Karunadu Studio

ಕರ್ನಾಟಕ

RCB franchise: ನಾನೇನೂ ಹುಚ್ಚನಲ್ಲ: ಆರ್‌ಸಿಬಿ ಖರೀದಿ ಬಗ್ಗೆ ಡಿಕೆಶಿ ಶಾಕಿಂಗ್ ರಿಯಾಕ್ಷನ್! – Kannada News | What did D.K. Shivakumar say about the RCB purchase?


ಬೆಂಗಳೂರು: ಐಪಿಎಲ್‌ 18 ನೇ ಆವೃತ್ತಿಯ ಚಾಂಪಿಯನ್‌ ಆದ ಆರ್‌ಸಿಬಿ ತಂಡದ ಫ್ರಾಂಚೈಸಿ (RCB franchise) ಮಾರಾಟ ಮಾಡಲಾಗುತ್ತಿದೆ ಎಂಬ ವದಂತಿ ಹರಿದಾಡುತ್ತಿತ್ತು. ಇದರಿಂದ ಯಾರು ಈ ತಂಡವನ್ನು ಖರೀದಿ ಮಾಡಬಹುದು ಎಂಬ ಚರ್ಚೆಯು ಜೋರಾಗಿತ್ತು. ಅಲ್ಲದೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಂಡವನ್ನು ಖರೀದಿಸಬಹುದು, ಖರೀದಿ ಮಾಡಿದ್ರೆ ಯಾವ ಹೆಸರಿಡಬಹುದು ಅಂತೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪೋಸ್ಟ್‌ ಮಾಡಿದ್ದರು. ಇದೀಗ ಈ ಬಗ್ಗೆ ದೆಹಲಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಸ್ಪಷ್ಟನೆ ನೀಡಿದ್ದಾರೆ.

ಆರ್‌ಸಿಬಿ ಖರೀದಿ ವದಂತಿ ಬಗ್ಗೆ ದೆಹಲಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಪ್ರತಿಕ್ರಿಯಿಸಿ, ನಾನು ಹುಚ್ಚನಲ್ಲ, ನಾನು ಈ ಹಿಂದಿನಿಂದಲೂ ಕರ್ನಾಟಕ ಕ್ರಿಕೆಟ್‌ ಅಸೋಸಿಯೇಷನ್‌ನ ಸದಸ್ಯನಾಗಿದ್ದೇನೆ ಅಷ್ಟೇ. ನನಗೆ ಸಮಯವಿಲ್ಲ. ಆಡಳಿತ ಮಂಡಳಿ ಭಾಗವಾಗಲು ನನಗೆ ಆಫರ್‌ ಬಂದಿತ್ತು. ಅದರೂ ನನಗ್ಯಾಕೆ ಬೇಕು ಆರ್‌ಸಿಬಿ? ಅಷ್ಟಕ್ಕೂ ನಾನು ರಾಯಲ್ ಚಾಲೆಂಜ್ ಡ್ರಿಂಕ್ಸ್‌ ಕೂಡ ಕುಡಿಯಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಇವೆಲ್ಲ ಬರೀ ವದಂತಿಗಳಷ್ಟೇ: ಆರ್‌ಸಿಬಿ ಮಾತೃಸಂಸ್ಥೆ ಸ್ಪಷ್ಟನೆ

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್‌ ಕಪ್‌ ಗೆದ್ದ ಸಂಭ್ರಮಾಚರಣೆ ನಡೆಸುವಾಗ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಆರ್‌ಸಿಬಿಯನ್ನು ಬ್ಯಾನ್‌ ಮಾಡಲಾಗುವುದು, ಮಾರಾಟ ಮಾಡಲು ಅದರ ಮಾಲೀಕ ಸಂಸ್ಥೆ ಯೋಚಿಸುತ್ತಿದೆ ಎನ್ನಲಾಗಿತ್ತು. ಇದು ಆರ್‌ಸಿಬಿ ಅಭಿಮಾನಿಗಳಿಗೆ ಆತಂಕ ಉಂಟು ಮಾಡಿತ್ತು. 16,834 ಕೋಟಿ ರೂ.ಗೆ ಫ್ರಾಂಚೈಸಿಯನ್ನು ಮಾರಾಟ ಮಾಡಲು ಯೋಚಿಸಲಾಗುತ್ತಿದೆ ಎಂದು ವರದಿಯಾಗಿತ್ತು. ಆದರೆ, ಇವೆಲ್ಲ ಸುಳ್ಳು ಎಂದು ಆರ್‌ಸಿಬಿ ಮಾಲೀಕತ್ವ ಹೊಂದಿರುವ ಯುನೈಟೆಡ್‌ ಸ್ಪಿರಿಟ್‌ನ ಮಾತೃ ಸಂಸ್ಥೆ ಡಿಯಾಜಿಯೊ ಸ್ಪಷ್ಟನೆ ನೀಡಿತ್ತು. ನಮ್ಮ ತಂಡ ಮಾರಾಟಕ್ಕಿಲ್ಲ ಇವೆಲ್ಲ ಬರೀ ವದಂತಿಗಳಷ್ಟೇ ಎಂದು ಹೇಳಿತ್ತು.

ಈ ಸುದ್ದಿಯನ್ನೂ ಓದಿ | Yettinahole Project: ಎತ್ತಿನಹೊಳೆ ಯೋಜನೆ ಇನ್ನೆರಡು ವರ್ಷದಲ್ಲಿ ಮುಗಿಯುತ್ತೆ: ಸಿಎಂ ಸಿದ್ದರಾಮಯ್ಯ



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »