Karunadu Studio

ಕರ್ನಾಟಕ

ಟ್ರ್ಯಾಕ್ಟರ್‌ಗೆ ಬಾಡಿಗೆ ನೀಡಲು ಹಣವಿಲ್ಲ; ನೇಗಿಲು ತಾವೇ ಹೊತ್ತು ಗದ್ದೆ ಉಳುಮೆಗೆ ಇಳಿದ ವೃದ್ಧ ದಂಪತಿ: ಅನ್ನದಾತರ ಸ್ಥಿತಿ ಕಂಡು ಮರುಗಿದ ದೇಶ – Kannada News | No Money, Elderly Couple Till Land For Crops

  • July 2, 2025
  • 0 Comments

ಮುಂಬೈ: ಭಾರತ ಕೃಷಿ ಪ್ರಧಾನ ದೇಶ; ರೈತರೇ ನಮ್ಮ ಬೆನ್ನೆಲುಬು ಎನ್ನುವ ಮಾತನ್ನು ಕೇಳಿಕೊಂಡು ಬೆಳೆದವರು ನಾವೆಲ್ಲ. ಆದರೆ ಬೇಸರದ ವಿಚಾರ ಎಂದರೆ ಕೃಷಿಕರಿಗೆ ಸಿಗಬೇಕಾದ ಪ್ರಾಧಾನ್ಯತೆಯಾಗಲೀ, ಮನ್ನಣೆಯಾಗಲೀ ಇನ್ನೂ ಲಭಿಸಿಲ್ಲ. ಇಡೀ ದೇಶದ ಹೊಟ್ಟೆ ತುಂಬಿಸುವ ಅದೇಷ್ಟೋ ಅನ್ನದಾತರು ಹಸಿವಿನಿಂದ ಬಳಲುತ್ತಿದ್ದಾರೆ, ಜೀವನ ನಡೆಸಲು ಪರದಾಡುತ್ತಿದ್ದಾರೆ. ಅದಕ್ಕೆ ಸ್ಪಷ್ಟ ಉದಾಹರಣೆ ಎನ್ನುವಂತಿದೆ ಈ ವಿಡಿಯೊ. ಎತ್ತುಗಳನ್ನು ಕೊಂಡುಕೊಳ್ಳಲು, ಕನಿಷ್ಠ ಟ್ರ್ಯಾಕ್ಟರ್‌ಗೆ ಬಾಡಿಗೆ ಪಾವತಿಸಲು ಹಣವಿಲ್ಲದೆ ವೃದ್ಧ ದಂಪತಿ ತಾವೇ ನೇಗಿಲು ಹೊತ್ತುಕೊಂಡು ಗದ್ದೆ ಉಳುಮೆಗೆ ಇಳಿದಿದ್ದಾರೆ. 75 ವರ್ಷದ ಪತಿಯ ಹೆಗಲಿಗೆ ನೊಗ ಕಟ್ಟಿ 65 ವರ್ಷದ ಪತ್ನಿ ನೇಗಿಲು ಬಳಸಿ ಗದ್ದೆ ಉತ್ತಿದ್ದಾರೆ. ಸದ್ಯ ಈ ವಿಡಿಯೊ (Viral Video) ದೇಶದ ಕೃಷಿಕರ ಸ್ಥಿತಿಗೆ ಕನ್ನಡಿ ಹಿಡಿದಿದ್ದು, ಹಲವರ ಮನಸ್ಸು ಮಿಡಿದಿದೆ. ಮಹಾರಾಷ್ಟ್ರದ ಲಾತೂರ್‌ನಲ್ಲಿ ಕಂಡುಬಂದ ಈ ಹೃದಯಸ್ಪರ್ಶಿ ದೃಶ್ಯ ಹಲವರ ಕಣ್ಣಂಚು ಒದ್ದೆ ಮಾಡಿದೆ. ಜತೆಗೆ ಕೃಷಿ ಚಟುವಟಿಕೆಗೆ ಸೂಕ್ತ ಸೌಕರ್ಯವಿಲ್ಲದೆ ಪರದಾಡುವ ರೈತರ ಬಗ್ಗೆ ಚಿಂತನೆ ನಡೆಸುವಂತೆ ಮಾಡಿದೆ. ವೈರಲ್‌ ವಿಡಿಯೊ ನೋಡಿ: ये तस्वीर महाराष्ट्र के लातूर ज़िले की है। 75 साल के अंबादास पवार को जब बैल नहीं मिले और ट्रैक्टर किराए पर लेने के पैसे नहीं थे, तो उन्होंने अपनी पत्नी मुक्ताबाई के साथ खुद को ही हल में जोत लिया। बीते दो सालों से ये दंपती ऐसे ही खेत जोत रहे हैं। ये आत्मनिर्भर भारत नहीं, मजबूर… pic.twitter.com/gRHDqsNY15 — Hansraj Meena (@HansrajMeena) July 1, 2025 ಈ ಸುದ್ದಿಯನ್ನೂ ಓದಿ: Viral Video: ದೇವಸ್ಥಾನದಲ್ಲೇ ನಮಾಜ್‌ ಮಾಡಿದ ಮುಸ್ಲಿಂ ವ್ಯಕ್ತಿ; ಶಾಕಿಂಗ್‌ ವಿಡಿಯೊ ವೈರಲ್‌ ವಿಡಿಯೊದಲ್ಲಿ ಏನಿದೆ? ಲಾತೂರ್ ಜಿಲ್ಲೆಯ ಹಡೋಲ್ಟಿ ಗ್ರಾಮದ ಅಂಬಾದಾಸ್ ಪವಾರ್ ಅವರಿಗೆ 2.5 ಎಕ್ರೆ ಕೃಷಿ ಭೂಮಿ ಇದೆ. ಆದರೆ ಭೂಮಿಯನ್ನು ಉಳುಮೆ ಮಾಡಲು ಎತ್ತು ಅಥವಾ ಟ್ರ್ಯಾಕ್ಟರ್ ಸಹಾಯ ಪಡೆಯಲು ಅವರ ಬಳಿ ಹಣವಿಲ್ಲ. ಜತೆಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲೂ ಅವರಿಗೆ ಸಾಧ್ಯವಾಗುತ್ತಿಲ್ಲ. ಆದರೆ ಕೃಷಿ ಮಾಡದೆ ಬೇರೆ ದಾರಿ ಇಲ್ಲ. ಕೊನೆಗೆ ಬೇರೆ ಆಯ್ಕೆ ಇಲ್ಲದೆ ಅಂಬಾದಾಸ್ ಪವಾರ್ ಪತ್ನಿ ಮುಕ್ತಾಭಾಯಿ ಜತೆ ಸೇರಿ ತಾವೇ ಭೂಮಿ ಉಳುಮೆ ಮಾಡಲು ಮುಂದಾಗಿದ್ದಾರೆ. ಕೆಲವು ವರ್ಷಗಳಿಂದ ಇವರು ಇದೇ ಮಾದರಿಯನ್ನು ಅನುಸರಿಸುತ್ತಿದ್ದಾರಂತೆ. ಅವರ ಪುತ್ರ ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ವೃದ್ಧ ದಂಪತಿಯೇ ಎಲ್ಲ ಕೃಷಿ ಚಟುವಟಿಕೆಯನ್ನು ನಡೆಸುತ್ತಿದ್ದಾರೆ. ಸದ್ಯ ಇವರ ಮನೆಯಲ್ಲಿ ಸೊಸೆ ಮತ್ತು ಮೊಮ್ಮಕ್ಕಳಿದ್ದು ಅವರು ಇತರ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇದ್ದೊಬ್ಬ ಮಗಳ ಮದುವೆಯಾಗಿದೆ. ʼʼ2 ವರ್ಷ ಸುರಿದ ಭಾರಿ ಮಳೆಯಿಂದಾಗಿ ಬೆಳೆಗಳೆಲ್ಲ ನಾಶವಾದ ಕಾರಣ ಸಾಲ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತುʼʼ ಎಂದು ಅಂಬಾದಾಸ್ ಪವಾರ್ ತಿಳಿಸಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ವೃದ್ಧ ದಂಪತಿ ಭೂಮಿಯನ್ನು ಹದ ಮಾಡುವಾಗ ದಣಿದಂತೆ ಕಂಡಿದ್ದಾರೆ. “ನನಗೆ ಕೆಲಸ ನಿಲ್ಲಿಸಲು ಸಾಧ್ಯವಿಲ್ಲ. ಉಳುಮೆ ಮಾಡುವಾಗ ನನ್ನ ತೋಳುಗಳು ನಡುಗುತ್ತವೆ, ನನ್ನ ಕಾಲುಗಳು ಬಾಗುತ್ತವೆ ಮತ್ತು ನನ್ನ ಕುತ್ತಿಗೆ ಕೆಲವೊಮ್ಮೆ ದಣಿದಿರುತ್ತದೆ. ಆದರೆ ಕೆಲಸ ಮಾಡುವುದು ಬಿಟ್ಟು ಜೀವನವು ನಮಗೆ ಬೇರೆ ಆಯ್ಕೆಯನ್ನು ನೀಡಿಲ್ಲ” ಎಂದು ಅಂಬಾದಾಸ್ ಪವಾರ್ ವಿಷಾದದಿಂದ ಹೇಳುತ್ತಾರೆ. ಈ ವಿಡಿಯೊ ಕೃಷಿ ವೆಚ್ಚಗಳ ಹೆಚ್ಚಳ, ಹವಾಮಾನದ ಬದಲಾವಣೆಯಿಂದ ಸಣ್ಣ ರೈತರ ಮೇಲೆ ಬೀರುವ ಪರಿಣಾಮದ ಮೇಲಿನ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬರುವಂತೆ ಮಾಡಿದೆ. ವಿಡಿಯೊ ನೋಡಿ ಹಲವರು ಮರುಗಿದ್ದಾರೆ. Source link

ಕರ್ನಾಟಕ

Cabinet Meeting: ಬೆಂಗಳೂರು ಗ್ರಾಮಾಂತರ ಇನ್ನುಮುಂದೆ ʼಬೆಂ. ಉತ್ತರ ಜಿಲ್ಲೆʼ, ಭಾಗ್ಯನಗರ ಆಗಲಿದೆ ಬಾಗೇಪಲ್ಲಿ; ಸಚಿವ ಸಂಪುಟ ತೀರ್ಮಾನ – Kannada News | Decision by the cabinet for the renaming of Bengaluru Rural and Bagepalli

  • July 2, 2025
  • 0 Comments

ಬೆಂಗಳೂರು: ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ ಇದೀಗ ಮತ್ತೊಂದು ಜಿಲ್ಲೆ ಹಾಗೂ ತಾಲೂಕಿನ ಹೆಸರು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಇನ್ನುಮುಂದೆ ʼಬೆಂಗಳೂರು ಉತ್ತರ ಜಿಲ್ಲೆʼ (Bangalore North District) ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣವು ಭಾಗ್ಯನಗರ (Bhagyanagar) ಆಗಲಿದೆ. ಮರುನಾಮಕರಣಕ್ಕೆ ಸಂಬಂಧಿಸಿ ನಂದಿ ಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ತೀರ್ಮಾನ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಭಾಗವನ್ನು ರಿಯಲ್ ಎಸ್ಟೇಟ್ ಪರಿಭಾಷೆಯಲ್ಲಿ ಬೆಂಗಳೂರು ಉತ್ತರ ಎಂದೇ ಕರೆಯಲಾಗುತ್ತದೆ. ‘ಬ್ರ್ಯಾಂಡ್ ಬೆಂಗಳೂರು’ ಮೌಲ್ಯ ಮತ್ತು ಲಾಭವನ್ನು ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಿಗೂ ವಿಸ್ತರಿಸಲು ಈ ನಿರ್ಣಯ ಕೈಗೊಳ್ಳುತ್ತಿರುವುದಾಗಿ ಸರ್ಕಾರ ಈಗಾಗಲೇ ಸಮರ್ಥಿಸಿಕೊಂಡಿತ್ತು. 1986ರಲ್ಲಿ ಬೆಂಗಳೂರು ನಗರ ಜಿಲ್ಲೆಯಿಂದ ಪ್ರತ್ಯೇಕಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಚಿಸಲಾಯಿತು. ಆ ಸಮಯದಲ್ಲಿ ರಾಮನಗರ ಜಿಲ್ಲೆಯ ತಾಲೂಕುಗಳೂ ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದ್ದವು. ನಂತರ 2007ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ವಿಭಜಿಸಿ ರಾಮನಗರ ಜಿಲ್ಲೆ ರಚಿಸಲಾಯಿತು. ಇತ್ತೀಚೆಗೆ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡಲಾಗಿದೆ. ಈಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರು ಬದಲಿಸಲು ಅನುಮೋದನೆ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಹೆಸರನ್ನು ‘ಭಾಗ್ಯನಗರ’ ಎಂದು ಬದಲಿಸುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಇದಕ್ಕೂ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಎತ್ತಿನಹೊಳೆ ಯೋಜನೆಯಲ್ಲಿ 9 ಜಿಲ್ಲೆಗಳ 75 ಲಕ್ಷ ಜನರಿಗೆ ಕುಡಿಯುವ ನೀರು ಸಚಿವ ಸಂಪುಟ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ಶೇ.90 ರಷ್ಟು ಬೆಂಗಳೂರು ವಿಭಾಗದ ವಿಷಯಗಳನ್ನೇ ಈ ವಿಶೇಷ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡಿದ್ದೇವೆ. ಒಟ್ಟು 48 ವಿಷಯಗಳು ಚರ್ಚೆಯಾಗಿದೆ. 3400 ಕೋಟಿ ಮೊತ್ತವನ್ನು ಮಂಜೂರು ಮಾಡಿದ್ದೇವೆ ಎಂದು ತಿಳಿಸಿದ್ದಾರೆ. 2050 ಕೋಟಿ ಬೆಂಗಳೂರು ಜಿಲ್ಲಾ ಭಾಗಕ್ಕೇ ಕೊಟ್ಟಿದ್ದೇವೆ. ಎತ್ತಿನಹೊಳೆ ಯೋಜನೆಗೆ ಒಟ್ಟು 23251 ಕೋಟಿ ಪರಿಷ್ಕೃತ ಅಂದಾಜು ಮಾಡಲಾಗಿದ್ದು, ಇಲ್ಲಿಯವರೆಗೂ 17147 ಕೋಟಿ ಖರ್ಚಾಗಿದೆ. ಮೂಲತಃ ಕುಡಿಯುವ ನೀರಿನ ಯೋಜನೆ ಇದಾಗಿದೆ. ಕೆರೆಗಳಿಗೆ ನೀರು ತುಂಬಿಸುವುದು ನಂತರದ ಆದ್ಯತೆಯಾಗಿದೆ. ಈ ಸುದ್ದಿಯನ್ನೂ ಓದಿ | Karnataka SC survey: ಆನ್‌ಲೈನ್‌ನಲ್ಲೂ ಪರಿಶಿಷ್ಟ ಜಾತಿ ಸಮೀಕ್ಷೆಗೆ ಮಾಹಿತಿ ನೀಡಬಹುದು: ಸಿಎಂ 24.1 TMC ನೀರಿನಲ್ಲಿ ಕುಡಿಯುವ ನೀರಿಗೆ 14 TMC ಬೇಕಾಗಿದೆ. ಆದ್ದರಿಂದ ಮೊದಲು ಕುಡಿಯುವ ನೀರನ್ನು ಕೊಡುವ ಯೋಜನೆ ಮುಗಿಸಲು ಸಂಪುಟ ಸಭೆ ತೀರ್ಮಾನ. ಎರಡು ವರ್ಷಗಳಲ್ಲಿ ಉದ್ದೇಶಿತ ಜಿಲ್ಲೆ, ತಾಲೂಕುಗಳಿಗೆ ನೀರು ಕೊಡುತ್ತೇವೆ. 9807 ಕೋಟಿಮೊತ್ತದಲ್ಲಿ ಗ್ರಾವಿಟಿ ಮುಖ್ಯ ಕೆನಲ್ ನ‌ ಕೆಲಸ 85% ಮಗಿದಿದೆ. ಹೆಚ್ಚುವರಿಯಾಗಿ ಇದಕ್ಕೆ 8000 ಕೋಟಿ ಬೇಕಾಗಿದೆ. ಬಾಕಿ ಉಳಿದಿರುವುದು 6000 ಚಿಲ್ಲರೆ ಕೋಟಿ. ಒಟ್ಟು 9 ಜಿಲ್ಲೆಗಳ 75 ಲಕ್ಷ ಜನರಿಗೆ ಕುಡಿಯುವ ನೀರು ಕೊಡ್ತೀವಿ. ಬೆಂಗಳೂರು ಜಿಲ್ಲೆಗಳ 31 ವಿಷಯಗಳು ಚರ್ಚೆಯಾಗಿ 2250 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. Source link

ಕರ್ನಾಟಕ

Actress Ramya: ದೇವನಹಳ್ಳಿ ರೈತರ ಹೋರಾಟಕ್ಕೆ ನಟಿ ರಮ್ಯಾ ಬೆಂಬಲ; ಸಿಎಂ ಕರುಣೆ ತೋರಲಿ ಎಂದು ಟ್ವೀಟ್‌ – Kannada News | Actress Ramya supports the farmers’ struggle in Devanahalli

  • July 2, 2025
  • 0 Comments

ಬೆಂ.ಗ್ರಾಮಾಂತರ: ಭೂಸ್ವಾಧೀನ ವಿರುದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ನಡೆಸುತ್ತಿರುವ ರೈತರ ಹೋರಾಟಕ್ಕೆ ಸ್ಯಾಂಡಲ್‌ವುಡ್ ನಟಿ ರಮ್ಯಾ (Actress Ramya) ಬೆಂಬಲ ಸೂಚಿಸಿದ್ದು, ರೈತರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕರುಣೆ ತೋರಬೇಕು ಎಂದು ಮನವಿ ಮಾಡಿದ್ದಾರೆ. ದೇವನಹಳ್ಳಿ ರೈತರ ಹೋರಾಟಕ್ಕೆ ಸಂಬಂಧಿಸಿ ಆಂಗ್ಲ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ನಟಿ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ರೈತರ ಬಗ್ಗೆ ಸ್ವಲ್ಪ ಕರುಣೆ ತೋರಿಸಿ, ಅವರಿಗೆ ಒಳ್ಳೆಯದನ್ನು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಇದು ಕರ್ನಾಟಕದ ರೈತರ ವ್ಯಥೆ ಮಾತ್ರವಲ್ಲ ದೇಶಾದ್ಯಂತ ಇದೇ ಈ ರೀತಿಯ ಪರಿಸ್ಥಿತಿ ಇದೆ. ಕೈಗಾರಿಕೆಗಳು ಉದ್ಯೋಗಗಳನ್ನು ಸೃಷ್ಟಿಸುತ್ತವೆ, ಆದರೆ ರೈತರ ಜೀವನೋಪಾಯವನ್ನೂ ನಾವು ಖಚಿತಪಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. I hope @CMofKarnataka @siddaramaiah avru will show the farmers some compassion and do them good. This story is not just of the farmers here in Karnataka it’s the same all over the country- while industries creates jobs we need to ensure the livelihoods of the farmers are also… pic.twitter.com/snAyTji2Kb — Ramya/Divya Spandana (@divyaspandana) July 2, 2025 ಏನಿದು ರೈತ ಹೋರಾಟ? ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಫಲವತ್ತಾದ 1777 ಎಕರೆ ಕೃಷಿ ಭೂಮಿಯನ್ನು ಸರ್ಕಾರವು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಇದನ್ನು ವಿರೋಧಿಸಿ ಕಳೆದ 1180ಕ್ಕೂ ಹೆಚ್ಚು ದಿನಗಳಿಂದ 13 ಗ್ರಾಮಗಳ ರೈತರು ಹೋರಾಟ ನಡೆಸುತ್ತಿದ್ದಾರೆ. ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಏರ್ಪಡಿಸಿರುವ ಹಿನ್ನೆಲೆಯಲ್ಲಿ ಜುಲೈ 2ರಂದು ಕೂಡ ಎರಡು ಪ್ರಮುಖ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ. ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ಸಂತ್ರಸ್ತ ರೈತರು, ನಮ್ಮ ಬದುಕು ಈ ಮಣ್ಣಿನಲ್ಲಿದೆ, ಈ ಮಣ್ಣಿನ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂಬ ಘೋಷವಾಕ್ಯದೊಂದಿಗೆ ದೇವನಹಳ್ಳಿಯ ನಾಡ ಕಚೇರಿ ಮುಂಭಾಗದಲ್ಲಿರುವ ಧರಣಿ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅದೇ ರೀತಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ‘ಭೂಮಿ ಸತ್ಯಾಗ್ರಹ’ದಲ್ಲಿ ಖ್ಯಾತ ನಟ ಪ್ರಕಾಶ್ ರೈ ಸೇರಿ ನಾಡಿನ ಅನೇಕ ಕಲಾವಿದರು, ರಂಗಕರ್ಮಿಗಳು ಉಪವಾಸ ನಿರತ ರೈತರನ್ನು ಬೆಂಬಲಿಸಿ ಬೆಂಬಲ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. Source link

ಕರ್ನಾಟಕ

Viral Video: ತಾಯಿ-ಮಗನ ಮೇಲೆ ಬಿಜೆಪಿ ನಾಯಕನ ಅಟ್ಟಹಾಸ; ಚಪ್ಪಲಿಯಿಂದ ಹೊಡೆದು ಹುಚ್ಚಾಟ- ಶಾಕಿಂಗ್‌ ವಿಡಿಯೊ ವೈರಲ್‌ – Kannada News | BJP leader hit a woman with a slipper; what is the reason?

  • July 2, 2025
  • 0 Comments

ಲಖನೌ: ಉತ್ತರ ಪ್ರದೇಶದ ದಂಕೌರ್ ಬಳಿಯ ಬಿಲಾಸ್ಪುರ ಪಟ್ಟಣದಲ್ಲಿ ಬಿಜೆಪಿ ನಾಯಕನೊಬ್ಬ ಹಾಡಹಗಲೇ ಮಹಿಳೆ ಮತ್ತು ಆಕೆಯ ಮಗನನ್ನು ಚಪ್ಪಲಿಯಿಂದ ಕ್ರೂರವಾಗಿ ಥಳಿಸಿದ್ದ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಈ ಆಘಾತಕಾರಿ ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು,ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಸ್ನಾ ಮಂಡಲದಲ್ಲಿ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಅತಿಕ್ ಅಹ್ಮದ್ ಎಂಬಾತ ಮಹಿಳೆ ಮತ್ತು ಆಕೆಯ ಮಗನ ಮೇಲೆ ಹಲ್ಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ವಿಡಿಯೊ ಇಲ್ಲಿದೆ ನೋಡಿ… उत्तर प्रदेश के जिला गौतमबुद्धनगर के ग्रेटर नोएडा में भाजपा के कासना मंडल मंत्री ने मजदूर महिला सकीना और उसके बेटे सफीकुर्रहमान को चप्पल और डंडे से बुरी तरह पीटा। वही भाजपा, जो मंच से “बेटी बचाओ” का नारा देती है, उसके नेता सड़क पर बेटियों और उनके परिवार पर कहर बरपा रहे हैं! यह… pic.twitter.com/5b5CBWqibX — Aazad Samaj Party – Kanshi Ram (@AzadSamajParty) July 1, 2025 ಅಧಿಕಾರಿಗಳ ಪ್ರಕಾರ, ಅಸ್ಸಾಂ ಮೂಲದ ಈ ಸಂತ್ರಸ್ತ ಮಹಿಳೆ ಮತ್ತು ಆಕೆಯ ಮಗ ಬಿಲಾಸ್ಪುರದ ಅತಿಕ್ ಅಹ್ಮದ್ ಅವನ ಜಮೀನಿನಲ್ಲಿ ತಾತ್ಕಾಲಿಕ ಗುಡಿಸಲನ್ನು ಕಟ್ಟಿಕೊಂಡು ವಾಸವಾಗಿದ್ದರು. ಇಬ್ಬರೂ ತ್ಯಾಜ್ಯ ಸಂಗ್ರಹಿಸುವ ಮೂಲಕ ಜೀವನ ನಡೆಸುತ್ತಿದ್ದರು. ಆದರೆ ಈ ಬಿಜೆಪಿ ನಾಯಕನಿಂದ ಮಹಿಳೆ ಸಾಲ ಪಡೆದಿದ್ದು, ಈ ಸಾಲದ ವಿವಾದಕ್ಕೆ ಸಂಬಂಧಿಸಿದಂತೆ ಈ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಡ್ಡಿಗೆ ಹಣ ನೀಡುವ ಅತಿಕ್ ಅಹ್ಮದ್, ಒಪ್ಪಂದದ ಸಮಯದೊಳಗೆ ಸಾಲ ಪಡೆದ ಮೊತ್ತವನ್ನು ಮರುಪಾವತಿಸಲು ಮಹಿಳೆ ವಿಫಲವಾದ ಕಾರಣ ಆಕೆ ಹಾಗೂ ಆಕೆಯ ಮಗನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮೂಲಗಳು ಬಹಿರಂಗಪಡಿಸಿವೆ. ವೈರಲ್ ಆದ ವಿಡಿಯೊದಲ್ಲಿ,ಆತ ಮಹಿಳೆ ಮತ್ತು ಆಕೆಯ ಮಗನನ್ನು ನಿಂದಿಸುತ್ತಾ ಚಪ್ಪಲಿಯಿಂದ ಪದೇ ಪದೇ ಹೊಡೆಯುತ್ತಿರುವುದು ಸೆರೆಯಾಗಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಯಾವುದೇ ಔಪಚಾರಿಕ ದೂರು ನೀಡಿಲ್ಲ ಎಂದು ವರದಿಯಾಗಿದೆ. ಆದರೆ, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಸುದ್ದಿಯನ್ನೂ ಓದಿ:Viral Video: ಗೋಡೆ ಕೊರೆದು ಮೊಬೈಲ್‍ ಅಂಗಡಿಗೆ ಕನ್ನ ಹಾಕಿದ ಕಿಲಾಡಿ ಕಳ್ಳ- ವಿಡಿಯೊ ಇಲ್ಲಿದೆ ನೋಡಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 151 ರ ಅಡಿಯಲ್ಲಿ ಅತಿಕ್ ಅಹ್ಮದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. Source link

ಕರ್ನಾಟಕ

Viral Vidoe: ಅಯ್ಯೋ… ಇದೇನಿದು ಚಪ್ಪಲಿ ಪಕೋಡ? ಇದನ್ನು ನೋಡಿದ್ರೆ ನೀವೂ ಆಗ್ತೀರಿ! – Kannada News | If you see this pakoda, you will also be shocked; what is this viral recipe?

  • July 2, 2025
  • 0 Comments

ಧೋ ಎಂದು ಸುರಿಯುವ ಮಳೆಗೆ ಬಿಸಿ ಬಿಸಿ ಪಕೋಡ ಅದ್ಭುತವಾಗಿ ಸಾಥ್‌ ನೀಡುತ್ತದೆ.ಮಳೆಗೂ ಪಕೋಡಕ್ಕೂ ಇರುವ ನಂಟೆ ಅಂಥದ್ದು.ಸಾಮಾನ್ಯವಾಗಿ ಪಕೋಡ ತಯಾರಿಸುವಾಗ ಅದಕ್ಕೆ ಈರುಳ್ಳಿ, ಮೆಣಸಿನಕಾಯಿ ಮತ್ತು ಹೂಕೋಸುಗಳನ್ನು ಹಾಕುತ್ತಾರೆ.ಅದೂ ಅಲ್ಲದೇ, ಈ ಪಕೋಡಗಳ ಆಕಾರ, ಗಾತ್ರ ಒಂದೇ ರೀತಿ ಇರಲ್ಲ. ಆದರೆ ಈಗ ಸೋಶಿಯಲ್‌ ಮೀಡಿಯಾದಲ್ಲಿ ಪಕೋಡದ ವಿಡಿಯೊವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿದೆ.ಹೌದು ಮಲೇಷ್ಯಾದ ರಸ್ತೆಬದಿ ಅಂಗಡಿಯಲ್ಲಿ, ಈ ಪಕೋಡಗಳಿಗೆ ವಿಶೇಷ ಆಕಾರ ನೀಡಲಾಗಿದೆ.ಮಲೇಷ್ಯಾದಲ್ಲಿ ಚಪ್ಪಲ್ ಆಕಾರದಲ್ಲಿ ಪಕೋಡಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಇದರ ವಿಡಿಯೊಗಳು ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿವೆ. ಈ ‘ಚಪ್ಪಲ್ ಪಕೋಡ’ಗಳನ್ನು ಸ್ಥಳೀಯ ಭಾಷೆಯಲ್ಲಿ “ಕರಿಪಾಪ್” ಮತ್ತು “ಕರಿ ಪಫ್” ಎಂದು ಕರೆಯಲಾಗುತ್ತದೆ. ವೈರಲ್ ಆದ ವಿಡಿಯೊದಲ್ಲಿ ಚಪ್ಪಲಿ ಆಕಾರದಲ್ಲಿ ಪಕೋಡವನ್ನು ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಜನರು ಕೂಡ ಇದನ್ನು ಖುಷಿಯಿಂದ ಸವಿದಿದ್ದಾರೆ. ವಿಡಿಯೊ ಇಲ್ಲಿದೆ ನೋಡಿ… ‘ಚಪ್ಪಲ್ ಪಕೋಡ’ ತಯಾರಿಸುವುದು ಕೂಡ ಒಂದು ಕಲೆ. ಚಪ್ಪಲಿಗಳ ಆಕಾರದಲ್ಲಿರುವ ಈ ಡಂಪ್ಲಿಂಗ್‌ಗಳು ಮಾಂಸ (ಕೋಳಿ, ಗೋಮಾಂಸ ಅಥವಾ ಕುರಿ ಮಾಂಸ), ಆಲೂಗಡ್ಡೆ, ಈರುಳ್ಳಿ ಮತ್ತು ಸ್ಥಳೀಯ ಮಸಾಲೆಗಳ ಮಿಶ್ರಣದಿಂದ ತುಂಬಿರುತ್ತವೆ. ಮಾಂಸವನ್ನು ಕತ್ತರಿಸಿ ಅರಿಶಿನ, ಜೀರಿಗೆ, ಕೊತ್ತಂಬರಿ ಮತ್ತು ಖಾರದ ಪುಡಿಯನ್ನು ಹಾಕಿ ಮ್ಯಾರಿನೇಟ್ ಮಾಡಲಾಗುತ್ತದೆ. ಈರುಳ್ಳಿ, ಆಲೂಗಡ್ಡೆ ಮತ್ತು ಕೆಲವೊಮ್ಮೆ ಬೇಯಿಸಿದ ಮೊಟ್ಟೆಗಳನ್ನು ಮಿಶ್ರಣಕ್ಕೆ ಸೇರಿಸಲಾಗುತ್ತದೆ. ಹೂರಣವನ್ನು ತೆಳುವಾದ ಹಿಟ್ಟಿನಲ್ಲಿ ಸುತ್ತಿ ಚಪ್ಪಲಿಗಳ ಆಕಾರದಲ್ಲಿ ತಯಾರಿಸಲಾಗುತ್ತದೆ. ನಂತರ ಹೊಂಬಣ್ಣ ಬರುವವರೆಗೂ ಹಾಗೂ ಗರಿಗರಿಯಾಗುವವರೆಗೆ ಅದನ್ನು ಬಿಸಿ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ನೆಟ್ಟಿಗರು ಇದರ ಕುರಿತು ಕಾಮೆಂಟ್‌ ಮಾಡಿದ್ದಾರೆ.ಇನ್ನು ಈ ಪಕೋಡದ ರುಚಿ ನೋಡಿದ ಒಬ್ಬರು “ಇದು ತುಂಬಾ ಚೆನ್ನಾಗಿದೆ! ಎಂದು ಕಾಮೆಂಟ್ ಮಾಡಿದ್ದಾರೆ. ಈ ಸುದ್ದಿಯನ್ನೂ ಓದಿ:Viral Video: ಹಾಸ್ಟೆಲ್‌ ಊಟದಲ್ಲಿ ಗೃಹ ಸಚಿವೆ ಪ್ಲೇಟ್‌ನಲ್ಲಿ ಸಿಕ್ತು ಜಿರಳೆ; ವಾರ್ಡನ್‌ ಅಮಾನತು ಖ್ಯಾತ ಇನ್‌ಸ್ಟಾಗ್ರಾಮರ್‌ ಜೂಲಿಯೆಟ್ ಕಪ್‌ಕೇಕ್ ಟ್ರೇಗಳಿಲ್ಲದೆ ಕ್ಯಾಪ್ಸಿಕಂ (ಬೆಲ್ ಪೆಪರ್) ಅನ್ನು ಬೇಸ್ ಆಗಿ ಬಳಸಿ ಚಾಕೊಲೇಟ್ ಕಪ್‌ಕೇಕ್ ಅನ್ನು ತಯಾರಿಸುವ ಹ್ಯಾಕ್‍ ಅನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಲ್ಲಿ ಆಕೆ ಕಪ್‌ಕೇಕ್ ಲೈನರ್‌ಗಳ ಬದಲಿಗೆ ಕ್ಯಾಪ್ಸಿಕಂ ಅನ್ನು ಬಳಸಿದ್ದಾಳೆ. ಇದು ಆರೋಗ್ಯಕರ ಆಯ್ಕೆಯಷ್ಟೇ ಅಲ್ಲ, ಕಾಗದದ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾಳೆ. ಮೊದಲಿಗೆ ಅವಳು ಕ್ಯಾಪ್ಸಿಕಂ ಮೇಲಿನ ಭಾಗವನ್ನು ಕತ್ತರಿಸಿ ಅದರ ಬೀಜಗಳನ್ನು ತೆಗೆದುಹಾಕಿ, ನಂತರ ಅವುಗಳನ್ನು ಒಂದು ಟ್ರೇನಲ್ಲಿ ಇಟ್ಟು ಅವುಗಳ ಒಳಗೆ ಚಾಕೊಲೇಟ್ ಕಪ್‌ಕೇಕ್ ಬ್ಯಾಟರ್‌ ಅನ್ನು ತುಂಬಿಸಿದ್ದಾಳೆ. ನಂತರ ಅವುಗಳನ್ನು ಓವನ್‍ನಲ್ಲಿಟ್ಟು ಬೇಯಿಸಿದ್ದಾಳೆ. ರುಚಿಕರವಾದ ಚಾಕೋಲೇಟ್‌ ಕೇಕ್‌ ಕಪ್‌ ಕೇಕ್‌ಗಳ ಮೌಲ್ಡ್‌ ಇಲ್ಲದೇ ತಯಾರಿಸಿದ್ದಾಳೆ. Source link

ಕರ್ನಾಟಕ

Mohammed Shami: ಪತ್ನಿ, ಮಗಳ ಜೀವನ ನಿರ್ವಹಣೆಗೆ ಮಾಸಿಕ 4 ಲಕ್ಷ ನೀಡುವಂತೆ ಶಮಿಗೆ ಕೋರ್ಟ್ ಆದೇಶ – Kannada News | Setback for cricketer Mohammad Shami as court orders Rs 4 lakh alimony to ex-wife

  • July 2, 2025
  • 0 Comments

ಕೋಲ್ಕತಾ: ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ದೂರವಿರುವ ಪತ್ನಿ ಹಸೀನ್‌ ಜಹಾನ್‌(Hasin Jahan) ಹಾಗೂ ಮಗಳ ಜೀವನ ನಿರ್ವಹಣೆಗೆ ಪ್ರತಿ ತಿಂಗಳು ₹ 4 ಲಕ್ಷ ರೂ ಜೀವನಾಂಶ ನೀಡುವಂತೆ ಕ್ರಿಕೆಟಿಗ ಮೊಹಮ್ಮದ್‌ ಶಮಿ(Mohammed Shami) ಅವರಿಗೆ ಕೋಲ್ಕತಾ ಕೋರ್ಟ್ ಆದೇಶ ನೀಡಿದೆ. ಎರಡು ವರ್ಷಗಳ ಹಿಂದೆ ಹಸಿನ್ ಜಹಾನ್‌ಗೆ ಮಾಸಿಕ 1 ಲಕ್ಷದ 30ಸಾವಿರ ರೂ ಜೀವನಾಂಶ ನೀಡುವಂತೆ ಶಮಿಗೆ ಕೋಲ್ಕತಾ ಕೋರ್ಟ್ ಆದೇಶ ನೀಡಿತ್ತು. ಮತ್ತು ಹಣವನ್ನು ತಿಂಗಳಿಗೆ 50 ಸಾವಿರ ರೂ. ವೈಯಕ್ತಿಕ ಜೀವನಾಂಶವಾಗಿ ವಿಂಗಡಿಸಿ ಉಳಿದ ಮೊತ್ತ 80 ಸಾವಿರವನ್ನು ಮಕ್ಕಳ ಭತ್ಯೆಯಾಗಿ ನೀಡಬೇಕು ಎಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಜಹಾನ್‌ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಮುಕರ್ಜಿ, ಅರ್ಜಿದಾರರಿಬ್ಬರ ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸಿಕೊಳ್ಳುವ ಸಲುವಾಗಿ, ಪ್ರಕರಣ ಇತ್ಯರ್ಥವಾಗುವವರೆಗೆ ಹಸೀನ್‌ ಜಹಾನ್‌ ಅವರಿಗೆ ಮಾಸಿಕ ₹ 1.50 ಲಕ್ಷ ಹಾಗೂ ಪುತ್ರಿಗೆ ₹ 2.50 ಲಕ್ಷ ನೀಡುವುದು ನ್ಯಾಯಯುತ ಮತ್ತು ಸಮಂಜಸವಾಗಿದೆ’ ಎಂದು ಹೇಳಿದ್ದಾರೆ. ಶಮಿ ಅವರನ್ನು 2014ರ ಏಪ್ರಿಲ್‌ನಲ್ಲಿ ವಿವಾಹವಾಗಿದ್ದ ಜಹಾನ್‌, 2018ರಲ್ಲಿ ಪತ್ನಿ ಹಸೀನಾ ಜಹಾನ್‌ ಅವರು ಶಮಿ ಹಾಗೂ ಅವರ ಸಹೋದರನ ವಿರುದ್ಧ ಕೊಲೆ ಯತ್ನ, ಕಿರುಕುಳ ಹಾಗೂ ಅತ್ಯಾಚಾರದ ಆರೋಪ ಹೊರಿಸಿ ಕೋಲ್ಕತ್ತದ ಜಾಧವಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜತೆಗೆ ಮ್ಯಾಚ್‌ ಫಿಕ್ಸಿಂಗ್‌ ಆರೋಪಗಳನ್ನೂ ಮಾಡಿದ್ದರು. ಇದನ್ನೂ ಓದಿ IND vs ENG 2nd Test: ಹೇಗಿರಬಹುದು ದ್ವಿತೀಯ ಟೆಸ್ಟ್‌ಗೆ ಭಾರತ ಆಡುವ ಬಳಗ? ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ), ಭ್ರಷ್ಟಾಚಾರ ತಡೆ ಘಟಕಕ್ಕೆ (ಎಸಿಯು) ಸೂಚಿಸಿತ್ತು. ಜೊತೆಗೆ ಕೇಂದ್ರೀಯ ಗುತ್ತಿಗೆ ಪದ್ಧತಿಯಿಂದ ಶಮಿ ಅವರ ಹೆಸರನ್ನು ತಾತ್ಕಾಲಿಕವಾಗಿ ತಡೆ ಹಿಡಿದಿತ್ತು. ಆ ಬಳಿಕ ಶಮಿ ಫಿಕ್ಸಿಂಗ್‌ ಮಾಡಿಲ್ಲ ಇದೊಂಉ ಸುಳ್ಳು ಆರೋಪ ಎಂದು ವರದಿ ಬಂದ ಬಳಿಕ ಅವರನ್ನು ಕೇಂದ್ರೀಯ ಗುತ್ತಿಗೆ ಸೇರಿಸಲಾಗಿತ್ತು. Source link

ಕರ್ನಾಟಕ

GST Relief: ಜನಸಾಮಾನ್ಯರಿಗೆ ಗುಡ್‌ನ್ಯೂಸ್‌- ಶೀಘ್ರದಲ್ಲೇ ಈ ಎಲ್ಲಾ ವಸ್ತುಗಳ ದರ ಅಗ್ಗ! – Kannada News | GST Relief For Middle Class Soon: Cheaper Toothpaste, Utensils, Clothes, Shoes

  • July 2, 2025
  • 0 Comments

ನವದೆಹಲಿ: ಈ ವರ್ಷದ ಆರಂಭದಲ್ಲಿ ಹಲವಾರು ಆದಾಯ ತೆರಿಗೆ ರಿಯಾಯಿತಿಗಳನ್ನು ನೀಡಿದ ನಂತರ, ಕೇಂದ್ರ ಸರ್ಕಾರವು ಈಗ ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಸರಕು ಮತ್ತು ಸೇವಾ ತೆರಿಗೆಯನ್ನು (GST Relief) ಕಡಿತಗೊಳಿಸಲು ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ. ಶೇಕಡಾ 12 ರಷ್ಟು ಜಿಎಸ್‌ಟಿ ಸ್ಲ್ಯಾಬ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ಅಥವಾ ಪ್ರಸ್ತುತ ಶೇಕಡಾ 12 ರಷ್ಟು ತೆರಿಗೆ ವಿಧಿಸಿದ್ದ ಅನೇಕ ವಸ್ತುಗಳ ಬೆಲೆಯನ್ನು ಶೇಕಡಾ 5 ಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆರ್ಥಿಕವಾಗಿ ದುರ್ಬಲ ವರ್ಗಗಳು ವ್ಯಾಪಕವಾಗಿ ಬಳಸುವ ಟೂತ್‌ಪೇಸ್ಟ್ ಮತ್ತು ಹಲ್ಲಿನ ಪುಡಿ, ಛತ್ರಿಗಳು, ಹೊಲಿಗೆ ಯಂತ್ರಗಳು, ಪ್ರೆಶರ್ ಕುಕ್ಕರ್‌ಗಳು ಮತ್ತು ಅಡುಗೆ ಪಾತ್ರೆಗಳು, ವಿದ್ಯುತ್ ಕಬ್ಬಿಣಗಳು, ಗೀಸರ್‌ಗಳು, ಸಣ್ಣ ಸಾಮರ್ಥ್ಯದ ತೊಳೆಯುವ ಯಂತ್ರಗಳು, ಸೈಕಲ್‌ಗಳು, 1,000 ರೂ.ಗಿಂತ ಹೆಚ್ಚಿನ ಬೆಲೆಯ ಸಿದ್ಧ ಉಡುಪುಗಳು, 500 ರಿಂದ 1,000 ರೂ.ಗಳವರೆಗಿನ ಪಾದರಕ್ಷೆಗಳು, ಲೇಖನ ಸಾಮಗ್ರಿಗಳು, ಲಸಿಕೆಗಳು, ಸೆರಾಮಿಕ್ ಟೈಲ್ಸ್ ಮತ್ತು ಕೃಷಿ ಉಪಕರಣಗಳು ಮುಂತಾದ ವಸ್ತುಗಳ ಬೆಲೆ ಕಡಿಮೆಯಾಗಬಹುದು ಎಂದು ಊಹಿಸಲಾಗಿದೆ. ಪ್ರಸ್ತಾವಿತ ಬದಲಾವಣೆಗಳನ್ನು ಜಾರಿಗೆ ತಂದರೆ, ಇವುಗಳಲ್ಲಿ ಹಲವು ವಸ್ತುಗಳು ಹೆಚ್ಚು ಕೈಗೆಟುಕುವ ಬೆಲೆಗೆ ಲಭ್ಯವಾಗುತ್ತವೆ. ಸರ್ಕಾರವು ಸರಳೀಕೃತ ಮತ್ತು ಅನುಸರಿಸಲು ಸುಲಭವಾದ ಜಿಎಸ್‌ಟಿಯನ್ನು ಸಹ ಪರಿಶೀಲಿಸುತ್ತಿದೆ. ವಸ್ತುಗಳು ಅಗ್ಗವಾಗುವುದರಿಂದ ಬಳಕೆ ಹೆಚ್ಚಾಗುತ್ತದೆ ಮತ್ತು ಬಳಕೆ ಹೆಚ್ಚಾದಾಗ ಜಿಎಸ್‌ಟಿ ಸಂಗ್ರಹವೂ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಕಡಿಮೆ ಬೆಲೆಗಳು ಮಾರಾಟವನ್ನು ಹೆಚ್ಚಿಸುತ್ತವೆ, ಇದು ಅಂತಿಮವಾಗಿ ತೆರಿಗೆ ಆಧಾರವನ್ನು ಹೆಚ್ಚಿಸುತ್ತದೆ ಮತ್ತು ದೀರ್ಘಾವಧಿಯಲ್ಲಿ ಜಿಎಸ್‌ಟಿ ಸಂಗ್ರಹವನ್ನು ಹೆಚ್ಚಿಸುತ್ತದೆ ಎಂದು ಕೇಂದ್ರ ಯೋಜಿಸಿದೆ. ಇತ್ತೀಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂದರ್ಶನವೊಂದರಲ್ಲಿ ಜಿಎಸ್‌ಟಿ ದರಗಳಲ್ಲಿ ಸಂಭವನೀಯ ಬದಲಾವಣೆಗಳನ್ನು ಸೂಚಿಸಿದ್ದಾರೆ ಮತ್ತು ಸರ್ಕಾರವು ಹೆಚ್ಚು ತರ್ಕಬದ್ಧ ರಚನೆಯತ್ತ ಕೆಲಸ ಮಾಡುತ್ತಿದೆ ಮತ್ತು ಮಧ್ಯಮ ವರ್ಗಕ್ಕೆ ಅಗತ್ಯ ವಸ್ತುಗಳ ಮೇಲೆ ಪರಿಹಾರ ನೀಡುವ ಬಗ್ಗೆ ಯೋಚಿಸುತ್ತಿದೆ ಎಂದು ಹೇಳಿದ್ದರು. ಈ ಸುದ್ದಿಯನ್ನೂ ಓದಿ: CM Siddaramaiah: ನಿರ್ಮಲಾ ಸೀತಾರಾಮನ್‌ ಭೇಟಿಯಾದ ಸಿಎಂ ಸಿದ್ದರಾಮಯ್ಯ; ರಾಜ್ಯಗಳ ಬೆಳವಣಿಗೆಗೆ ಪೂರಕವಾಗಿ ತೆರಿಗೆ ಹಂಚಿಕೆ ಮಾಡುವಂತೆ ಮನವಿ ಕೇಂದ್ರದ ಒತ್ತಾಯದ ಹೊರತಾಗಿಯೂ, ರಾಜ್ಯಗಳು ಈ ಕುರಿತು ಒಮ್ಮತ ನೀಡಿಲ್ಲ. ಜಿಎಸ್‌ಟಿ ಅಡಿಯಲ್ಲಿ, ದರ ಬದಲಾವಣೆಗಳಿಗೆ ಜಿಎಸ್‌ಟಿ ಮಂಡಳಿಯ ಅನುಮೋದನೆ ಅಗತ್ಯವಾಗಿದ್ದು, ಅಲ್ಲಿ ಪ್ರತಿ ರಾಜ್ಯವು ಮತದಾನದ ಹಕ್ಕನ್ನು ಹೊಂದಿದೆ. ಪ್ರಸ್ತುತ, ಪಂಜಾಬ್, ಕೇರಳ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದು ವರದಿಯಾಗಿದೆ. ಈ ತಿಂಗಳ ಕೊನೆಯಲ್ಲಿ ನಡೆಯಲಿರುವ 56ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗುವ ನಿರೀಕ್ಷೆಯಿದೆ. ನಿಯಮದಂತೆ, ಮಂಡಳಿಯನ್ನು ಕರೆಯಲು ಕನಿಷ್ಠ 15 ದಿನಗಳ ನೋಟಿಸ್ ನೀಡಬೇಕು. Source link

ಕರ್ನಾಟಕ

Ola Price Hike: ಗ್ರಾಹಕರಿಗೆ ಮತ್ತೊಂದು ಶಾಕ್‌; ಓಲಾ, ಉಬರ್ ಮೂಲ ದರಕ್ಕಿಂತ 2 ಪಟ್ಟು ಹೆಚ್ಚಿಸಲು ಕೇಂದ್ರ ಅನುಮತಿ – Kannada News | Ola, Uber get government okay for surge pricing, can charge double the base fare

  • July 2, 2025
  • 0 Comments

ನವದೆಹಲಿ: ರಾಜ್ಯದಲ್ಲಿ ಬೈಕ್‌ ಟಾಕ್ಸಿ ನಿಷೇಧಗೊಳಿಸಿ ಸರ್ಕಾರ ಆದೇಶ ಹೊರಡಿಸಿದ ಬಳಿಕ ಇದೀಗ ಜನರಿಗೆ ಮತ್ತೊಂದು ಶಾಕ್‌ ಎದುರಾಗಿದೆ. (Ola Price Hike) ಓಲಾ ಮತ್ತು ಉಬರ್ ನಂತಹ ಕ್ಯಾಬ್ ಅಗ್ರಿಗೇಟರ್ ಪ್ಲಾಟ್ ಫಾರ್ಮ್ ಗಳಿಗೆ ಗರಿಷ್ಠ ಸಮಯದಲ್ಲಿ ಬೆಲೆಯನ್ನು ಮೂಲ ಶುಲ್ಕಕ್ಕಿಂತ ಎರಡು ಪಟ್ಟು ಹೆಚ್ಚಿಸಲು ಕೇಂದ್ರವು ಅನುಮತಿ ನೀಡಿದೆ. ಜುಲೈ 1 ರಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿದ ಮೋಟಾರು ವಾಹನಗಳ ಸಂಗ್ರಾಹಕ ಮಾರ್ಗಸೂಚಿಗಳು (MVAG) 2025ರ ಪ್ರಕಾರ, ಕ್ಯಾಬ್ ಸಂಗ್ರಾಹಕರು ಈಗ ಗರಿಷ್ಠ ಸಂಚಾರ ಸಮಯದಲ್ಲಿ ಮೂಲ ದರಕ್ಕಿಂತ ಎರಡು ಪಟ್ಟು ಹೆಚ್ಚು ಶುಲ್ಕ ವಿಧಿಸಲು ಅನುಮತಿಸಲಾಗುವುದು. ಇದನ್ನು ಈ ಹಿಂದೆ 1.5 ಪಟ್ಟು ಮಿತಿಗೊಳಿಸಲಾಗಿತ್ತು ಮತ್ತು ಈಗ ಅದನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಮುಂದಿನ ಮೂರು ತಿಂಗಳೊಳಗೆ ನವೀಕರಿಸಿದ ಮಾರ್ಗಸೂಚಿಗಳನ್ನು ಜಾರಿಗೆ ತರಲು ರಾಜ್ಯಗಳಿಗೆ ಸೂಚಿಸಲಾಗಿದೆ. ಹೊಸ ನಿಯಮಗಳ ಪ್ರಕಾರ, ಇದೇ ರೀತಿಯ ರದ್ದತಿಗಾಗಿ ಪ್ರಯಾಣಿಕರಿಗೆ ಇದೇ ರೀತಿಯ ದಂಡವನ್ನು ವಿಧಿಸಲಾಗುತ್ತದೆ. ಪರಿಷ್ಕೃತ ಮಾನದಂಡಗಳಲ್ಲಿ ನಿರ್ದಿಷ್ಟಪಡಿಸಿದ ನಿಬಂಧನೆಗಳಿಗೆ ಹೆಚ್ಚುವರಿಯಾಗಿ ನಿಬಂಧನೆಗಳನ್ನು ಸೇರಿಸಬಹುದು. ಮಾರ್ಗಸೂಚಿಗಳ ಉಪ-ಕಲಂ 17.1 ರ ಅಡಿಯಲ್ಲಿ ಆಯಾ ವರ್ಗ ಅಥವಾ ವರ್ಗದ ಮೋಟಾರು ವಾಹನಗಳಿಗೆ ರಾಜ್ಯ ಸರ್ಕಾರವು ವಿಧಿಸುವ ಶುಲ್ಕವು ಅಗ್ರಿಗೇಟರ್ನಿಂದ ಸೇವೆಗಳನ್ನು ಪಡೆಯುವ ಪ್ರಯಾಣಿಕರಿಗೆ ವಿಧಿಸಬಹುದಾದ ಮೂಲ ಶುಲ್ಕವಾಗಿರುತ್ತದೆ ಎಂದು ಮಾರ್ಗಸೂಚಿಗಳು ತಿಳಿಸಿದೆ. ಈ ಸುದ್ದಿಯನ್ನೂ ಓದಿ: Bike Taxi Service: ಬೈಕ್‌ ಟ್ಯಾಕ್ಸಿ ಸೇವೆಗೆ ಕೇಂದ್ರ ಅಸ್ತು, ರಾಜ್ಯದಲ್ಲಿ ಈಗೇನಾಗುತ್ತೆ? ಬೈಕ್‌ ಟ್ಯಾಕ್ಸಿ ಸೇವೆಗೆ ಕೇಂದ್ರ ಅಸ್ತು ಕೇಂದ್ರ ಸರ್ಕಾರವು ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿದ್ದು, ವಾಣಿಜ್ಯೇತರ ಖಾಸಗಿ ಬೈಕ್‌ಗಳನ್ನು ಬಳಸಿಕೊಂಡು ಅಗ್ರಿಗೇಟರ್‌ಗಳು ಬೈಕ್ ಟ್ಯಾಕ್ಸಿ ಸೇವೆ ನೀಡಬಹುದು. ಆದರೆ ಇದಕ್ಕೆ ಆಯಾ ರಾಜ್ಯ ಸರ್ಕಾರಗಳ ಅನುಮತಿ ಕಡ್ಡಾಯ ಎಂದು ಹೇಳಿದೆ. ಬೈಕ್ ಟ್ಯಾಕ್ಸಿ ಸೇವೆಗೆ ಕರ್ನಾಟಕ ರಾಜ್ಯ ಸರ್ಕಾರ ನಿಷೇಧ ಹೇರಿದ್ದು, ಅದರ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಕೇಂದ್ರ ಸಾರಿಗೆ ಸಚಿವಾಲಯ ಮೋಟಾರು ವಾಹನ ಕಾಯ್ದೆ 1988ರ ಅಡಿಯ ಮೋಟಾರ್ ವಾಹನಗಳ ಅಗ್ರಿಗೇಟರ್ ಮಾರ್ಗಸೂಚಿ 2025 ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರಗಳು ಖಾಸಗಿ ಬೈಕುಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅಗ್ರಿಗೇಟರುಗಳಿಗೆ ಅನುಮತಿ ಕೊಡಬಹುದು ಎಂದು ಹೇಳಿದೆ. Source link

ಕರ್ನಾಟಕ

Nadoja N Manu Baligar Column: ಮರೆಯಬಾರದ ಮಹಾನುಭವ: ಫ.ಗು.ಹಳಹಟ್ಟಿ – Kannada News | An unforgettable experience: F.G.Halahatti

  • July 2, 2025
  • 0 Comments

ತನ್ನಿಮಿತ್ತ ನಾಡೋಜ ನಾ.ಮನು ಬಳಿಗಾರ್ ವಚನ ಪಿತಾಮಹ, ಕರ್ನಾಟಕದ ಮ್ಯಾಕ್ಸ್‌ಮುಲ್ಲರ್, ಆಧುನಿಕ ಶರಣ, ವಚನ ಗುಮ್ಮಟ, ರಾವ್ ಸಾಹೇಬ್ ಇತ್ಯಾದಿ ಪದವಿ ಪುರಸ್ಕಾರಗಳಿಗೆ ಭಾಜನರಾದ ಏಕಮೇವ ವ್ಯಕ್ತಿ ಪೂಜ್ಯ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು. ಇಂದಿಗೆ 145 ವರ್ಷಗಳ ಹಿಂದೆ (1880ರ ಜುಲೈ 9ರಂದು) ಧಾರವಾಡ‌ದಲ್ಲಿ ಹುಟ್ಟಿದ ಶ್ರೀಯುತರು ಮಾಡಿದ ಕಾರ್ಯಗಳು ಅದ್ಭುತ ಹಾಗೂ ಅಷ್ಟೇ ಉತ್ಕೃಷ್ಟವಾದಂಥವು. 12ನೇ ಶತಮಾನದಲ್ಲಿ ರಚನೆಯಾದ ಸಾವಿರಾರು ವಚನಗಳನ್ನು, ನೂರಾರು ವಚನಕಾರರನ್ನು ಬೆಳಕಿಗೆ ತಂದ ಶ್ರೇಯಸ್ಸು ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಈವರೆಗೆ ದೊರೆತ ಅಂದಾಜು 22000 ವಚನಗಳಲ್ಲಿ ಸರಿಸುಮಾರು 16000 ವಚನಗಳನ್ನು ಹಳಕಟ್ಟಿ ಯವರೊಬ್ಬರೇ ಹೆಕ್ಕಿ ತೆಗೆದು, ಪರಿಷ್ಕರಿಸಿ, ಸಂಪಾದಿಸಿ, ಮುದ್ರಿಸಿ, ಪ್ರಕಟಿಸಿ ಜನರ ಕೈಗೆ ಸಿಗುವಂತೆ ಮಾಡಿದರು. ಈ ಪುಣ್ಯಾತ್ಮರು ಇಂಥ ಕಾರ್ಯವನ್ನು ಕೈಗೊಳ್ಳುವ ಮೊದಲು ಅಂದಾಜು 50 ವಚನಕಾರರು ಮಾತ್ರ ಲೋಕದ ಕಣ್ಣಿಗೆ ಬಿದ್ದಿದ್ದರು. ಆದರೆ ಹಳಕಟ್ಟಿ ಅವರ ಅಹರ್ನಿಶಿ ದುಡಿತ, ಶ್ರಮ, ಶ್ರದ್ಧಾ ಭಕ್ತಿ ಇವೆಲ್ಲವುಗಳಿಂದಾಗಿ 250 ವಚನಕಾರರು ಈ ಜಗಕ್ಕೆ ಹೊಸದಾಗಿ ತಲುಪುವಂತಾ ಯಿತು. ಹಳಕಟ್ಟಿಯವರು ಮಧ್ಯಮ ವರ್ಗದಿಂದ ಬಂದವರು. ಇವರ ತಂದೆ ಗುರುಬಸಪ್ಪನವರು ಶಾಲಾ ಶಿಕ್ಷಕರಾಗಿದ್ದರು. ಸ್ವತಃ ಲೇಖಕರಾಗಿದ್ದ ಇವರು ಇಂಗ್ಲಿಷ್‌ನ ಕೆಲವೊಂದು ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದವರೂ, ಪ್ರಗತಿಪರ ವಿಚಾರವಂತರೂ ಆಗಿದ್ದರು. ತಂದೆ ಹಾಗೂ ಹೆಣ್ಣು ಕೊಟ್ಟ ಮಾವ ತಮ್ಮಣ್ಣಪ್ಪ ಇಬ್ಬರೂ ವಿದ್ವಾಂಸರಾಗಿದ್ದರಿಂದ ಅವರ ಪ್ರಭಾವವು -ಕೀರಪ್ಪನವರ ಮೇಲೆ ತುಂಬಾ ಆಯಿತು. ಇದನ್ನೂ ಓದಿ: Roopa Gururaj Column: ನವಗುಂಜರದ ಭಕ್ತಿ ಸಾರ ಪರಿಚಯದ ಒಬ್ಬರ ಮನೆಗೆ ಊಟಕ್ಕೆ ಹೋದಾಗ ಅಕಸ್ಮಾತ್ ಅಲ್ಲಿದ್ದ ತಾಳೆಗರಿಗಳ ಮೇಲೆ ಇವರ ಗಮನ ಬಿದ್ದು ಅವು 12ನೇ ಶತಮಾನದ ಸಾಹಿತ್ಯದ ಅನರ್ಘ್ಯ ರತ್ನಗಳಾದ ವಚನಗಳ ಕಟ್ಟುಗಳು ಎಂಬುದು ಫಕೀರಪ್ಪನವರ ತೀಕ್ಷ್ಣಮತಿಗೆ ಹೊಳೆಯಿತು. ಊಟವನ್ನು ಮರೆತು ಆ ವಚನಗಳ ಕಟ್ಟುಗಳು ತಮಗೆ ಬೇಕೆಂದು ಮನೆಯ ಮಾಲೀಕರನ್ನು ಕೇಳಿ ತೆಗೆದುಕೊಂಡು ಬಂದ ಫಕೀರಪ್ಪ ಅವುಗಳ ಅಧ್ಯಯನದಲ್ಲಿ ತೊಡಗಿಕೊಂಡರರು. ಅವುಗಳನ್ನು ಸಂಸ್ಕರಿಸಿ ಪರಿಷ್ಕರಿಸಿ ಅವುಗಳ ಮಹಿಮೆಯನ್ನು ಕಂಡುಕೊಂಡ ಇವರು, ಈ ಅಪೂರ್ವ ಸಾಹಿತ್ಯವು ಯಾವುದೇ ಕಾರಣಕ್ಕೂ ಕಳೆದುಹೋಗಲು ಬಿಡಬಾರದು ಎಂದು ನಿರ್ಧರಿಸಿ ಬಿಟ್ಟರು. ಹೀಗೆ ಶುರುವಾದ ಫಕೀರಪ್ಪನವರ ವಚನಗಳ ಸಂಶೋಧನೆ ಅವರ ವಕೀಲಿ ವೃತ್ತಿಯನ್ನು ಬದಿಗೆ ಸರಿಸುವಂತೆ ಮಾಡಿತು. ಮನೆಮನೆಗಳಿಗೆ ಅಲೆದು ತಾಳೆಗರಿಗಳನ್ನು, ಓಲೆ ಸಂಪುಟಗಳನ್ನು ಸಂಗ್ರಹಿಸುವಾಗ ಅನೇಕ ಕಡೆ ಸ್ವಂತ ಹಣವನ್ನೇ ಕೊಟ್ಟು ತೆಗೆದುಕೊಂಡು ಬರುವಂತಾಗಿತ್ತು. ಮುಂದೆ ಅವುಗಳನ್ನು ಸಂಪಾದನೆ ಮಾಡಿ ಮುದ್ರಣ ಮಾಡಲು ಬಿಜಾಪುರದಲ್ಲಿ ಅಥವಾ ಸಮೀಪದ ಜಿಲ್ಲಾ ಕೇಂದ್ರಗಳಲ್ಲಿ ಅಚ್ಚು ಕೂಟಗಳು ಇರಲಿಲ್ಲವಾದ್ದರಿಂದ ಅವುಗಳನ್ನು ಮಂಗಳೂರಿನ ಕ್ರಿಶ್ಚಿಯನ್ ಮಿಶನರಿ ಮುದ್ರಣಾಲ ಯಕ್ಕೆ ಕಳಿಸಿಕೊಟ್ಟರು. ‘ತಾನೊಂದು ಬಗೆದರೆ, ದೈವ ಒಂದು ಬಗೆಯಿತು’ ಎಂಬಂತೆ ಹೀಗೆ ಮಂಗಳೂರಿಗೆ ಕಳಿಸಿದ ವಚನದ ಕರಡು ಪ್ರತಿಗಳು ಅಚ್ಚಾಗದೆ ಹಾಗೆಯೇ ತಿರುಗಿ ಕಳಿಸಲ್ಪಟ್ಟವು. ಕಳಿಸಿದ ಕಾರಣ ಏನೇ ಆಗಿರಲಿ ಅವುಗಳನ್ನು ತಾವೇ ಮುದ್ರಣ ಮಾಡಬೇಕೆಂದು ಛಲ ತೊಟ್ಟು ಫಕೀರಪ್ಪನವರು ಸ್ವಂತ ಮುದ್ರಣಾ ಲಯವನ್ನು ಹಾಕಬೇಕೆಂದು ನಿರ್ಧರಿಸಿಬಿಟ್ಟರು. ಇದಕ್ಕಾಗಿ ಕೈಯಲ್ಲಿ ಹಣವಿಲ್ಲದ್ದರಿಂದ ತಾವು ವಾಸಿಸುತ್ತಿದ್ದ ಮನೆಯನ್ನೇ ಮಾರಾಟ ಮಾಡಿ ಬಿಟ್ಟರು. ಅವರಿಗೆ ಬಾಡಿಗೆ ಮನೆಯೇ ಮಹಾಮನೆ ಆಯಿತು. ಆ ಮುದ್ರಣಾಲಯಕ್ಕೆ ‘ಹಿತ ಚಿಂತಕ’ ಎಂದು ಹೆಸರಿಟ್ಟು ತಮ್ಮ ಮಹತ್ಕಾರ್ಯವನ್ನು ಹಳಕಟ್ಟಿಯವರು ಪೂರೈಸಿಕೊಂಡರು. ವಚನಸಾಹಿತ್ಯದ ಕೆಲಸ ಕಾರ್ಯಗಳ ಜತೆಜತೆಗೆ ಹರಿಹರನ ರಗಳೆಗಳ ಸಂಪಾದನೆ, ‘ನವಕರ್ನಾಟಕ’ ಎಂಬ ವಾರಪತ್ರಿಕೆ ಮತ್ತು ‘ಶಿವಾನುಭವ’ ಎಂಬ ಮಾಸಪತ್ರಿಕೆಯನ್ನು ಸ್ವತಃ ಸಂಪಾದಿಸಿ ನಿಯತ ವಾಗಿ ಹೊರತರತೊಡಗಿದರು. ವಚನ ಸಾಹಿತ್ಯವು ವಿಶ್ವವ್ಯಾಪಿ ಆಗಬೇಕೆಂದು ಹಳಕಟ್ಟಿಯವರು ಸ್ವತಃ ಹಲವಾರು ವಚನಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿ ‘ಇಂಡಿಯನ್ ಆಂಟಿಕ್ವರಿ’ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದರು. ಸಮಾಜದ ಮೌಢ್ಯವನ್ನು ಅಳಿಸಿಹಾಕಲು, ಅಂತರಂಗವನ್ನು ಅರಳಿಸಲು, ಒಟ್ಟಿನಲ್ಲಿ ಮನುಕುಲ ವನ್ನು ಉದ್ಧರಿಸಲು ವಚನ ಸಾಹಿತ್ಯವು ಪಂಡಿತ-ಪಾಮರ ಎಲ್ಲರಿಗೂ ತಲುಪಬೇಕೆಂದು ದೃಢ ನಿಶ್ಚಯ ಮಾಡಿದ ಹಳಕಟ್ಟಿಯವರು ತಮ್ಮ ಪುಸ್ತಕಗಳು ಹಾಗೂ ಪತ್ರಿಕೆಗಳು ಮನೆ ಮನೆಗಳಲ್ಲಿ ದೊರಕಬೇಕೆಂದು ಅಲ್ಲಿಗೆ ತಲುಪಿಸುವ ಕೆಲಸವನ್ನು ಕೈಗೊಂಡರು. ಇದರಿಂದಾಗಿ ವಿಪರೀತ ಖರ್ಚು ವೆಚ್ಚಗಳು ಬರತೊಡಗಿ ಆರ್ಥಿಕ ಸ್ಥಿತಿ ದಿನೇ ದಿನೆ ಕುಸಿಯತೊಡಗಿತು, ಆರೋಗ್ಯವೂ ಹದಗೆಡ ತೊಡಗಿತು. ಇಂಥ ವಿಷಮ ಪರಿಸ್ಥಿತಿಯಲ್ಲಿಯೂ ಇವರು ಎದೆಗುಂದದೆ ಮುನ್ನಡೆಯತೊಡಗಿದರು. ಹಾನಗಲ್ಲ ಕುಮಾರಸ್ವಾಮಿಗಳು, ಕೆಲವೊಂದು ವಚನ ಸಾಹಿತ್ಯ ಅಭಿಮಾನಿಗಳು ಹಳಕಟ್ಟಿಯವರ ಸಹಾಯಕ್ಕೆ ಬಂದರು. ಇದರಿಂದಾಗಿ ಶ್ರೀಯುತರು ವಚನ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಯನ್ನು ನೀಡುವಂತಾ ಯಿತು. ವಚನ ಸಾಹಿತ್ಯದ ಬೆಳಕು ಎಡೆ ಹರಡುವಂತಾಯಿತು. ಇಡೀ ಸಮಾಜ ಹಳಕಟ್ಟಿಯವರನ್ನು ಬಹಳ ಅಭಿಮಾನದಿಂದ ‘ವಚನ ಪಿತಾಮಹ’ ಎಂದು ಸಂಬೋಧಿಸತೊಡಗಿತು. ಉತ್ತಂಗಿ ಚನ್ನಪ್ಪ, ರಂಗನಾಥ ದಿವಾಕರ, ಅನಕೃ, ಎಂ.ಆರ್.ಶ್ರೀನಿವಾಸಮೂರ್ತಿ ಮುಂತಾದವರು ಹಳಕಟ್ಟಿಯವರನ್ನು ಅವರ ಕಾರ್ಯಗಳನ್ನು ತುಂಬು ಹೃದಯದಿಂದ ಮೆಚ್ಚಿ ಹೊಗಳುವಂತೆ ಆಯಿತು. ಕನ್ನಡದ ಕಣ್ವ ಬಿ.ಎಂ. ಶ್ರೀಕಂಠಯ್ಯ ನವರು ಒಮ್ಮೆ ರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಬಿಜಾಪುರಕ್ಕೆ ಬಂದಿದ್ದರು. ಅಲ್ಲಿನ ಜನ ಅವರಿಗೆ ವಿಶ್ವವಿಖ್ಯಾತ ಗೋಳಗುಮ್ಮಟವನ್ನು ತೋರಿಸು ತ್ತೇವೆ ಅಂದಾಗ ಅವರು, “ಅದೇನೋ ಸರಿಯೇ, ಆದರೆ ಅದರಷ್ಟೇ ಮಹತ್ವದ್ದಾದ ‘ವಚನ ಗುಮ್ಮಟ’ ಒಂದು ನಿಮ್ಮ ಊರಿನಲ್ಲಿದೆ. ಅದನ್ನು ನಾನು ಮೊದಲು ನೋಡಬೇಕು” ಎಂದು ಹೇಳಿ ಹಳಕಟ್ಟಿ ಅವರನ್ನು ನೋಡಲು ಅವರ ಮನೆಗೆ ಬಂದರು. ಹಳಕಟ್ಟಿಯವರ ಕಾರ್ಯಗಳು ವಚನ ಸಾಹಿತ್ಯಕ್ಕೆ ಮಾತ್ರವಲ್ಲದೆ ಶಿಕ್ಷಣ, ಕೃಷಿ ಹಾಗೂ ಸಹಕಾರ ಕ್ಷೇತ್ರಗಳಿಗೂ ವಿಸ್ತರಿಸಿದ್ದವು. ಅವರು ಹಲವಾರು ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಅವುಗಳಲ್ಲಿ ಮುಖ್ಯವಾಗಿ ಬಿ.ಎಲ್.ಡಿ.ಇ. ಸಂಸ್ಥೆಯನ್ನು ಹೆಸರಿಸಬಹುದು. ಇಂದು ಈ ಶಿಕ್ಷಣ ಸಂಸ್ಥೆಯು ಸುಮಾರು 90 ವಿವಿಧ ಬಗೆಯ ಶಾಲಾ ಕಾಲೇಜುಗಳನ್ನು ನಡೆಸುತ್ತಿದೆ. ಪ್ರಸ್ತುತ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳ ಇಲಾಖೆಯ ಸಚಿವರಾದ ಎಂ.ಬಿ.ಪಾಟೀಲ್ ಅವರು ಇದರ ಕಾರ್ಯಾಧ್ಯಕ್ಷರಾಗಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳು, ಸಾವಿರಾರು ಅಧ್ಯಾಪಕರು ಅಲ್ಲಿ ಹಳಕಟ್ಟಿಯವರ ಧ್ಯೇಯೋದ್ದೇಶಗಳನ್ನು ಪೂರೈಸುತ್ತಿದ್ದಾರೆ. ಕೃಷಿಕರು, ಕೃಷಿ ಕಾರ್ಮಿಕರು, ನೇಕಾರರು ಇವರೆಲ್ಲರಿಗಾಗಿ ಹಲವಾರು ಸಹಕಾರಿ ಸಂಘಗಳನ್ನು ಹಳಕಟ್ಟಿಯವರು ಸ್ಥಾಪಿಸಿದರು. ಕುಶಲಕರ್ಮಿಗಳಿಗಾಗಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಿದರು. ಬರಗಾಲ ನಿವಾರಣೆಗಾಗಿ ಅಠಿಜಿ ಊZಞಜ್ಞಿಛಿ ಐoಠಿಜಿಠ್ಠಿಠಿಛಿ ಅನ್ನು ಪ್ರಾರಂಭಿಸಿದರು. ಬಿಜಾಪುರ ನಗರದ ಕುಡಿಯುವ ನೀರಿನ ಕೊರತೆಯನ್ನು ಹೋಗಲಾಡಿಸಲು ಭೂತನಾಳ ಕೆರೆಯನ್ನು ಅಭಿವೃದ್ಧಿಪಡಿಸಿ ಅಲ್ಲಿಂದ ನಗರಕ್ಕೆ ನೀರು ಬರುವಂತೆ ಮಾಡಿದರು. ಇದಕ್ಕಾಗಿ ಸರ್ ಎಂ.ವಿಶ್ವೇಶ್ವರಯ್ಯನವರ ಸಹಾಯ, ಮಾರ್ಗ ದರ್ಶನಗಳೂ ಇವರಿಗೆ ದೊರೆತಿತ್ತು. ಸ್ವಾತಂತ್ರ್ಯ ಆಂದೋಲನ ಹಾಗೂ ಕರ್ನಾಟಕ ಏಕೀಕರಣ ಚಳವಳಿ ಇವುಗಳಲ್ಲಿಯೂ ಹಳಕಟ್ಟಿ ಯವರ ಪಾತ್ರ ಮಹತ್ವದ್ದಾಗಿದೆ. ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷತೆ ಇವರದಾಗಿತ್ತು. ಹಾಗೆಯೇ, ಸಾಹಿತ್ಯ ಕ್ಷೇತ್ರಕ್ಕೆ ಹಳಕಟ್ಟಿಯವರು ನೀಡಿದ ಗಣನೀಯ ಕೊಡುಗೆಯನ್ನು ಗಮನಿಸಿ ಇವರಿಗೆ 1926ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯು ಒಲಿದುಬಂದಿತು. ಮುಂಬೈಯಲ್ಲಿ ಉನ್ನತ ವ್ಯಾಸಂಗ ಮಾಡುವಾಗ ಆಲೂರು ವೆಂಕಟರಾಯರ ಗೆಳೆತನವಾಗಿ ಕನ್ನಡ ಹೋರಾಟಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕೆಂಬ ವಾಂಛೆ ಹಳಕಟ್ಟಿಯವರಲ್ಲಿ ತೀವ್ರ ವಾಯಿತು. ಮುಂದೆ ಇದನ್ನು ಅವರು ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯುವಲ್ಲಿ, ಕನ್ನಡ ಪತ್ರಿಕೆಗಳನ್ನು ಪ್ರಾರಂಭಿಸಿ ಮುನ್ನಡೆಸುವಲ್ಲಿ, ಅಂಕಣಗಳನ್ನು ಬರೆಯುವುದರಲ್ಲಿ ಸಾಕಾರಗೊಳಿಸಿ ಕೊಂಡರು. ಅವರ ಜನ್ಮದಿನವಾದ ಇಂದು ನಾವೆಲ್ಲರೂ ಅವರನ್ನು ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ನೆನೆದು ನಮ್ಮ ಗೌರವವನ್ನು ಸಲ್ಲಿಸೋಣ. (ಲೇಖಕರು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರು) Source link

ಕರ್ನಾಟಕ

Bhagya Lakshmi Serial: ತುಲಾಭಾರಕ್ಕಾಗಿ ಊಟ-ತಿಂಡಿ ಬಿಟ್ಟು ಕೂತ ಕಿಶನ್: ಮೀನಾಕ್ಷಿ ಪ್ಲ್ಯಾನ್ ವರ್ಕ್ ಆಗುತ್ತ? – Kannada News | Bhagya Lakshmi Kannada Serial July 2nd Episode Colors Kannada

  • July 2, 2025
  • 0 Comments

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ನಾನಾ ತಿರುವುಗಳ ಮೂಲಕ ರೋಚಕ ಸೃಷ್ಟಿಸಿದೆ. ಸದ್ಯ ಭಾಗ್ಯ ತಂಗಿ ಪೂಜಾ ಹಾಗೂ ಕಿಶನ್ ಮದುವೆ ಕಾರ್ಯ ಭರ್ಜರಿಯಿಂದ ಸಾಗುತ್ತಿದೆ. ಇದರ ಜೊತೆಗೆ ಆದೀಶ್ವರ್ ಕಾಮತ್ ಹಾಗೂ ಭಾಗ್ಯ ಗಂಡ ತಾಂಡವ್​ನ ಭೇಟಿ ಆಗಿದೆ. ಒಂದು ಪ್ರಾಜೆಕ್ಟ್ ವಿಚಾರವಾಗಿ ಇವರಿಬ್ಬರೂ ಜೊತೆಯಾಗಿದ್ದಾರೆ. ಅತ್ತ ಮೀನಾಕ್ಷಿ ಹಾಗೂ ಕನ್ನಿಕಾ ಈ ಮದುವೆಯನ್ನು ಹೇಗಾದರು ಮಾಡಿ ನಿಲ್ಲಿಸಲೇ ಬೇಕೆಂದು ಯೋಜನೆ ಹೆಣೆದಿದ್ದಾರೆ. ಇದರ ಮೊದಲ ಭಾಗವಾಗಿ ಭಾಗ್ಯ ಮನೆಯವರಿಗೆ ತುಲಾಭಾರದ ಶಾಕ್ ನೀಡಿದ್ದಾರೆ. ಪೂಜಾ-ಕಿಶನ್ ಮದುವೆಗೆ ಎಲ್ಲರ ಎದುರು ಮೀನಾಕ್ಷಿ ಒಪ್ಪಿಗೆ ಸೂಚಿಸಿದ್ದಾಳೆ. ಆದರೆ, ಇದೊಂದು ಪ್ಲ್ಯಾನ್ ಅಷ್ಟೆ. ಈ ಮದುವೆ ನಿಲ್ಲಿಸಿಯೇ ತೀರುತ್ತೇನೆ ಎಂದು ಮೀನಾಕ್ಷಿ ಹೇಳಿದ್ದಾಳೆ. ಇದಕ್ಕಾಗಿ ಕನ್ನಿಕಾ ಜೊತೆ ಸೇರಿ ಒಂದೊಂದೆ ಪ್ಲ್ಯಾನ್ ಹೆಣೆಯುತ್ತಿದ್ದಾಳೆ. ಮೊದಲಿಗೆ ಭಾಗ್ಯ ಮನೆಗೆ ಇವರಿಬ್ಬರು ಬಂದು ನಮ್ಮದೊಂದು ಹರಕೆ ಇದೆ.. ಕಿಶನ್​ನ ತುಲಾಭಾರ ಆಗಬೇಕು.. ಇದನ್ನ ಹುಡುಗಿ ಮನೆಯವರೇ ಮಾಡಬೇಕು.. ಅಷ್ಟೇ ಅಲ್ಲ ಇದು ಚಿನ್ನದಲ್ಲಿ ಆಗಬೇಕು ಎಂದು ಹೇಳಿದ್ದಾರೆ. ಇದನ್ನು ಕೇಳಿ ಭಾಗ್ಯ ಮನೆಯವರಿಗೆ ಶಾಕ್ ಆಗಿದೆ. ಅಷ್ಟೊಂದು ಚಿನ್ನ ಎಲ್ಲಿಂದ ತರೋದು.. ಹೇಗೆ ಹಣ ಗೂಡಿಸುವುದು ಎಂದು ಭಾಗ್ಯ ಮನೆಯವರಿಗೆ ಟೆನ್ಶನ್ ಶುರುವಾಗಿದೆ. ಈ ವಿಚಾರ ತಿಳಿದು ಕಿಶನ್​ಗೆ ಕೂಡ ಶಾಕ್ ಆಗಿದೆ. ಅತ್ತೆ ಇದೆಲ್ಲ ಬೇಕಂತಲೇ ಮಾಡೋದು ಎಂಬ ಮರ್ಮ ಕಿಶನ್​ಗೆ ತಿಳಿದಿದೆ. ಪೂಜಾ ಹಾಗೂ ಭಾಗ್ಯಾಗೆ ಕಾಲ್ ಮಾಡಿ, ಈ ತುಲಾಭಾರವೆಲ್ಲ ಬೇಡ.. ಸುಮ್ಮನೆ ಬರ್ಡನ್ ಆಗಬಹುದು ನಿಮ್ಗೆ ಎಂದು ಹೇಳುತ್ತಾನೆ. ಹಾಗೇನಿಲ್ಲ ಇದನ್ನೂ ಮಾಡದಿದ್ರೆ ಹೇಗೆ ಎಂದು ಭಾಗ್ಯ ಹೇಳುತ್ತಾಳೆ. ಭಾಗ್ಯ ಮನೆಯವರಿಗೆ ಚಿನ್ನದಲ್ಲಿ ತುಲಾಭಾರ ಮಾಡಿಸೋದು ತುಂಬಾ ಬರ್ಡನ್ ಆಗಬಹುದು, ಕಷ್ಟ ಆಗಬಹುದು ಎಂದು ಕಿಶನ್​ಗೆ ಗೊತ್ತಿದೆ. ಇದಕ್ಕಾಗಿ ಆತ ತೂಕ ಕಳೆದುಕೊಳ್ಳಲು ಊಟ-ತಿಂಡಿ ಬಿಟ್ಟು ಕೂತಿದ್ದಾನೆ. ಮನೆಯವರು ಊಟಕ್ಕೆ ಕರೆದರೂ ಆತ ಬರುತ್ತಿಲ್ಲ.. ಹಸಿವಿಲ್ಲ ಎಂದು ಹೇಳಿದ್ದಾನೆ. ಆದೀಶ್ವರ್ ಊಟಕ್ಕೆ ಬಾ ಎಂದು ರೂಮ್​ಗೆ ಕರೆಯಲು ಬಂದಾಗ ಕಿಶನ್ ವೈಟ್ ಮಿಶಿನ್​ನಲ್ಲಿ ತನ್ನ ತೂಕ ನೋಡುತ್ತಾ ಇರುತ್ತಾನೆ. ಇದು ಆದೀಗೆ ಅನುಮಾನ ಬಂದರೂ ಸುಮ್ಮನೆ ತಿಳಿಯದಂತೆ ಹೋಗುತ್ತಾನೆ. ಆದರೆ, ಅತ್ತ ತುಲಭಾರಕ್ಕೆ ಸುಂದರಿ ಒಂದು ಪ್ಲ್ಯಾನ್ ಮಾಡಿದ್ದಾಳೆ. ಪೂಜಾ ಕರೆದುಕೊಂಡು ಚಿನ್ನದಂತೆ ಕಾಣುವ ಪಾತ್ರೆಯನ್ನು ತಯಾರು ಮಾಡುವ ಅಂಗಡಿಗೆ ಕರೆದುಕೊಂಡು ಬಂದಿದ್ದಾಳೆ. ಇಲ್ಲಿ ತುಲಾಭಾರಕ್ಕೆ ಏನೆಲ್ಲ ಬೇಕೋ ಅದನ್ನೆಲ್ಲ ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಅತ್ತ ಒಲ್ಲದ ಮನಸ್ಸಿನಿಂದ ಪೂಜಾ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾಳೆ. ಚಿನ್ನದಂತೆ ಕಾಣುವ ಅದೇ ತೂಕವಿರುವ ಡುಪ್ಲಿಕೇಟ್ ವಸ್ತುಗಳನ್ನು ಸುಂದರಿ ಆರ್ಡರ್ ಮಾಡಿದ್ದಾಳೆ. ಇನ್ನು ತಾಂಡವ್​ನ ಬ್ಯುಸಿನೆಸ್ ಪ್ಲ್ಯಾನ್ ಕೇಳಿ ವಾವ್.. ಬ್ರಿಲಿಯೆಂಟ್.. ನಿಜವಾಗ್ಲೂ ಈ ಐಡಿಯಾ ತುಂಬಾ ಚೆನ್ನಾಗಿದೆ.. ನಾನು ಈ ಪ್ರಾಜೆಕ್ಟ್​ನ ತೆಗೋತ ಇದ್ದಾನೆ ಎಂದು ಎಂದು ಆದೀಶ್ವರ್ ಹೇಳಿದ್ದು, ಸದ್ಯ ಇವರಿಬ್ಬರು ಬ್ಯುಸಿನೆಸ್ ಪಾರ್ಟರ್ ಆಗಿದ್ದಾರೆ. ತಾಂಡವ್​ನ ಪ್ಲ್ಯಾನ್ ಮೇಲೆ ಕೋಟಿ ಕೋಟಿ ಇನ್​ವೆಸ್ಟ್ ಮಾಡಲು ಆದೀ ತಯಾರಾಗಿದ್ದಾನೆ. ನಿಮ್ಮ ಫೈಲ್ ಎಲ್ಲ ನನ್ಗೆ ಕೊಡಿ ಡೀಪ್ ಆಗಿ ಸ್ಟಡಿ ಮಾಡಬೇಕು.. ನಿಮ್ಗೆ ರಿಟರ್ನ್ ಕಾಲ್ ಮಾಡುತ್ತೇನೆ.. ತುಂಬಾ ದಿನ ಆದ ನಂತ್ರ ನಿಮ್ಮಂತ ಟ್ಯಾಲೆಂಟ್​ನ ನೋಡ್ತಾ ಇದ್ದೇನೆ ಎಂದು ಆದೀ ಹೇಳಿದ್ದಾನೆ. ಮನೆಗೆ ಹೋದ ಬಳಿಕ ಆದೀ ಪುನಃ ಈ ಐಡಿಯಾವನ್ನೆಲ್ಲ ನೋಡಿದ್ದಾನೆ. ಇದನ್ನ ನೋಡಿ ಆದೀ ಫುಲ್ ಇಂಪ್ರೆಸ್ ಆಗಿದ್ದು, ತಾಂಡವ್​ಗೆ ಕಾಲ್ ಮಾಡಿ ಅದ್ಭುತವಾಗಿದೆ ಈ ಪ್ಲ್ಯಾನ್.. ನಾಳೆ ಸಿಗೋಣ ಮುಂದಿನ ಪ್ರೊಸೆಸರ್ ಬಗ್ಗೆ ಮಾತಾಡೋಣ ಎಂದು ಹೇಳಿದ್ದಾನೆ. ಆದರೆ, ಅಚ್ಚರಿ ಎಂದರೆ ಇಲ್ಲಿ ತಾಂಡವ್, ಭಾಗ್ಯಾಳ ಗಂಡ ಎಂಬುದು ಆದೀಗೆ ತಿಳಿದಿಲ್ಲ. ಈ ಸತ್ಯ ಯಾವಾಗ ಹೊರಬೀಳುತ್ತೆ ಎಂಬುದು ನೋಡಬೇಕಿದೆ. Mokshitha Pai: ಥಾರ್​ನಲ್ಲಿ ಬೆಂಕಿ ಎಂಟ್ರಿ ಕೊಟ್ಟ ಲೇಡಿ ಟೈಗರ್ ಮೋಕ್ಷಿತಾ: ವಿಡಿಯೋ ನೋಡಿ Source link

Translate »