯಗಳನ್ನು ವಿದ್ಯಾರ್ಥಿಗಳು ಗ್ರಹಿಸಲು ಪೂರಕವಾದ ಅವಕಾಶಗಳನ್ನು ಶಾಲಾ ಕಲಿಕೆಯಲ್ಲಿ ಒದಗಿಸಲು ತಿಳಿಸಲಾಗಿದೆ.

ನಿರ್ದೇಶನ ಹೀಗಿದೆ: ಭಾರತ ಸಂವಿಧಾನದ ಪೀಠಿಕೆಯನ್ನು ವಿದ್ಯಾರ್ಥಿಗಳು ಪ್ರತಿ ದಿನ ಶಾಲಾ ಪ್ರಾರ್ಥನೆಯ ಸಮಯದಲ್ಲಿ ಓದಲು ಕ್ರಮ ವಹಿಸುವಂತೆ ಮತ್ತು ಭಾರತದ ಸಂವಿಧಾನದ ಪೀಠಿಕೆಯನ್ನು ಎಲ್ಲಾ ಶಾಲೆಗಳಲ್ಲಿ ಪ್ರದರ್ಶಿಸುವಂತೆ ಕ್ರಮ ವಹಿಸಲು ಈಗಾಗಲೇ ಉಲ್ಲೇಖ (1), (2) ರ ಸರ್ಕಾರದ ಆದೇಶದನ್ವಯ ಉಲ್ಲೇಖ (3) ರಂತೆ ಸುತ್ತೋಲೆಗಳನ್ನು ಈ ಕಚೇರಿಯಿಂದ ಹೊರಡಿಸಲಾಗಿದೆ.

ಈ ಕೆಳಗಿನಂತೆ ಕ್ರಮವಹಿಸಲು ಸದರಿ ಸುತ್ತೋಲೆಯಲ್ಲಿ ತಿಳಿಸಲಾಗಿರುತ್ತದೆ:

  1. ಉಲ್ಲೇಖ 1 ಮತ್ತು 2 ರ ಆದೇಶಗಳಂತೆ ರಾಜ್ಯದ ಈ ಇಲಾಖೆಯ ಎಲ್ಲಾ ಅಧೀನ ಕಚೇರಿಗಳಲ್ಲಿ ಹಾಗೂ ಎಲ್ಲಾ ಶಾಲೆಗಳಲ್ಲಿ ಭಾರತ ಸಂವಿಧಾನ ಪೀಠಿಕೆಯ ಭಾವಚಿತ್ರವನ್ನು ಎದ್ದು ಕಾಣುವಂತೆ ಅನುಬಂಧದಲ್ಲಿ ನಮೂದಿಸಿರುವಂತೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪ್ರದರ್ಶಿಸುವುದು.
  1. ಭಾರತ ಸಂವಿಧಾನ ಪೀಠಿಕೆಯನ್ನು ಪ್ರತಿ ನಿತ್ಯ ವಿದ್ಯಾರ್ಥಿಗಳು ಶಾಲಾ ಪ್ರಾರ್ಥನೆ/ Assembly ಸಮಯದಲ್ಲಿ ಕಡ್ಡಾಯವಾಗಿ ಓದಲು ಅಗತ್ಯ ಕ್ರಮವಹಿಸುವುದು. ಸರದಿಯಂತೆ ಪ್ರತಿ ದಿನ ಒಬ್ಬ ವಿದ್ಯಾರ್ಥಿ / ವಿದ್ಯಾರ್ಥಿನಿ ಇದರ ಮುಂದಾಳತ್ವವನ್ನು ವಹಿಸುವುದು ಹಾಗೂ ಉಳಿದವರು ಪುನರುಚ್ಛರಿಸುವುದು.
  1. ಭಾರತ ಸಂವಿಧಾನದ ಪೀಠಿಕೆ ಆಶಯಗಳನ್ನು ವಿದ್ಯಾರ್ಥಿಗಳು ಗ್ರಹಿಸಲು ಪೂರಕವಾದ ಅವಕಾಶಗಳನ್ನು ಶಾಲಾ ಕಲಿಕೆಯಲ್ಲಿ ಒದಗಿಸುವುದು. ಅದಕ್ಕಾಗಿ ಸಂವಿಧಾನದ ಪೀಠಿಕೆಯಲ್ಲಿ ಪ್ರಸ್ತಾಪಿಸಲ್ಪಟ್ಟ ಅಂಶಗಳ ಮೇಲೆ ಧನಾತ್ಮಕ ಸಂವಾದ, ಚರ್ಚೆ, ಪ್ರಬಂಧ ರಚನೆ, ಚಿತ್ರಕಲಾ ಪ್ರದರ್ಶನ, ಹಾಡುಗಳು, ಮತ್ತಿತರೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

ಈ ಹಿನ್ನಲೆಯಲ್ಲಿ 2025-26ನೇ ಸಾಲಿನಲ್ಲಿಯೂ ಉಲ್ಲೇಖ (1), (2) ಮತ್ತು (3) ರಲ್ಲಿನ ಸುತ್ತೋಲೆಗಳಲ್ಲಿ ತಿಳಿಸಿರುವಂತೆ ಭಾರತ ಸಂವಿಧಾನ ಪೀಠಿಕೆಯನ್ನು ವಿದ್ಯಾರ್ಥಿಗಳು ಪ್ರತಿ ದಿನ ಶಾಲಾ ಪ್ರಾರ್ಥನೆಯ ಸಮಯದಲ್ಲಿ ಓದಲು ಕ್ರಮವಹಿಸುವಂತೆ ಮತ್ತು ಭಾರತದ ಸಂವಿಧಾನದ ಪೀಠಿಕೆಯನ್ನು ಎಲ್ಲಾ ಶಾಲೆಗಳಲ್ಲಿ ಪುದರ್ಶಿಸುವಂತೆ ಮತ್ತು ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಲಾಗಿದೆ.

ಇದನ್ನೂ ಓದಿ: CM Siddaramaiah: ಸಂವಿಧಾನ ಜಾರಿಯಾಗಿ 75 ವರ್ಷವಾದರೂ ಸಂಪೂರ್ಣ ಶಿಕ್ಷಣ ಸಾಧ್ಯವಾಗಿಲ್ಲ: ಸಿದ್ದರಾಮಯ್ಯ



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »