Karunadu Studio

ಕರ್ನಾಟಕ

Bhagya Lakshmi Serial: ತುಲಾಭಾರಕ್ಕಾಗಿ ಊಟ-ತಿಂಡಿ ಬಿಟ್ಟು ಕೂತ ಕಿಶನ್: ಮೀನಾಕ್ಷಿ ಪ್ಲ್ಯಾನ್ ವರ್ಕ್ ಆಗುತ್ತ? – Kannada News | Bhagya Lakshmi Kannada Serial July 2nd Episode Colors Kannada


ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ನಾನಾ ತಿರುವುಗಳ ಮೂಲಕ ರೋಚಕ ಸೃಷ್ಟಿಸಿದೆ. ಸದ್ಯ ಭಾಗ್ಯ ತಂಗಿ ಪೂಜಾ ಹಾಗೂ ಕಿಶನ್ ಮದುವೆ ಕಾರ್ಯ ಭರ್ಜರಿಯಿಂದ ಸಾಗುತ್ತಿದೆ. ಇದರ ಜೊತೆಗೆ ಆದೀಶ್ವರ್ ಕಾಮತ್ ಹಾಗೂ ಭಾಗ್ಯ ಗಂಡ ತಾಂಡವ್​ನ ಭೇಟಿ ಆಗಿದೆ. ಒಂದು ಪ್ರಾಜೆಕ್ಟ್ ವಿಚಾರವಾಗಿ ಇವರಿಬ್ಬರೂ ಜೊತೆಯಾಗಿದ್ದಾರೆ. ಅತ್ತ ಮೀನಾಕ್ಷಿ ಹಾಗೂ ಕನ್ನಿಕಾ ಈ ಮದುವೆಯನ್ನು ಹೇಗಾದರು ಮಾಡಿ ನಿಲ್ಲಿಸಲೇ ಬೇಕೆಂದು ಯೋಜನೆ ಹೆಣೆದಿದ್ದಾರೆ. ಇದರ ಮೊದಲ ಭಾಗವಾಗಿ ಭಾಗ್ಯ ಮನೆಯವರಿಗೆ ತುಲಾಭಾರದ ಶಾಕ್ ನೀಡಿದ್ದಾರೆ.

ಪೂಜಾ-ಕಿಶನ್ ಮದುವೆಗೆ ಎಲ್ಲರ ಎದುರು ಮೀನಾಕ್ಷಿ ಒಪ್ಪಿಗೆ ಸೂಚಿಸಿದ್ದಾಳೆ. ಆದರೆ, ಇದೊಂದು ಪ್ಲ್ಯಾನ್ ಅಷ್ಟೆ. ಈ ಮದುವೆ ನಿಲ್ಲಿಸಿಯೇ ತೀರುತ್ತೇನೆ ಎಂದು ಮೀನಾಕ್ಷಿ ಹೇಳಿದ್ದಾಳೆ. ಇದಕ್ಕಾಗಿ ಕನ್ನಿಕಾ ಜೊತೆ ಸೇರಿ ಒಂದೊಂದೆ ಪ್ಲ್ಯಾನ್ ಹೆಣೆಯುತ್ತಿದ್ದಾಳೆ. ಮೊದಲಿಗೆ ಭಾಗ್ಯ ಮನೆಗೆ ಇವರಿಬ್ಬರು ಬಂದು ನಮ್ಮದೊಂದು ಹರಕೆ ಇದೆ.. ಕಿಶನ್​ನ ತುಲಾಭಾರ ಆಗಬೇಕು.. ಇದನ್ನ ಹುಡುಗಿ ಮನೆಯವರೇ ಮಾಡಬೇಕು.. ಅಷ್ಟೇ ಅಲ್ಲ ಇದು ಚಿನ್ನದಲ್ಲಿ ಆಗಬೇಕು ಎಂದು ಹೇಳಿದ್ದಾರೆ. ಇದನ್ನು ಕೇಳಿ ಭಾಗ್ಯ ಮನೆಯವರಿಗೆ ಶಾಕ್ ಆಗಿದೆ.

ಅಷ್ಟೊಂದು ಚಿನ್ನ ಎಲ್ಲಿಂದ ತರೋದು.. ಹೇಗೆ ಹಣ ಗೂಡಿಸುವುದು ಎಂದು ಭಾಗ್ಯ ಮನೆಯವರಿಗೆ ಟೆನ್ಶನ್ ಶುರುವಾಗಿದೆ. ಈ ವಿಚಾರ ತಿಳಿದು ಕಿಶನ್​ಗೆ ಕೂಡ ಶಾಕ್ ಆಗಿದೆ. ಅತ್ತೆ ಇದೆಲ್ಲ ಬೇಕಂತಲೇ ಮಾಡೋದು ಎಂಬ ಮರ್ಮ ಕಿಶನ್​ಗೆ ತಿಳಿದಿದೆ. ಪೂಜಾ ಹಾಗೂ ಭಾಗ್ಯಾಗೆ ಕಾಲ್ ಮಾಡಿ, ಈ ತುಲಾಭಾರವೆಲ್ಲ ಬೇಡ.. ಸುಮ್ಮನೆ ಬರ್ಡನ್ ಆಗಬಹುದು ನಿಮ್ಗೆ ಎಂದು ಹೇಳುತ್ತಾನೆ. ಹಾಗೇನಿಲ್ಲ ಇದನ್ನೂ ಮಾಡದಿದ್ರೆ ಹೇಗೆ ಎಂದು ಭಾಗ್ಯ ಹೇಳುತ್ತಾಳೆ.

ಭಾಗ್ಯ ಮನೆಯವರಿಗೆ ಚಿನ್ನದಲ್ಲಿ ತುಲಾಭಾರ ಮಾಡಿಸೋದು ತುಂಬಾ ಬರ್ಡನ್ ಆಗಬಹುದು, ಕಷ್ಟ ಆಗಬಹುದು ಎಂದು ಕಿಶನ್​ಗೆ ಗೊತ್ತಿದೆ. ಇದಕ್ಕಾಗಿ ಆತ ತೂಕ ಕಳೆದುಕೊಳ್ಳಲು ಊಟ-ತಿಂಡಿ ಬಿಟ್ಟು ಕೂತಿದ್ದಾನೆ. ಮನೆಯವರು ಊಟಕ್ಕೆ ಕರೆದರೂ ಆತ ಬರುತ್ತಿಲ್ಲ.. ಹಸಿವಿಲ್ಲ ಎಂದು ಹೇಳಿದ್ದಾನೆ. ಆದೀಶ್ವರ್ ಊಟಕ್ಕೆ ಬಾ ಎಂದು ರೂಮ್​ಗೆ ಕರೆಯಲು ಬಂದಾಗ ಕಿಶನ್ ವೈಟ್ ಮಿಶಿನ್​ನಲ್ಲಿ ತನ್ನ ತೂಕ ನೋಡುತ್ತಾ ಇರುತ್ತಾನೆ. ಇದು ಆದೀಗೆ ಅನುಮಾನ ಬಂದರೂ ಸುಮ್ಮನೆ ತಿಳಿಯದಂತೆ ಹೋಗುತ್ತಾನೆ.

ಆದರೆ, ಅತ್ತ ತುಲಭಾರಕ್ಕೆ ಸುಂದರಿ ಒಂದು ಪ್ಲ್ಯಾನ್ ಮಾಡಿದ್ದಾಳೆ. ಪೂಜಾ ಕರೆದುಕೊಂಡು ಚಿನ್ನದಂತೆ ಕಾಣುವ ಪಾತ್ರೆಯನ್ನು ತಯಾರು ಮಾಡುವ ಅಂಗಡಿಗೆ ಕರೆದುಕೊಂಡು ಬಂದಿದ್ದಾಳೆ. ಇಲ್ಲಿ ತುಲಾಭಾರಕ್ಕೆ ಏನೆಲ್ಲ ಬೇಕೋ ಅದನ್ನೆಲ್ಲ ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಅತ್ತ ಒಲ್ಲದ ಮನಸ್ಸಿನಿಂದ ಪೂಜಾ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾಳೆ. ಚಿನ್ನದಂತೆ ಕಾಣುವ ಅದೇ ತೂಕವಿರುವ ಡುಪ್ಲಿಕೇಟ್ ವಸ್ತುಗಳನ್ನು ಸುಂದರಿ ಆರ್ಡರ್ ಮಾಡಿದ್ದಾಳೆ.

ಇನ್ನು ತಾಂಡವ್​ನ ಬ್ಯುಸಿನೆಸ್ ಪ್ಲ್ಯಾನ್ ಕೇಳಿ ವಾವ್.. ಬ್ರಿಲಿಯೆಂಟ್.. ನಿಜವಾಗ್ಲೂ ಈ ಐಡಿಯಾ ತುಂಬಾ ಚೆನ್ನಾಗಿದೆ.. ನಾನು ಈ ಪ್ರಾಜೆಕ್ಟ್​ನ ತೆಗೋತ ಇದ್ದಾನೆ ಎಂದು ಎಂದು ಆದೀಶ್ವರ್ ಹೇಳಿದ್ದು, ಸದ್ಯ ಇವರಿಬ್ಬರು ಬ್ಯುಸಿನೆಸ್ ಪಾರ್ಟರ್ ಆಗಿದ್ದಾರೆ. ತಾಂಡವ್​ನ ಪ್ಲ್ಯಾನ್ ಮೇಲೆ ಕೋಟಿ ಕೋಟಿ ಇನ್​ವೆಸ್ಟ್ ಮಾಡಲು ಆದೀ ತಯಾರಾಗಿದ್ದಾನೆ. ನಿಮ್ಮ ಫೈಲ್ ಎಲ್ಲ ನನ್ಗೆ ಕೊಡಿ ಡೀಪ್ ಆಗಿ ಸ್ಟಡಿ ಮಾಡಬೇಕು.. ನಿಮ್ಗೆ ರಿಟರ್ನ್ ಕಾಲ್ ಮಾಡುತ್ತೇನೆ.. ತುಂಬಾ ದಿನ ಆದ ನಂತ್ರ ನಿಮ್ಮಂತ ಟ್ಯಾಲೆಂಟ್​ನ ನೋಡ್ತಾ ಇದ್ದೇನೆ ಎಂದು ಆದೀ ಹೇಳಿದ್ದಾನೆ.

ಮನೆಗೆ ಹೋದ ಬಳಿಕ ಆದೀ ಪುನಃ ಈ ಐಡಿಯಾವನ್ನೆಲ್ಲ ನೋಡಿದ್ದಾನೆ. ಇದನ್ನ ನೋಡಿ ಆದೀ ಫುಲ್ ಇಂಪ್ರೆಸ್ ಆಗಿದ್ದು, ತಾಂಡವ್​ಗೆ ಕಾಲ್ ಮಾಡಿ ಅದ್ಭುತವಾಗಿದೆ ಈ ಪ್ಲ್ಯಾನ್.. ನಾಳೆ ಸಿಗೋಣ ಮುಂದಿನ ಪ್ರೊಸೆಸರ್ ಬಗ್ಗೆ ಮಾತಾಡೋಣ ಎಂದು ಹೇಳಿದ್ದಾನೆ. ಆದರೆ, ಅಚ್ಚರಿ ಎಂದರೆ ಇಲ್ಲಿ ತಾಂಡವ್, ಭಾಗ್ಯಾಳ ಗಂಡ ಎಂಬುದು ಆದೀಗೆ ತಿಳಿದಿಲ್ಲ. ಈ ಸತ್ಯ ಯಾವಾಗ ಹೊರಬೀಳುತ್ತೆ ಎಂಬುದು ನೋಡಬೇಕಿದೆ.

Mokshitha Pai: ಥಾರ್​ನಲ್ಲಿ ಬೆಂಕಿ ಎಂಟ್ರಿ ಕೊಟ್ಟ ಲೇಡಿ ಟೈಗರ್ ಮೋಕ್ಷಿತಾ: ವಿಡಿಯೋ ನೋಡಿ



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »